ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರರಿಂದ ತೆರವಾಗಿರುವ ಚನ್ನಪಟ್ಟಣ ಉಪ ಚುನಾವಣಾ ಕಣ ರಂಗೇರ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ ತಾನೇ ಅಭ್ಯರ್ಥಿ ಅಂತ ಕ್ಷೇತ್ರದ ತುಂಬೆಲ್ಲಾ ಓಡಾಡ್ತಿದ್ದಾರೆ. ಆದ್ರೆ ಮೈತ್ರಿ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗೇ ಉಳಿದಿದೆ, ಸಿಪಿ ಯೋಗೇಶ್ವರ್ ತಾನೇ ಕ್ಯಾಂಡಡೇಟ್ ಅಂತ ಓಡಾಡ್ತಿದ್ರೆ ಕುಮಾರಸ್ವಾಮಿ ನೋ ಅಂತಿದ್ದಾರೆ. ಈ ಮಧ್ಯೆ HDK ಇಂದು ಚನ್ನಪಟ್ಟಣ ಜೆಡಿಎಸ್ ಮುಖಂಡರ ಸಭೆ ನಡೆಸಿರೋದು ಕುತೂಹಲ ಕೆರಳಿಸ್ತಿದೆ…..
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನ ಕೊಟ್ಟ ಗೊಂಬೆಗಳ ನಾಡು. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಗೆದ್ದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೇಂದ್ರ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ನಡೆಯಲಿದೆ ಬೆಂಗಳೂರು ಗ್ರಾಮಾಂತರದಲ್ಲಿ ಸೋತು ಸುಣ್ಣವಾಗಿರುವ ಡಿಕೆ ಬ್ರದರ್ಸ್ ಸೇಡು ತೀರಿಸಿಕೊಳ್ಳಲು ಚನ್ನಪಟ್ಟಣ ಅಖಾಡವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. HDK ಬಂಡೆಗಳ ಕೋಟೆಗೆ ಬಂದು ಹೊಡೆದಂತೆ, ಕುಮಾರಸ್ವಾಮಿ ನಾಡಿಗೆ ಹೋಗಿ ಗೆಲ್ಲಬೇಕು ಅಂತ ಡಿಕೆಶಿ ಪಣ ತೊಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ತಾನೇ ಕೈ ಅಭ್ಯರ್ಥಿ ಅಂತ ಕಳೆದ 15 ದಿನಗಳಿಂದ ಕ್ಷೇತ್ರದ ತುಂಬೆಲ್ಲಾ ಓಡಾಡ್ತಿದ್ದಾರೆ……
ಡೆಂಗ್ಯೂ ಮಹಾಮಾರಿ ಅಬ್ಬರ: ಸರ್ಕಾರ ಎಮರ್ಜೆನ್ಸಿ ಘೋಷಣೆ ಮಾಡಲಿ: ಆರ್. ಅಶೋಕ್
ಚನ್ನಪಟ್ಟಣದ ಮಾಜಿ ಶಾಸಕ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ತಾನೇ ಮೈತ್ರಿ ಅಭ್ಯರ್ಥಿ ಅಂತ ಪ್ರಚಾರವನ್ನೇನೊ ಶುರುಮಾಡ್ಕೊಂಡಿದ್ದಾರೆ. ಆದ್ರೆ ಡಿಕೆಶಿ ಅಖಾಡಕ್ಕೆ ದುಮುಕಿರೋದ್ರಿಂದ ಕಣ ರಂಗೇರಿದೆ ಮಾಜಿ ಸಿಎಂ ಕುಮಾರಸ್ವಾಮಿ ಅಭ್ಯರ್ಥಿ ಆಯ್ಕೆಯಲ್ಲಿ ಆತುರ ಪಡೆದೆ ಮುನ್ನೆಚ್ಚರಿಕೆ ವಹಿಸ್ತಿದ್ದಾರೆ. ಈ ಬಗ್ಗೆ ಮಾತನಾಡಿದ HDK
