ಬೆಂಗಳೂರು:- ಕೇಂದ್ರ ಸಚಿವನ ಜವಾಬ್ದಾರಿ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
Smriti Singh: ನನ್ನ ಕನಸೆಲ್ಲಾ ನುಚ್ಚು ನೂರಾಯ್ತು: ಹುತಾತ್ಮ ಯೋಧನ ಪತ್ನಿ ಕಣ್ಣೀರು!
ತಾನು ಯಾರಿಂದಲೂ ಸರ್ಟಿಫಿಕೇಟ್ ಕೇಳಿಲ್ಲ, ಕುಮಾರಸ್ವಾಮಿಗೆ ಸರ್ಟಿಫಿಕೇಟ್ ನೀಡುವ ಪ್ರಯತ್ನವೇನೂ ಮಾಡುತ್ತಿಲ್ಲ, ಮಂತ್ರಿ-ಶಾಸಕರಿಗೆ ಸರ್ಟಿಫಿಕೇಟ್ ಕೊಡಬೇಕಿರುವುದು ಜನ ಎಂದು ಹೇಳಿದರು. ಕುಮಾರಸ್ವಾಮಿಯವರಿಗೆ ಒಬ್ಬ ಕೇಂದ್ರ ಸಚಿವನ ವ್ಯಾಪ್ತಿ ಮತ್ತು ಜವಾಬ್ದಾರಿ, ಶಾಸಕನ ವ್ಯಾಪ್ತಿ, ರಾಜ್ಯ ಸರ್ಕಾರದ ಮಂತ್ರಿಯ ವ್ಯಾಪ್ತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಇದ್ದಂತಿಲ್ಲ, ಯಾವುದಾದರೂ ಒಬ್ಬ ಸೀನಿಯರ್ ಅಧಿಕಾರಿಯ ಹತ್ತಿರ ಕೇಳಿ ತಿಳಿದುಕೊಂಡು, ಅಧ್ಯಯನ ಮಾಡಲಿ ಎಂದು ಛೇಡಿಸಿದರು.
ಸಾರ್ವಜನಿಕ ಕೆಲಸಗಳು ಎಷ್ಟೇ ಮಾಡಿದರೂ ಅವು ಮುಗಿಯಲ್ಲ, ಇವತ್ತು ಮಂಡ್ಯದ ಶಾಸಕ ರವಿಯವರು ಕೆರಗೋಡುನಲ್ಲಿ ಜನ ಸಂಪರ್ಕ ಸಭೆ ಮಾಡಿದ್ದು 3,200 ಅರ್ಜಿಗಳು ಬಂದಿವೆಯಂತೆ. ತಾನು ಕುಮಾರಸ್ವಾಮಿಯವರಿಗೆ ತಿಳಿಸಲಿಚ್ಛಿಸುವ ವಿಷಯವೇನೆಂದರೆ ಸಂಪುಟ ರಚನೆಯಾದ ಒಂದು ವರ್ಷದ ಅವಧಿಯಲ್ಲಿ ಸುಮಾರು 10,000 ಅರ್ಜಿಗಳನ್ನು ಇತ್ಯರ್ಥ ಮಾಡಿದ್ದೇವೆ ಮತ್ತು ಸುಮಾರು 1,300 ಅರ್ಜಿಗಳು ಬಾಕಿಯಿವೆ, ಈ ಪ್ರಕ್ರಿಯೆ ನಡೆಯುತ್ತಿರುತ್ತದೆ, ಕುಮಾರಸ್ವಾಮಿಯವರು ಮಂಡ್ಯ ಮತ್ತ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶವಿಟ್ಟುಕೊಂಡಿದ್ದರೆ, ಕೇಂದ್ರದಿಂದ ಘೋಷಣೆಯಾಗಿರುವ ರಾಜ್ಯದ ಯೋಜನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದರು.