ಚಾಮರಾಜನಗರ: ಒಂದೇ ದಿನ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ವಾಹನ ಸವಾರರಿಗೆ ಗಂಭೀರ ಗಾಯಗೊಂಡಿರುವ ಘಟನೆ ಹನೂರಿನಲ್ಲಿ ನಡೆದಿದೆ. ಹನೂರು ಪಟ್ಟಣದ ಹೊರವಲಯದ ಹುಲುಸುಗುಡ್ಡೆ ಬಳಿ ಅಪಘಾತ ಜರುಗಿದೆ. ಕಾರು ಹಾಗೂ ಬೈಕ್ ನಡುವೆ ರಸ್ತೆ ಅಪಘಾತವಾಗಿ ಕಾರು ಹಳ್ಳಕ್ಕೆ ಪಲ್ಟಿಯಾದರೆ ಬೈಕ್ ಸವಾರನ ಕಾಲು ತೀವ್ರ ಪೆಟ್ಟಾಗಿದೆ. ಬೈರನಾಥ ಗ್ರಾಮದ ಮಹದೇವಪ್ಪ(60) ಎಂಬಾತನಿಗೆ ತೀವ್ರ ಪೆಟ್ಟಾಗಿರುವುದಾಗಿದೆ.
ಮಹದೇಶ್ವರ ಬೆಟ್ಟ ದಿಂದ ಕಾರು ಹಾಗೂ ಕಣ್ಣೂರಿನಿಂದ ಹನೂರಿನತ್ತ ಆಗಮಿಸುತ್ತಿದ್ದ ಬೈಕ್ ಸವಾರ ನಡುವೆ ಈ ಅವಘಡ ಸಂಭವಿಸಿದೆ.ಇನ್ನು ಈ ಘಟನೆಯಲ್ಲಿ ರಸ್ತೆ ಸಮೀಪದ ಹಳ್ಳಕ್ಕೆ ಕಾರು ಪಲ್ಟಿಯಾದರೆ ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿ ಸಮೀಪದ ಹೋಲಿ ಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ಕೊಳ್ಳೇಗಾಲ ಹನೂರು ಮುಖ್ಯ ರಸ್ತೆಯ ಕರ್ನಾಟಕ ಗೃಹ ಮಂಡಳಿ ಬಡಾವಣೆ ಹತ್ತಿರ ಅಪರಿಚಿತ ವಾಹನವು ಟಿವಿಎಸ್ ಎಕ್ಸೆಲ್ ವಾಹನ ಸವಾರನಿಗೆ ಅಪಘಾತ ಅಪಘಾತ ಮಾಡಿ ಕೊಳ್ಳೇಗಾಲದ ಕಡೆ ಪರಾರಿಯಾಗಿರುತ್ತದೆ .ಕೆ ಎ 10 ಎಲ್ 69 81 ಟಿವಿಎಸ್ ಎಕ್ಸೆಲ್ ಬೈಕ್ ಸವಾರ ಗೋವಿಂದರಾಜು ಹನೂರು ಟೌನಿನ ನಿವಾಸಿ ಎಂದು ತಿಳಿದು ಬಂದಿರುತ್ತದೆ.
ಗಾಯಾಳು ಗೋವಿಂದರಾಜ್ ಅವರಿಗೆ ಅಪಘಾತ ಮಾಡಿದ ಪರಿಣಾಮ ತಲೆಯ ಭಾಗ ಹಾಗೂ ಇನ್ನಿತರ ಕಡೆ ರಕ್ತ ಗಾಯಗಳಾಗಿದ್ದು ಗಾಯಾಳುವನ್ನು 108 ಆಂಬುಲೆನ್ಸ್ ನಲ್ಲಿ ಹೋಲಿ ಕ್ರಾಸ್ ಆಸ್ಪತ್ರೆಗೆ ರವಾನಿಸಿಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹನೂರು ಪೋಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.