ಅದು ಜೆಡಿಎಸ್ ಕ್ಷೇತ್ರ, ನನ್ನ ಕಾರ್ಯಕರ್ತರ ಅಭಿಪ್ರಾಯ ತಗೊಬೇಕು ಆಮೇಲೆ ಮುಂದುವರಿಬೇಕು. ನಾನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳೋಕೆ ಆಗಲ್ಲ
ನಾನು ಬಿಜೆಪಿ ಹೈಕಮಾಂಡ್, ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿಲ್ಲ. ಸದ್ಯ ಯಾರಿಗೂ ಟಿಕೆಟ್ ಫೈನಲ್ ಮಾಡಿಲ್ಲ, ಯೋಗೇಶ್ವರ್ ಅಭ್ಯರ್ಥಿ ಅಂತ ಹೇಳ್ಕೊಬೋದು ಅದೇ ಫೈನಲ್ ಅಲ್ವಲ್ಲಾ ಎಂದಿದ್ದಾರೆ ಕುಮಾರಸ್ವಾಮಿ…
ಈ ಮಧ್ಯೆಯೇ ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ HDK
ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಅಭ್ಯರ್ಥಿ ಯಾರೇ ಆದರೂ ಅವರು ಎನ್ ಡಿಎ ಅಭ್ಯರ್ಥಿ ಆಗಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ, ಎಲ್ಲರೂ ಒಮ್ಮತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಗುರಿ ಎಂದು ಮುಖಂಡರಿಗೆ ಸ್ಪಷ್ಟವಾಗಿ ಹೇಳಿದ್ದಾರಂತೆ. ಸಭೆಯಲ್ಲಿ ಜೆಡಿಎಸ್ ಕ್ಷೇತ್ರವನ್ನು ತಾವೇ ಉಳಿಸಿಕೊಳ್ಳಬೇಕು ಎಂದು ಮುಖಂಡರು ಹೇಳಿದ್ದು, ಜೆಡಿಎಸ್ ಕ್ಯಾಂಡಿಡೇಟ್ ಆಯ್ಕೆ ಮಾಡಿ ಬಿಜೆಪಿಗೆ ಕ್ಷೇತ್ರ ಬಿಟ್ಟು ಕೊಡಬೇಡಿ ಅಂತ ಒತ್ತಾಯ ಮಾಡಿದ್ದಾರಂತೆ….
ಒಟ್ನಲ್ಲಿ ಜೆಡಿಎಸ್ ಚನ್ನಪಟ್ಟಣ ಕ್ಷೇತ್ರವನ್ನು ತಾವೇ ಉಳಿಸಿಕೊಳ್ಳಲು ಒಳಗೊಳಗೆ ಗೇಮ್ ಪ್ಲಾನ್ಮಾಡ್ತಿದೆ. ಸಿಪಿ ಯೋಗೇಶ್ವರ್ ಕ್ಷೇತ್ರವನ್ನ ಮತ್ತೆ ವಶಕ್ಕೆ ಪಡೆಯಲು ತಂತ್ರ ರೂಪಿಸ್ತಿದ್ದಾರೆ. ಈ ಮಧ್ಯೆ ಡಿಕೆಶಿ ಸೇಡಿನ ಯುದ್ಧಕ್ಕೆ ಸಿದ್ಧವಾಗಿದ್ದಾರೆ. ಮೈತ್ರಿಯ ಅಭ್ಯರ್ಥಿ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದ್ದು ಡಾ.ಮಂಜುನಾಥ್ ಪತ್ನಿ ಅನುಸೂಯ ಮಂಜುನಾಥ್ ಹೆಸರು ಪ್ರಭಲವಾಗಿ ಕೇಳಿಬರ್ತಿದ್ದು ಇದಕ್ಕೆ ಸೈನಿಕನ ತಂತ್ರ ಹೇಗಿರುತ್ತೆ ಎಂಬುದನ್ನ ಕಾದುನೋಡಬೇಕಿದೆ….