ಬೆಂಗಳೂರು:- ಅದ್ಯಾಕೋ ಏನೋ ರಾಜಧಾನಿ ಬೆಂಗಳೂರು ಮಾರಕ ರೋಗಗಳ ಆಶ್ರಯ ತಾಣ ಅನ್ನೋ ಹೆಸರು ಪಡೆಯೋಕೆ ಮುಂದಾಯ್ತಾ ಅನ್ನೋ ಅನುಮಾನ ಕಾಡ ತೊಡಗಿದೆ. ಕೊರೊನಾ ಕೇಕೆ ಹಾಕಿ ಸಾವಿರಾರು ಅಮಾಯಕ ಜೀವಗಳನ್ನ ಬಲಿ ಪಡೆದಿದ್ದಾಯ್ತು. ಇದೀಗ ಡೇಂಘೀ ಸರದಿ ಎಂಬಂತೆ ವಾರದಲ್ಲಿ ಮೂರು ಪ್ರಾಣಕ್ಕೆ ಕುತ್ತು ತಂದಿದೆ. ಖಾಯಿಲೆ ಅಂತ ಚಿಕಿತ್ಸೆ ದಾಖಲಾದವರ ಪ್ರಾಣಪಕ್ಷಿ ಹಾರಿ ಹೋಗಿದೆ.
ಈ ಆಹಾರ ತಿನ್ನೋ ಮುನ್ನಾ ಹುಷಾರ್: ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರ!
ಹೌದು.. ಕೊರೋನಾದ ಬಳಿಕ ಬೆಂಗಳೂರು ಜನರ ನಿದ್ದೆಯನ್ನ ಮಾರಕ ಡೇಂಘೀ ಕಿತ್ತುಕೊಂಡಿದೆ. ದಿನ ಕಳೆದಂತೆ ಡೇಂಘೀ ತನ್ನ ಕಬಂಧ ಬಾಹುಗಳನ್ನ ವಿಸ್ತರಿಸುವ ಕೆಲಸ ಡೆಂಘೀ ಮಾಡ್ತಿದ್ದು, ಆರೋಗ್ಯ ಇಲಾಖೆಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡ್ತಿದೆ. ರಾಜ್ಯಾದ್ಯಂತ ಪ್ರವಾಸ ಹೊರಟಿರುವ ಮಾರಿ 6,676 ಜನರನ್ನ ಹೊಕ್ಕಿದೆ.
ಈ ಬಾರಿ ರಾಜ್ಯದಲ್ಲಿ ಡೆಂಘೀ ಕೇಸ್ ದಿನೆ ದಿನೆ ಹೆಚ್ಚಾಗ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಮೂರು ಪಟ್ಟು ದುಪ್ಪಟ್ಟಾಗಿದೆ. ಈಗಾಗಲೇ 6676 ಕೇಸ್ ಗಳು ಪತ್ತೆಯಾಗಿದ್ದು, ಈ ಪೈಕಿ ಮಕ್ಕಳಲ್ಲಿಯೇ 2ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕಳೆದ ಎರಡು ವಾರದಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಲ್ಕೈದು ಸಾವಿಗೂ ಕಾರಣವಾಗಿದೆ
ಊರೆಲ್ಲಾ ಬುದ್ದಿ ಹೇಳೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಎಂಟತ್ತು ತಿಂಗಳಿಂದ ಕಸದ ಗುಡ್ಡೆ ಬಿದ್ದಿದ್ರೂ ಕ್ಲೀನ್ ಮಾಡೋ ಮನಸ್ಥಿತಿ ಯಾರಿಗೂ ಇಲ್ಲ. ಜೊತೆಗೆ ಆವರಣದಲ್ಲೇ ಇರುವ ಪಾರ್ಕ್ ಒಳಭಾಗದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಉತ್ಪಾದನಾ ಕೇಂದ್ರವಾದಂತೆ ಕಾಣಿಸುತ್ತಿದೆ. ಇದರಿಂದಾಗಿ ಸುತ್ತಲೂ ಇರುವ ಶಾಲೆ, ಬಸ್ ಸ್ಟಾಂಡ್ ಗೆ ಬರೋ ಪ್ರಯಾಣಿಕರ ಆರೋಗ್ಯಕ್ಕೆ ಕುತ್ತು ತರುವ ರೀತಿ ಪಾಲಿಕೆ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಪಾಲಿಕೆನ ಕೇಳಿದ್ರೆ ಅವರು ಉತ್ತರ ಜನರ ಮೇಲೆ ಪ್ರಭಾವ ಬೀರುವಂತಿದೆ. ಎಲ್ಲೆಲ್ಲಿ ಸ್ವಚತೆ ಇರಲ್ವೋ ಅವರ ಮೇಲೆ ಐನೂರು ದಂಡದ ಪ್ರಯೋಗ ಅನ್ನೋ ಉತ್ತರ ನೀಡಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಶರವೇಗದಲ್ಲಿ ಓಟಕಿತ್ತಿರುವ ಡೆಂಘೀ ಆರ್ಭಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಕೂಡ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಜೊತೆಗೆ ಜನರೂ ಕೂಡ ಎಚ್ಚರಿಕೆ ಇಂದ ಇರಿ ಎಂಬ ಸೂಚನೆ ಕೂಡ ಕೊಟ್ಟಿದೆ.