ಹಾವೇರಿ:– ಪಕ್ಷದಲ್ಲಿ ಶಿಸ್ತು ಮುಖ್ಯ ಗಲಾಟೆ ಆದ್ರೆ ಬೇರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅಪಘಾತದಲ್ಲಿ ಸಾವು..ಮೃತನ ಕುಟುಂಬಕ್ಕೆ ಪರಿಹಾರ ವಿಳಂಬ ಮಾಡಿದ ಸಾರಿಗೆ ಬಸ್ ಸೀಜ್!
ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ಎರಡು ಮೂರು ಗುಂಪುಗಳಿದ್ದಾಗ ಸ್ವಾಭಾವಿಕ. ಈಗಾಗಲೇ ಇಲ್ಲಿ ಕೇಲಸ ಸುರು ಮಾಡಿದ್ದೇವೆ. ಒಡಕಾಗಬಾರದು ಎನ್ನುವ ಕಾರಣಕ್ಕೆ ಕೇಲಸ ಸುರು ಮಾಡಿದ್ದೇವೆ. ಸಿಎಂ ಸೂಚನೆ ಮೆರೆಗೆ ಬಂದಿದ್ದೇನೆ. ಪಕ್ಷ ಅಂದಮೇಲೆ ಶಿಸ್ತು ಇರಬೇಕು, ಗಲಾಟೆ ಮಾಡಿದ್ರೆ ಪಕ್ಷ ಬೇರೆ ಚಿಂತನೆ ಮಾಡಬೇಕಾಗುತ್ತದೆ ಎಂದರು.
ಅಂತಿಮವಾಗಿ ಗೆಲ್ಲುವ ಅಭ್ಯರ್ಥಿ ಹಾಕುತ್ತೇವೆ. ನಮ್ಮದು ಪಕ್ಷ ಸಂಘಟನೆಯ ಜವಾಬ್ದಾರಿ. ಟಿಕೆಟ್ ಕೊಡುವ ಸಮಿತಿ ಬೇರೆ ಇದೆ. ಲೀಡರಗಳು ಒಂದಾಗದೆ ಇರಬಹುದು. ಮತದಾರರು ಒಂದಾಗುತ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ , ನಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಗೆಲ್ಲುವ ಅರ್ಹತೆ ಇದ್ರೆ ಟಿಕೆಟ್ ಕೊಡ್ತಿವಿ. ಸರ್ವೆಯಲ್ಲಿ ಬಂದವರಿಗೆ ಟಿಕೆಟ್ ಕೊಡ್ತಿವಿ. ನಾನು ಟಿಕೆಟ್ ಕೊಡಲು ಬಂದಿಲ್ಲ ಸಂಘಟನೆ ನೋಡಲು ಬಂದಿದ್ದೇನೆ. ಆಕಾಂಕ್ಷಿಗಳ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.