ಬೆಂಗಳೂರು: ಒಕ್ಕಲಿಗಸಮುದಾಯದಲ್ಲಿಸಂಚಲನ ಹುಟ್ಟುಹಾಕಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾಚಣೆ ಇಂದು ನಡೆದಿದ್ದು ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿಸಿರುವುದರಿಂದ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆ ಆಗಿದ್ದಾರೆ . ಈ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ ನೋಡೋಣ ಬನ್ನಿ..
MUDA Site Scandal: ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಗೃಹಸಚಿವ ಜಿ. ಪರಮೇಶ್ವರ್
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಆಯ್ಕೆ ಆಗಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರು ಆಯ್ಕೆ ಆಗಿದ್ದಾರೆ ಒಬ್ಬರು ಆರ್. ಪ್ರಕಾಶ್ ಹಾಗೂ ಮತ್ತೋರ್ವರಾಗಿ ರಾಘವೇಂದ್ರ ಅವರು ಆಯ್ಕೆ ಆಗಿದ್ದಾರೆ
ಇನ್ನುಳಿದ ಹಾಗೆ ಪ್ರಧಾನ ಕಾರ್ಯದರ್ಶಿಯಾಗಿ ಸಿ.ದೇವರಾಜ್ ಆಯ್ಕೆಗೊಂಡಿದ್ದು ಆ ನಂತರ ಸಹಾಯಕ ಕಾರ್ಯದರ್ಶಿಯಾಗಿ ಆರ್. ಹನುಮಂತರಾಯಪ್ಪ ಆಯ್ಕೆಗೊಂಡಿದ್ದಾರೆ. ಇನ್ನೂ ಖಜಾಂಚಿಯಾಗಿ ಎಂ.ಎಸ್. ಉಮಾಪತಿ ಅವರು ಆಯ್ಕೆ ಆಗಿದ್ದಾರೆ.