ಹುಬ್ಬಳ್ಳಿ; ಹಾದಿ ಬೀದಿಯಲ್ಲಿ ಮಾತನಾಡುವವರು ಮಾತನಾಡಿದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬದಲಾಗಲ್ಲ ಎನ್ನುವ ಮೂಲಕ ವಿವಿಧ ಧರ್ಮದ ಮಗಳ ಜಗದ್ಗುರುಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿ ಬದಲಾವಣೆ ವಿಷಯ ಯಾವುದೇ ಚರ್ಚೆ ಸರಿಯಲ್ಲ ಯಾವುದೇ ರೀತಿಯ ಮುಖ್ಯಮಂತ್ರಿ,
ಉಪ ಮುಖ್ಯಮಂತ್ರಿ ಬದಲಾವಣೆ ಇಲ್ಲ ಅನಗತ್ಯವಾಗಿಹಾದಿ ಬೀದಿಯಲ್ಲಿ ಮಾತನಾಡುವವರು ಮಾತನಾಡಿದರೆ ಸಿಎಂ ಡಿಸಿಎಂ ಬದಲಾಗಲ್ಲ ಎಂದರು. ಇನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಭ್ರಷ್ಟಾಚಾರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ ಅವರುಈ ಕುರಿತು ಸಂಬಂಧಿಸಿದವರು ಉತ್ತರ ಕೊಡತ್ತಾರೆ ನಿನ್ನೆ ನಾನು ಸಹ ಮಾಧ್ಯಮಗಳಲ್ಲಿ ನೋಡಿದೆ ಅಷ್ಟೇ ಎಂದರು. ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಉಪ ಚುನಾವಣಾ ಹಿನ್ನೆಲೆ ತಯಾರಿಗೆ ಇದೇ ಜುಲೈ 5 ರಂದು ಸಭೆ ನಡೆಯುತ್ತದೆ. ವರಿಷ್ಠರು, ಚುನಾವಣಾ ಉಸ್ತುವಾರಿಗಳು ಸಭೆಗೆ ಆಗಮಿಸುತ್ತಾರೆಯಾವ ಯಾವ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ಯಾರು ಯಾರು ಆಕಾಂಕ್ಷೆಗಳು ಇದ್ದಾರೆ ಪರಿಶೀಲನೆ ನಡೆಸಲಾಗುವುದು.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ ಗೆ ಕಳುಹಿಸಲಾವುದು. ಈ ಕುರಿತು ಯಾವುದೇ ಭಿನ್ನಾಭಿಪ್ರಾಯ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಮುಖಂಡ ಯಾಸೀನ್ ಖಾನ್ ,ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬಣಗಳ ಜಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಆ ರೀತಿ ಯಾವುದೇ ಗಲಾಟೆ ಅಲ್ಲಾ ಟಿಕೆಟ್ ಕೇಳುವುದು ಅವರ ಅವರ ಕರ್ತವ್ಯ ಯಾವುದೇ ರೀತಿಯ ಗಲಾಟೆ ಆಗಿಲ್ಲನಾಲ್ಲೈದು ಜನರು ಆಕಾಂಕ್ಷೆಗಳು ಇದ್ದಾರೆಯಾರಿಗೆ ಟಿಕೆಟ್ ಕೊಡಬೇಕು ಅನ್ನುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು. ಇನ್ನು ಮುಂದಿನ ಅಧಿವೇಶನದಲ್ಲಿ ರಾಜ್ಯದಲ್ಲಿ ಬರ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕುರಿತು ಗಂಭೀರ ಸ್ವರೂಪದ ಚರ್ಚೆ ನಡೆಸಲಾಗುವುದು ಎಂದರು