ಬೆಂಗಳೂರು ದಕ್ಷಿಣ : ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿಯಲ್ಲಿ ಗೇಟ್ ಆಪರೇಟರ್ ಆಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮೇಲೆ ಕರಡಿಯೊಂದು ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.54 ವರ್ಷದ ಬೆಟ್ಟಪ್ಪ ಕರಡಿ ದಾಳಿಗೊಳಗಾದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್ ಆಪರೇಟರ್ ಕೆಲಸ ಮಾಡುತ್ತಿದ್ದರು.ಪ್ರತಿ ದಿನದಂತೆ ಇಂದು ಕೂಡ ಕರಡಿ ಸಫಾರಿಯಲ್ಲಿ ಪ್ರವಾಸಿಗರ ವಾಹನ ಬಂದಾಗ ಗೇಟ್ ತೆರೆದು ವಾಹನ ಒಳ ಬಿಡುವ ವೇಳೆ ಗೇಟ್ ಸಮೀಪದಲ್ಲೆ ಇದ್ದ ಕರಡಿ ಒಳ ಬಂದಿದೆ.
ಎರಡು ದಶಕಗಳ ಕಾಲ ಕರಡಿಗಳೊಂದಿಗೆ ಒಡನಾಟವಿದ್ದ ಬೆಟ್ಟಯ್ಯ ಕೊಲಿನಿಂದ ಹೊರ ಓಡಿಸಲು ಕರಡಿ ಬಂದಿದ್ದ ಜಾಗಕ್ಕೆ ಬಂದಿದ್ದ ಎನ್ನಲಾಗಿದೆ.ಈ ಸಮಯದಲ್ಲಿ ಗಾಬರಿಗೊಂಡ ಕರಡಿ ಬೆಟ್ಟಯ್ಯನ ಮೇಲೆ ದಾಳಿ ಮಾಡಿದೆ.ಈ ವೇಳೆ ತೀವ್ರ ಗಾಯ ಗೊಂಡ ಬೆಟ್ಟಯ್ಯನನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ತಲೆಗೆ ಬಾಯಿ ಹಾಕಿರೋ ಜಾಂಬವಂತ ತಲೆ ಭಾಗವನ್ನು ಕಚ್ಚಿ ಗಾಯಗೊಳಿಸಿದೆ.ತೊಡೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.