ಬೆಂಗಳೂರು: ಲೋಕಸಭಾ ಚುನಾವಣೆ ನಂತ್ರ ರಾಜ್ಯ ಬಿಜೆಪಿ ಮೊದಲ ಕಾರ್ಯಕಾರಿಣಿ ಸಭೆ ನಡೆಸಿತು, ಲೋಕಸಭಾ ವಿಜಯೋತ್ಸವ, ಬಿಜೆಪಿ- ಜೆಡಿಎಸ್ ಮೈತ್ರಿ , ಪಕ್ಷ ಸಂಘಟನೆ ಸೇರಿ ಹಲವು ವಿಚಾರಗಳನ್ನು ಚರ್ಚೆ ನಡೆಸಲಾಯ್ತು. ಕಾರ್ಯಕಾರಿಣಿಯಲ್ಲಿ ಅಬ್ಬರಿಸಿದ ಕಮಲ ನಾಯಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು, ಸಿಎಂ ಸಿದ್ದರಾಮಯ್ಯ ಗೆ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗ ಪಂಥಾಹ್ವಾನ ಕೊಟ್ಟು ತಾಕತ್ತಿನ ಪ್ರದರ್ಶನಕ್ಕಿಳಿದಿದ್ದಾರೆ..….
ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಉತ್ಸಾಹ ಹೆಚ್ಚಾಗಿದೆ. 19 ಕ್ಷೇತ್ರಗಳಲ್ಲಿ ಗೆದ್ದು 9 ಕ್ಷೇತ್ರಗಳನ್ನ ಕಳೆದುಕೊಂಡಿದ್ರು ಮೈತ್ರಿ ವರ್ಕೌಟ್ ಆಗಿದೆ ಅನ್ನೋದು ಸ್ಪಷ್ಟವಾಗಿದೆ. ಜೊತೆಗೆ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದು ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿರೋದಕ್ಕೆ ಜನಾಭಿಮತ ಸಾಕ್ಷಿಯಾಗಿದೆ ಎಂಬ ಹಿನ್ನೆಲೆಯಲ್ಲಿ ಲೋಕಸಭೆ ಬಳಿಕ ಇಂದು ಅರಮನೆ ಮೈದಾನದಲ್ಲಿ ಮೊದಲ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನ ಏರ್ಪಡಿಸಿದ್ರು. ಈ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ರಾದ ಮೋಹನ್ ದಾಸ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ವೈ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ವಿ ಸೋಮಣ್ಣ,ಶೋಭಾ ಕರಂದ್ಲಾಜೆ ಸೇರಿದಂತೆ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು, ಮಂಡಳ ಅಧ್ಯಕ್ಷರು, ತಾಲೂಕು, ಜಿಲ್ಲಾ ಅಧ್ಯಕ್ಷರು ಸೇರಿ ಪಕ್ಷದ ಮುಖಂಡರು ಭಾಗಿಯಾಗಿದ್ರು…
ರೇಣುಕಾಸ್ವಾಮಿ ಕೇಸ್: ದರ್ಶನ್ʼಗೆ ಮಾಜಿ ಉಪಮೇಯರ್ ಹಣ ಕೊಟ್ಟಿದ್ಯಾಕೆ, ಏನಿದರ ಗುಟ್ಟು?
ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕ್ರಮ ಹಗರಣ ವಿಚಾರಕ್ಕೆ ನಾಗೇಂದ್ರ ತಲೆದಂಡವಾಗಿರುವ ಬೆನ್ನಲ್ಲೆ ಸದ್ಯ ಮೈಸೂರಿನಲ್ಲಿ ಮೂಡ ಹಗರಣ ಚರ್ಚೆ ಸಾಕಷ್ಟು ಕಾವು ಪಡೆದುಕೊಳ್ತಿದೆ.ಇ ಬಗ್ಗೆಯೇ ಕಾರ್ಯಕಾರಿಣಿ ಸಭೆಯಲ್ಲಿ ಹೆಚ್ಚು ಚರ್ಚೆಯಾಯ್ತು, ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯಗೆ ಸವಾಲಿನ ಮೇಲೆ ಸವಾಲಾಕಿದ್ರು. ರಾಜ್ಯದಲ್ಲಿ 19 ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಗೆದ್ದಿದ್ದು,ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 145 ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ಈಗ ವಿಧಾನಸಭಾ ಚುನಾವಣೆ ನಡೆದ್ರು 150 ಕ್ಕೂ ಹೆಚ್ಚು ಸ್ಥಾನ ಗೆಲ್ಲೋದು ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೊ ಅಷ್ಟೆ ಸತ್ಯ. ಲೊಕಸಬಾ ಸಭೆ ಚುನಾವಣೆಯಲ್ಲಿ ಸ್ವತಃ 17 ಸಚಿವರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿದೆ. ಕಾಂಗ್ರೆಸ್ ಶಾಸಕರೆ ಗ್ಯಾರಂಟಿ ನಿಲ್ಲಿಸಿ ಅಭಿವೃದ್ಧಿಗೆ ಹಣ ಕೊಡಿ ಅಂತ ಕೇಳ್ತಿದ್ದಾರೆ. ಸಿದ್ದರಾಮಯ್ಯ ನವರೇ ನಿಮಗೆ ತಾಕತ್ತಿದ್ರೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ಅಂತ ಸವಾಲು ಹಾಕಿದ್ರು BSY….
