ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ರೋಡ್ ನಲ್ಲಿ ಒಂದು ಸಣ್ಣ ಗಾಡಿ ಕೆಟ್ಟು ನಿಂತ್ರೇ ಕಿಲೋ ಮೀಟರ್ ಗಟಲ್ಲೇ ಟ್ರಾಫಿಕ್ ಜ್ಯಾಮ್ ಆಗುತ್ತೆ.. ಅತಂಹದ್ರಲ್ಲಿ ಒಂದುವರೆ ವರ್ಷಗಳಿಂದ ಈ ರೋಡ್ ಸಂಪೂರ್ಣವಾಗಿ ಕ್ಲೋಸ್ ಆಗಿ ಹೊಸ ರೈಲ್ವೇ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಇಲ್ಲಿನ ಎರಡು ಪ್ರಮುಖ ಏರಿಯಾದ ಜನ ಅನುಭವಿಸ್ತಿರೋ ಕಷ್ಟ ಅಷ್ಟಿಷ್ಟಲ್ಲ. ಕಾಮಗಾರಿ ಮುಗಿಯುತ್ತೆ, ಹೊಸ ಬ್ರಿಡ್ಜ್ ಆಗುತ್ತೆ ಅಂತಾ ಕಾಯ್ತರೋ ಇಲ್ಲಿನ ಜನರು ಕಾಮಗಾರಿಯ ವೇಗಕ್ಕೆ ಸಾಕಾಗಿಬಿಟ್ಟಿದ್ದಾರೆ. ಯಾವುದು ಈ ರೋಡ್ ಏನ್ ಪ್ರಾಬ್ಲಂ ಆಗ್ತಿದೆ ಅಂತೀರಾ ಈ ಸುದ್ದಿ ನೋಡಿ..
ಜುಲೈ 6ಕ್ಕೆ ಸಿಎಂ, ಡಿಸಿಎಂರಿಂದ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರ ಭೇಟಿ
ಯೆಸ್, ವಿಜಯನಗರದಿಂದ ಗೌರಿಪಾಳ್ಯ, ಪಾದರಾಯನಪುರ, ಜೆ ಜೆ ಆರ್ ನಗರಕ್ಕೆ ಇರೋ ಮುಖ್ಯ ರಸ್ತೆಯಲ್ಲಿ ಹಳೆಯದಾದ ರೈಲ್ವೇ ಬ್ರಿಡ್ಜ್ ಇತ್ತು..ಅದನ್ನ ಸಂಪೂರ್ಣವಾಗಿ ಕೆಡವಿ ಹೊಸದಾಗಿ ಮೇಲ್ಸೆತುವೆ ಮಾಡೋ ಕಾಮಗಾರಿಗೆ ಸರ್ಕಾರ ಚಾಲನೆ ನೀಡಿ ಒಂದುವರೆ ವರ್ಷ ಕಳೆದಿದೆ.. ಅದ್ರೇ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದ್ದು ಜನ ಕಳೆದ ಒಂದೂವರೆ ವರ್ಷದಿಂದ ಯಾವಾಗಪ್ಪ ಇವ್ರು ಇಲ್ಲಿ ಬ್ರಿಡ್ಜ್ ಮಾಡ್ತಾರೆ ಅಂತಿದ್ದಾರೆ…
ವಿಜಯನಗರ ಮತ್ತು ಜೆ ಜೆ ಆರ್ ನಗರದ ಮುಖ್ಯ ರಸ್ತೆ ಇದಾಗಿದ್ದು, ಈಗ ಸರಿಸುಮಾರು ೩ ಕಿಲೋ ಸುತ್ತಿ ಈ ಏರಿಯಾಗಳಿಗೆ ಹೋಗಬೇಕಾಗಿದೆ..ಜೊತೆಗೆ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು ವಿಧಿ ಇಲ್ಲದೇ ರೈಲ್ವೇ ಹಳಿಯನ್ನ ದಾಟಬೇಕಾಗಿದೆ.. ಇದರಿಂದಾಗಿ ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಅಂತಿದ್ದಾರೆ ಇಲ್ಲಿನ ಜನ..
ಇನ್ನೂ ರೋಡ್ ಆಗದೇ ಇರೋದ್ರಿಂದ ಸುತ್ತಮುತ್ತಲಿನ ರೋಡ್ ಗಳು ಸಹ ಟ್ರಾಫಿಕ್ ಕಿರಿಕಿರಿಯಾಗ್ತಿದೆ.. ಬೆಳಗ್ಗೆ ಸ್ಕೂಲ್ ಕೆಲಸಕ್ಕೆ ಹೋಗುವರು ಕಷ್ಟ ಪಡೋ ಪರಿಸ್ಥಿತಿ ಆಗಿದೆ..ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು, ಆಗ್ತಿರೋ ಸಮಸ್ಯೆಗಳನ್ನು ಬಗೆಹರಿಸಬೇಕು, ಕೈ ಶಾಕಸರಾದ ಕೃಷ್ಣಪ್ಪ ಮತ್ತು ಸಚಿವ ಜಮೀರ್ ಅಹಮದ್ ಈ ಕಡೆ ಗಮನ ಹರಿಸಿದ್ರೇ ಕೆಲಸ ಬೇಗ ಆಗುತ್ತೆ ಅಂತಿದ್ದಾರೆ ಇಲ್ಲಿನ ಜನರು..
ಒಟ್ನಲ್ಲಿ, ಇದ್ದ ಹಳೆಯ ಬ್ರೀಡ್ಜ್ ತೆರವು ಮಾಡಿ ಹೊಸ ಬ್ರೀಡ್ಜ್ ಕಾಮಗಾರಿ ಶುರುವಾದಾಗ ಇಲ್ಲಿನ ಜನ ಹೊಸ ಬ್ರಿಡ್ಜ್ ಅಗುತ್ತೆ ಅಂತಾ ಸಂತೋಷಗೊಂಡಿದ್ರು. ಅದ್ರೇ ಕಾಮಗಾರಿ ನಡೆಯುತ್ತಿರೋ ರೀತಿ ನೋಡಿ ಯಾವಾಗಪ್ಪ ಇದು ಮುಗಿದು ನಮಗೆ ನಮ್ಮ ರೋಡ್ ಸಿಗುತ್ತೆ ಅಂತಿದ್ದಾರೆ…