ಬೆಂಗಳೂರು: ಬಿಜೆಪಿಯವರು ಹಿಂದೂಗಳೇ ಅಲ್ಲ. ಬದಲಾಗಿ ಹಿಂದೂ ಹೆಸರಿನ ಫಲಾನುಭವಿಗಳು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಮಾತನಾಡಿದ ಅವರು, ಬಿಜೆಪಿಯವರನ್ನು ದೇವರೇ ಕ್ಷಮಿಸೋದಿಲ್ಲ, ಅದಕ್ಕೆ ಅಯೋಧ್ಯೆಯಲ್ಲಿಯೇ ಅವರನ್ನು ಸೋಲಿಸಿದ್ದಾರೆ ಎಂದು ಕಿಡಿಕಾರಿದರು.
ತ್ರಿವರ್ಣ ಧ್ವಜದ ವಿರುದ್ದ ಇರುವವರು ದೇಶ ದ್ರೋಹಿಗಳು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವವರು ದೇಶ ದ್ರೋಹಿಗಳು. ಆರ್ ಎಸ್ ಎಸ್ ನವರು ತ್ರಿವರ್ಣ ಧ್ವಜ ಅಶುಭ ನಾವಿದನ್ನು ಒಪ್ಪುವುದಿಲ್ಲ ಎಂದಿದ್ದರು. ಆರ್ ಎಸ್ ಎಸ್ ನ ಗುರೂಜಿ ಸಂವಿಧಾನವನ್ನು ನಾವು ಒಪ್ಪುವುದಿಲ್ಲ ಎಂದಿದ್ದರು.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
RSS ಅಂದ್ರೆ ರೂಮರ್ ಸ್ಪ್ರೆಡಿಂಗ್ ಸಂಘ್ ಎಂದು ವಾಗ್ದಾಳಿ ನಡೆಸಿದರು. ದೇಶದಲ್ಲಿ ಅರಾಜಕತೆ ಮಾಡಿದ್ರೆ ಅದು ಗೋದ್ರಾ ಹಾಗೂ ಕಂದಮಾಲ್ ನಲ್ಲಿ. ಅರಾಜಕತೆ ಸೃಷ್ಟಿ ಮಾಡಿದ್ದು ಬುಲ್ಡೋಜರ್, ಮಾಬ್ ಲಿಂಚಿಂಗ್. ನರೇಂದ್ರ ಮೋದಿ ಹಾಗೂ ಗಡಿಪಾರಾಗಿದ್ದ ಅಮಿತ್ ಶಾ ಅರಾಜಕತೆಯ ಸೃಷ್ಟಿಕರ್ತರು ಎಂದು ಆಕ್ರೋಶ ವ್ಯಕ್ತಪಡಿಸಿದರು.