ಕೊಪ್ಪಳ:- ಕೊಪ್ಪಳದಲ್ಲಿ ಕರಡಿ ಕಾಟ ಹೆಚ್ಚಾಗಿದ್ದು, ಜನತೆ ಕಂಗಾಲಾಗಿದ್ದಾರೆ. ಸರ್ಕಾರ ಅನೇಕ ತಿಂಗಳ ಹಿಂದೆಯೇ ಕರಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿದ್ದರು ಅದು ಆರಂಭವಾಗದೇ ಇರುವುದೇ ಕರಡಿ ಹಾವಳಿ ಹೆಚ್ಚಾಗಲು ಕಾರಣ ಅಂತಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದ ವಿಜಯಲಕ್ಷ್ಮಿ… ಪತಿ ದರ್ಶನ್ ಬಗ್ಗೆ ಹೇಳಿದ್ದೇನು!?
ರಾಜ್ಯದಲ್ಲಿ ಕಲ್ಲು ಬಂಡೆಯ ಬೆಟ್ಟ ಗುಡ್ಡಗಳ ಪ್ರದೇಶ ಇರುವುದು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ. ಇಲ್ಲಿನ ಬೆಟ್ಟ ಗುಡ್ಡಗಳು ಗುಹೆಗಳ ರೀತಿಯಲ್ಲಿ ಇರೋದರಿಂದ ಕರಡಿ ಮತ್ತು ಚಿರತೆ ಸೇರಿದಂತೆ ಕೆಲ ಪ್ರಾಣಿಗಳ ವಾಸಸ್ಥಾನಕ್ಕೆ ಹೇಳಿ ಮಾಡಿಸಿದಂತಿವೆ. ಇದೇ ಕಾರಣಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಕರಡಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಜನವಸತಿ ಬೆಳೆದಂತೆ ಅರಣ್ಯ ಪ್ರದೇಶದಲ್ಲಿ ಆಹಾರ ಮತ್ತು ನೀರು ಸಿಗದೇ ಇರೋದರಿಂದ ಮತ್ತು ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರಿಂದ, ಕರಡಿಗಳು ಬೆಟ್ಟ ಗುಡ್ಡವನ್ನು ಬಿಟ್ಟು ನಾಡಿನತ್ತ ಬರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ.
ಜಿಲ್ಲೆಯ ಗಂಗಾವತಿ ಮತ್ತು ಕೊಪ್ಪಳ ತಾಲೂಕಿನ ಅನೇಕ ಕಡೆ ಕರಡಿ ಕಾಟ ಹೆಚ್ಚಾಗಿದೆ. ಕನಕಗಿರಿ ತಾಲೂಕಿನ ರಾಮಪುರದಲ್ಲಿ ವ್ಯಕ್ತಿಯೋರ್ವನ ಮೇಲೆ ಕರಡಿ ದಾಳಿ ನಡೆದಿರುವ ಪ್ರಕರಣ ಕೆಲ ದಿನಗಳ ಹಿಂದೆ ನಡೆದಿದೆ. ಯಲಬುರ್ಗಾ ತಾಲೂಕಿನ ಚಿಲಕಮುಖಿ, ಹಿರೇವಂಕಲಕುಂಟಾ ಸೇರಿದಂತೆ ಅನೇಕ ಕಡೆ ಕರಡಿಗಳು ಪ್ರತ್ಯಕ್ಷವಾಗಿ ಜನರ ಭಯವನ್ನು ಹೆಚ್ಚಿಸಿವೆ. ರಾತ್ರಿ ಸಮಯದಲ್ಲಿ ಯಾರಾದ್ರು ಏಕಾಂಗಿಯಲ್ಲಿ ಅಡ್ಡಾಡುತ್ತಿರುವುದನ್ನು ಕಂಡರೆ, ಕರಡಿಗಳು ಪ್ರಾಣಭಯದಿಂದ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ.
ಇನ್ನು ಕರಡಿ ಕಾಟದಿಂದ ಬೆಟ್ಟಗುಡ್ಡಗಳ ಸುತ್ತಮುತ್ತಲಿನ ರೈತರು ಕಂಗಾಲಾಗಿದ್ದಾರೆ. ರಾತ್ರಿ ಸಮಯದಲ್ಲಿ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಕರಡಿಗಳು ಕಲ್ಲಂಗಡಿ, ಪಪ್ಪಾಯ ಸೇರಿದಂತೆ ಕೆಲ ಬೆಳೆಗಳನ್ನು ತಿಂದು ಹೋಗುತ್ತಿವೆ. ಹೀಗಾಗಿ ರೈತರು ಅನೇಕ ತಿಂಗಳ ಕಾಲ ಕಷ್ಟಪಟ್ಟು ಬೆಳೆಯುತ್ತಿದ್ದ ಬೆಳೆ ಕೈಗೆ ಬರುವ ಮುನ್ನವೇ ಕರಡಿಗಳ ಬಾಯಿಗೆ ಆಹಾರವಾಗುತ್ತಿದೆ. ಹೀಗಾಗಿ ರೈತರು ಸೇರಿದಂತೆ ಜಿಲ್ಲೆಯ ಜನರು ಕರಡಿ ಸಂರಕ್ಷಿತ ಪ್ರದೇಶ ಅಂತ ಘೋಷಿಸಬೇಕು. ಅವುಗಳನ್ನು ಒಂದಡೆ ಬಿಟ್ಟು, ಅವು ನಾಡಿನತ್ತ ಬರದಂತೆ ತಡೆಯಬೇಕು ಅನ್ನೋ ಆಗ್ರಹವನ್ನು ಅನೇಕ ವರ್ಷಗಳಿಂದ ಮಾಡುತ್ತಲೇ ಇದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲೆಯ ಅರಣ್ಯಾಧಿಕಾರಿಗಳು ಕಳೆದ ವರ್ಷವೇ ಸರ್ಕಾರಕ್ಕೆ ಪ್ರಸ್ತಾವಣೆಯನ್ನು ಕೂಡ ಸಲ್ಲಿಸಿದ್ದರು. ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಇಲ್ಲಿನ ಅನೇಕ ಜನಪ್ರತನಿಧಿಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕಳೆದ ಪೆಬ್ರವರಿ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಕೆಲ ಭಾಗವನ್ನು ಕರಿಡಿ ಸಂರಕ್ಷಿತ ಪ್ರದೇಶ ಅಂತ ಘೋಷಿಸಿದೆ.