ದಕ್ಷಿಣ ಆಫ್ರಿಕಾ ಎದುರು ಜೂನ್ 29ರಂದು ಬಾರ್ಬೆಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 7 ರನ್ಗಳ ಜಯ ದಾಖಲಿಸಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ಸ್ ಎನಿಸಿದ ಟೀಮ್ ಇಂಡಿಯಾ, ಇದೀಗ ಬಾರ್ಬೆಡೋಸ್ ಹವಾಮಾನ ಕೊಂಚ ತಿಳಿಯಾಗುತ್ತಿದ್ದಂತೆಯೇ ಬಿಸಿಸಿಐ ವ್ಯವಸ್ಥೆ ಮಾಡಿದ್ದ ಚಾರ್ಟರ್ ವಿಮಾನದ ಮೂಲಕ ಟೀಮ್ ಇಂಡಿಯಾ ತವರಿಗೆ ಗುರುವಾರ ಹಿಂದಿರುಗಿದೆ.
ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿರಲಿಲ್ಲ: ಈ ಮಾತನ್ನ ಹೇಳಿದ್ಯಾರು?
ವೆಸ್ಟ್ ಇಂಡೀಸ್ನಲ್ಲಿ ಫೈನಲ್ ನಡೆದಿದ್ದ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೈನಲ್ ವೀಕ್ಷಣೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಸಂಸತ್ ಅಧಿವೇಶ ಕೂಡ ಚಾಲ್ತಿಯಲ್ಲಿರುವುದರಿಂದ ಚಾಂಪಿಯನ್ಸ್ ಟೀಮ್ ಇಂಡಿಯಾಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಶುಭಾಶಯ ಕೋರಿದ್ದರು ಇದೀಗ ರೋಹಿತ್ ಶರ್ಮಾ ಸಾರಥ್ಯ ಭಾರತ ತಂಡ ಪ್ರಧಾನಿಯವರನ್ನು ಟ್ರೋಫಿಯೊಂದಿಗೆ ಭೇಟಿಯಾಗಿದ್ದಾರೆ.
ಇಂದು ಮುಂಜಾನೆ ದೆಹಲಿಗೆ ಬಂದಿಳಿದಿರುವ ಭಾರತ ತಂಡವು ಇಂದು ಮುಂಬೈನಲ್ಲೆ ವಿಜಯಯಾತ್ರೆ ನಡೆಸಲಿದೆ. ಓಪನ್ ಬಸ್ನಲ್ಲಿ ನಡೆಯಲಿರುವ ಈ ರೋಡ್ ಶೋ ಮುಂಬೈನ ನಾರಿಮನ್ ಪಾಯಿಂಟ್ನಲ್ಲಿರುವ ಏರ್ ಇಂಡಿಯಾ ಕಟ್ಟಡದಿಂದ ಪ್ರಾರಂಭವಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿದು ಬಂದಿದೆ.