ಮಂಡ್ಯ: KRS ಡ್ಯಾಂ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಹೆಚ್.ಎನ್.ರವೀಂದ್ರ ಪ್ರತಿಕ್ರಿಯೇ ನೀಡಿದ್ದಾರೆ. ಟ್ರಯಲ್ ಬ್ಲಾಸ್ಟ್ ಗೆ ನಮ್ಮ ಅಸಮಾಧಾನ ಇದೆ. KRS ಡ್ಯಾಂ ನ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ಮಾಡಬಾರದು ಎಂಬುದು ಜಿಲ್ಲೆಯ ಜನರ ಅಭಿಪ್ರಾಯ. ಟ್ರಯಲ್ ಬ್ಲಾಸ್ಟ್ ಮಾಡುವ ಅವಶ್ಯಕತೆಯೂ ಇಲ್ಲ, ಟ್ರಯಲ್ ಬ್ಲಾಸ್ಟ್ ನಲ್ಲೇ ಡ್ಯಾಂ ಒಡೆದು ಹೋದ್ರೆ ಏನು ಮಾಡೋದು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಟ್ರಯಲ್ ಬ್ಲಾಸ್ಟ್ ಬೇಕು ಎಂಬುದು ನ್ಯೂಕ್ಲಿಯರ್ ಬಾಂಬ್ ಟೆಸ್ಟ್ ಮಾಡಲು ಬಗ್ಗೆ ಬಾಂಬೆ ಮೇಲೆ ಹಾಕಿ ನೋಡೋಣ ಅನ್ನೋ ತರ ಆಯ್ತು ಎಂದು ಕಿಡಿಕಾರಿದರು. ಬಾಂಬ್ ನ ತೀವ್ರತೆ ಬಗ್ಗೆ ಗೊತ್ತಿದೆ, ಆದರೂ ಸಹ ಟ್ರಯಲ್ ಬ್ಲಾಸ್ಟ್ ಎಂಬುದು ಸರಿಯಲ್ಲ, ಬೇರೆ ಕಡೆ ಬೇಕಾದರೆ ಪ್ರಯೋಗ ಮಾಡಲಿ. ಟ್ರಯಲ್ ಬ್ಲಾಸ್ಟ್ ಮಾಡುವುದು ಸೂಕ್ತ ಅಲ್ಲ, ಒಂದು ವೇಳೆ ಟ್ರಯಲ್ ಬ್ಲಾಸ್ಟ್ ಮಾಡಿದರೆ ನಾವು ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ಕೈಗುಳಿ ಕೆಲಸ ಮಾಡಲು ಬಿಟ್ಟಿದ್ರೆ ಇವಾಗ ಎಲ್ಲ ನೆಟ್ಟಗಿರೋದು, ಕೈಗುಳಿಯವರನ್ನ ಹಿಡಿಸಿ ಇವಾಗ ಅಭಿವೃದ್ಧಿಗೆ ಗಣಿಗಾರಿಕೆ ಬೇಕು ಅಂತಿದ್ದಾರೆ, ಟ್ರಯಲ್ ಬ್ಲಾಸ್ಟ್ ಸರಿಯಲ್ಲ. ಆಗೊಂದು ವೇಳೆ ಮಾಡಿದರೆ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಕೊಡ್ತೇನೆ. ಟ್ರಯಲ್ ಬ್ಲಾಸ್ಟ್ ಗೆ ನೂರಕ್ಕೆ ನೂರರಷ್ಟು ವಿರೋಧ ಮಾಡ್ತೇನೆ. ಈ ವಿಷಯವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತರುತ್ತೇನೆಂದು ಹೇಳಿದರು.