ಇನ್ನೂ ಕಾರ್ಯಕಾರಿಣಿ ಸಭೆಗು ಮುನ್ನಾ ಮಾತನಾಡಿದ ಆರ್ ಅಶೋಕ್ ಹಾಗೂ ಸಿಟಿ ರವಿ ಸರ್ಕಾರದ ವಿರುದ್ದ ವಾಕ್ಸಮರ ನಡೆಸಿದ್ರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣವರ್ಗಾವಣೆಯ ತನಿಖೆ ನಡೆಯುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ ತವರೂರಲ್ಲಿ ಮೂಡ ಹಗಣರ ನಡೆದಿದ್ದು ಸಿಬಿಐ ತನಿಖೆಗೆ ನೀಡಬೇಕಂತ ಒತ್ತಾಯಿಸಿದ್ರು..
ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಮುಂಜಾಗ್ರತೆ ಕ್ರಮ ವಹಿಸದಿದ್ರೆ BBMPಯಿಂದ ಫೈನ್!
ರಾಜ್ಯಾದ್ಯಕ್ಷ ವಿಜಯೇಂದ್ರ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನವರು 9 ಸಂಸದರು ಗೆದ್ರು ಸಹಾ 142 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಲೀಡ್ ಪಡೆದಿದೆ.ನಾವು ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ, ಬೊಮ್ಮಾಯಿ ಉತ್ತಮ ಆಡಳಿತ ಕೊಟ್ಟಿದ್ರು ಕಾಂಗ್ರೆಸ್ ನಾಯಕರು ಅವತ್ತು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಪೊಳ್ಳು ಬರವಸೆಗಳನ್ನ ಕೊಟ್ಟು ಅಧಿಕಾರಕ್ಕೆ ಬಂದ್ರು. ಅದ್ರೆ ಅಧಿಕಾರಕ್ಕೆ ಬಂದಮೇಲೆ ಅವರ ಪೊಳ್ಳು ಬರವಸೆಗಳೆಲ್ಲಾ ನುಚ್ಚು ನೂರಾಗಿದ್ದು ಕಾಂಗ್ರೆಸ್ ನ ಮುಖವಾಡ ಕಳಚಿ ಬಿದ್ದಿದೆ ಅಂತಾ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರು..
ಬಿಜೆಪಿ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ ಬಿಜೆಪಿಯವರಿಗೆ ಏನು ವಿಷಯ ಇಲ್ಲ. RSS ಹೇಳಿದಂತೆ ಚಳುವಳಿ ಮಾಡ್ತಾರೆ ಮೂಡಾದಲ್ಲಿ ಏನು ವಿಷಯ ಇದೆ, ನಮ್ಮ 3.16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಸೈಟ್ ವಾಪಸ್ ತೆಗೆದುಕೊಂಡು ಪರಿಹಾರ ನೀಡಲಿ, ನಮ್ಮ ಕೇಸ್ ಪ್ರತ್ಯೇಕ, ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದಾರೆ ಅವರು.
ನಾವು 50-50 ನಿಯಮ ಒಪ್ಪಿಕೊಂಡಿದ್ದೇವೆ, ನಾವೇನು ವಿಜಯನಗರದ 3-4 ಹಂತದಲ್ಲಿಕೊಡಿ ಎಂದು ಕೇಳಿಲ್ಲ.
ನನಗೆ 62 ಕೋಟಿ ಪರಿಹಾರ ಕೊಟ್ಟು ಬಿಡಲಿ ಎಂದು ಟಕ್ಕರ್ ಕೊಟ್ಟಿದ್ದಾರೆ ಸಿಎಂ….
ಒಟ್ನಲ್ಲಿ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಸರ್ಕಾರದ ವಿರುದ್ದ ಹೋರಾಟದ ಪ್ಲಾನ್ ರೂಪಿಸಿದೆ. ಮೈತ್ರಿ ಗಟ್ಟಿಗೊಳಿಕೊಳ್ಳೋದ್ರ ಜೊತೆ ಸ್ಥಳೀಯ ಸಂಸ್ಥೆಗಳು ಹಾಗೂ ಬಿಬಿಎಂಪಿ ಚುನಾವಣೆ ಗೆಲ್ಲೋದೆ ಅಜೆಂಡವಾಗಿದೆ. ಮೂಡಾ ಹಗರಣವನ್ನೇ ಟಾರ್ಗೆಟ್ ಮಾಡ್ತಿರುವ ಕಮಲ ಪಡೆ ಸರ್ಕಾರವನ್ನ ಕಟ್ಟಿಹಾಕಲು ಅಸ್ತ್ರ ಹೂಡಿದೆ ಬಿಜೆಪಿ ಆರೋಪಕ್ಕೆ ಸರ್ಕಾರ ಯಾವ ರೀತಿ ಟಕ್ಕರ್ ಕೊಡುತ್ತೆ ಎಂಬುದನ್ನ ಕಾದುನೋಡಬೇಕಿದೆ……