ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 13 ರನ್ಗಳ ಹೀನಾಯ ಸೋಲು ಅನುಭವಿಸಬೇಕಾಯಿತು. 116 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 102 ರನ್ಗಳಿಗೆ ಆಲೌಟ್ ಆಯಿತು. ಈ ಸೋಲಿನ ನಂತರ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್ ಸೋಲಿಗೆ ಕಾರಣ ತಿಳಿಸಿದ್ದಾರೆ.
Dengue cases in Karnataka: ಡೆಂಗ್ಯೂ ಆರ್ಭಟ; ರಾಜ್ಯದಲ್ಲಿಂದು 175 ಕೇಸ್ಗಳು ಪತ್ತೆ!
ಅವಮಾನಕರ ಸೋಲಿನ ನಂತರ ಮಾತನಾಡಿದ ಗಿಲ್, ‘ನಾವು ಚೆನ್ನಾಗಿ ಬೌಲ್ ಮಾಡಿದ್ದೇವು. ಆದರೆ ಫೀಲ್ಡಿಂಗ್ನಲ್ಲಿ ತಂಡ ಎಡವಿತು. ನಾವು ಸಮಯ ತೆಗೆದುಕೊಂಡು ಬ್ಯಾಟಿಂಗ್ ಆನಂದಿಸಲು ಬಯಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅರ್ಧ ಇನ್ನಿಂಗ್ಸ್ ಮುಗಿಯುವ ವೇಳೆಗೆ ನಾವು ಐದು ವಿಕೆಟ್ ಕಳೆದುಕೊಂಡಿದ್ದೇವು. ನಾನು ಕೊನೆಯವರೆಗೂ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು.
ಆದರೆ ನಾನು ಔಟಾದ ರೀತಿ ಮತ್ತು ಉಳಿದ ಬ್ಯಾಟರ್ಗಳು ಔಟಾದ ರೀತಿಯಿಂದ ನನಗೆ ತುಂಬಾ ನಿರಾಸೆಯಾಗಿದೆ. ವಾಷಿಂಗ್ಟನ್ ಸುಂದರ್ ಮೇಲೆ ಭರವಸೆ ಇಟ್ಟುಕೊಂಡಿದ್ದೇವು. ಹೀಗಾಗಿ ಕೊನೆಯವರೆಗೂ ನಿರೀಕ್ಷೆಗಳಿದ್ದವು, ಆದರೆ ನೀವು 115 ರನ್ಗಳನ್ನು ಬೆನ್ನಟ್ಟುವಾಗ 10ನೇ ಕ್ರಮಾಂಕದ ಬ್ಯಾಟ್ಸ್ಮನ್ ಮೇಲೆ ಗೆಲುವಿನ ನಿರೀಕ್ಷೆ ಇಟ್ಟರೆ, ಏನೋ ತಪ್ಪಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು