ಬೆಂಗಳೂರು: ರೈಲ್ವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರ್ಕಾಕುಲಂ – ಬೆಂಗಳೂರು ನಡುವೆ ಸಂಚಾರ ನಡೆಸುವ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನೈರುತ್ಯ ರೈಲ್ವೆ ವಲಯ, ಸೇಲಂ ವಿಭಾಗದಲ್ಲಿ ಸುರಕ್ಷತೆ ಸಂಬಂಧಿತ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ದಕ್ಷಿಣ ರೈಲ್ವೇ ಇಂಟರ್ಸಿಟಿ ಮಾರ್ಗ ಬದಲಾವಣೆ ಮಾಡಿ ಬದಲಿ ಮಾರ್ಗ ಹಾಗೂ ವೇಳಾಪಟ್ಟಿಯನ್ನು ನೀಡಿದೆ ಎನ್ನುತ್ತಾರೆ.
ಪೋಷಕರೇ ಎಚ್ಚರ, ಹಸುಗೂಸುಗಳು, ಮಕ್ಕಳೇ ಟಾರ್ಗೆಟ್ ಆಗಿದೆ ಡೆಂಘಿ: ಮಕ್ಕಳ ತಜ್ಞೆ ಹೇಳೋದೇನು?
ಎರ್ನಾಕುಲಂ – ಬೆಂಗಳೂರು ಇಂಟರ್ಸಿಟಿ
ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ಜುಲೈ 4, 6, 7, 9, 10, 11, 13, 14, 15, 16, 17, 18, 20, 21, 22, 23, 24, 25, 27, 28 ಹಾಗೂ 30 ರಂದು ಎರ್ನಾಕುಲಂನಿಂದ ಹೊರಡುತ್ತದೆ. ಪೊದನೂರು ಜಂಕ್ಷನ್, ಇರುಗೂರ್ ಮತ್ತು ಸುರತ್ಕಲ್ ನಿಲ್ದಾಣಗಳ ಮೂಲಕ ತೆರಳುತ್ತದೆ. ಮಾರ್ಗದಲ್ಲಿ ಕೊಯಮತ್ತೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೋದನೂರು ಜಂಕ್ಷನ್ನಲ್ಲಿ ಹೆಚ್ಚುವರಿ ನಿಲುಗಡೆಯನ್ನು ಒದಗಿಸಲಾಗಿದೆ.
ಬೆಂಗಳೂರು ಎರ್ನಾಕುಲಂ ಇಂಟರ್ಸಿಟಿ
ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಇಂಟರ್ಸಿಟಿ ಎಕ್ಸ್ಪ್ರೆಸ್ ಜುಲೈ 7, 8, 10, 14, 15, 17, 21, 22, 24 ಹಾಗೂ 28 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುತ್ತದೆ ಇರುಗೂರ್, ಪೊದನೂರ್ ನಿಲ್ದಾಣಗಳ ಮೂಲಕ ಸಂಚರಾ ನಡೆಸಲಿದೆ. ಕೊಯಮತ್ತೂರು ನಿಲ್ದಾಣಕ್ಕೆ ತೆರಳುವುದಿಲ್ಲ.
- ರೈಲು ಸಂಖ್ಯೆ 06295 ಬೆಂಗಳೂರು-ಪಂಢರಪುರ ವಿಶೇಷ ಎಕ್ಸ್ಪ್ರೆಸ್ ಅನ್ನು ಜುಲೈ 5 ಮತ್ತು 7 ರಂದು ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 06296 ಪಂಢರಪುರ-ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ಅನ್ನು ಜುಲೈ 6 ಮತ್ತು 8 ರಂದು ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 06297 ಬೆಂಗಳೂರು-ಪಂಢರಪುರ ವಿಶೇಷ ಎಕ್ಸ್ಪ್ರೆಸ್ ಅನ್ನು ಜುಲೈ 6 ರಂದು ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 06298 ಪಂಢರಪುರ – ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ಅನ್ನು ಜುಲೈ 7 ರಂದು ರದ್ದುಗೊಳಿಸಲಾಗಿದೆ.
Bengaluru: LED ಲೈಟ್ ವಿರುದ್ಧ ಕಾರ್ಯಾಚರಣೆಗೆ ಇಳಿದ ಸಂಚಾರಿ ಪೊಲೀಸ್;1500ಕ್ಕೂ ಹೆಚ್ಚು ಪ್ರಕರಣ ದಾಖಲು!
ರೈಲುಗಳ ರದ್ದು ವಿಸ್ತರಣೆ
ಗುಂಟೂರು ವಿಭಾಗದಲ್ಲಿ ನಡೆಯುತ್ತಿರುವ ಸುರಕ್ಷತಾ ಸಂಬಂಧಿತ ಕಾಮಗಾರಿ ಹಿನ್ನೆಲೆ ಹುಬ್ಬಳ್ಳಿ ವಿಜಯವಾಡ ರೈಲನ್ನು ವಿಸ್ತರಣೆ ಮಾಡಲಾಗಿದೆ.
- ರೈಲು ಸಂಖ್ಯೆ 17329 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್ಪ್ರೆಸ್ ಜುಲೈ 31, 2024 ರವರೆಗೆ ರದ್ದು.
- ರೈಲು ಸಂಖ್ಯೆ 17330 ವಿಜಯವಾಡ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ಆಗಸ್ಟ್ 1, 2024 ರವರೆಗೆ ರದ್ದು.