ಮಂಡ್ಯ:- ಮಂಡ್ಯಕ್ಕೆ ಹೋಗಲು ಚಲುವರಾಯಸ್ವಾಮಿ ಅಪ್ಪಣೆ ಬೇಕಿಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿದ್ದಾರೆ.
ಜಿಂಬಾಬ್ವೆ ಬೌಲಿಂಗ್ ದಾಳಿಗೆ ನಲುಗಿದ ಭಾರತ: ಕೇವಲ 22 ರನ್ಗಳಿಗೆ 4 ವಿಕೆಟ್ ಪತನ
ಈ ಸಂಬಂಧ ಮಾತನಾಡಿದ ಅವರು,ತಾನು ಮಂಡ್ಯದ ಸಂಸದ, ಅಲ್ಲಿಗೆ ಹೋಗಲು ಚಲುವರಾಯಸ್ವಾಮಿಯ ಅಪ್ಪಣೆ ತೆಗೆದುಕೊಳ್ಳಬೇಕಿಲ್ಲ ಎಂದು ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ, ಅದರ ಜೊತೆಗೆ ನನ್ನನ್ನು ಮಂಡ್ಯದಿಂದ ಲೋಕಸಭೆಗೆ ಕಳಿಸಿರುವ ಜನರ ಕಷ್ಟಸುಖ ಕೇಳುವುದು ಸಹ ನನ್ನ ಕರ್ತವ್ಯವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿಯವರು ಕೇವಲ ಮಂಡ್ಯಕ್ಕೆ ಮಾತ್ರ ಸಚಿವರಲ್ಲ, ಇಡೀ ಭಾರತಕ್ಕೆ ಸಚಿವರು ಎಂದಿದ್ದಾರೆ. ಅದಕ್ಕೆ ಇಂದು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ತಾನು ಮಂಡ್ಯದ ಸಂಸದ, ಅಲ್ಲಿಗೆ ಹೋಗಲು ಚಲುವರಾಯಸ್ವಾಮಿಯ ಅಪ್ಪಣೆ ತೆಗೆದುಕೊಳ್ಳಬೇಕಿಲ್ಲ ಎಂದು ಹೇಳಿದರು.