ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಾಗೂ ಮೂಡಾ ಅಕ್ರಮದ ತನಿಖೆಯನ್ನ CBI ಗೆ ವಹಿಸಬೇಕು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ನಾಯಕರು ಸಿಎಂ ಮನೆ ಮುತ್ತಿಗೆ ಹೈಡ್ರಾಮಾ ನಡೆಸಿದ್ರು. ಕೇಸರಿ ಪಡೆಯ ಆಕ್ರೋಶಕ್ಕೆ ಶಿವಾನಂದ ಸರ್ಕಲ್ ಸಾಕ್ಷಿಯಾದ್ರೆ , ನಾಯಕರನ್ನ ಮನವೊಲಿಸುವಲ್ಲಿ ಪೋಲೀಸರು ಹೈರಾಣಾದ್ರು. ಸಿಎಂ ವಿರುದ್ಧ ಕೇಸರಿ ಟೀಂ ವಾಗ್ಬಾಣ ಬಿಟ್ರೆ, ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ..….
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವ ನಾಗೇಂದ್ರ ತಲೆದಂಡವಾಗಿದೆ, ಕೆಲ ಅಧಿಕಾರಿಗಳ ವರ್ಗಾವಣೆಯೂ ಆಗಿದೆ ತನಿಖೆ ಮಾತ್ರ ಕುಂಟುತ್ತಿದೆ. ಈ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ರ ತವರು ಜಿಲ್ಲೆಯಾ ಮೂಡಾ ಅಕ್ರಮ ಸೈಟು ಹಂಚಿಕೆ ಹಗರಣ ಜಗಜ್ಜಾಹಿರಾಗಿದ್ದು ಸಿಎಂ ಸಿದ್ದರಾಮಯ್ಯ ಸೇರಿ ಸಚಿವ ಭೈರತಿ ಸುರೇಶ್ ಬುಡಕ್ಕೆ ಬಂದಿದೆ. ವಾಲ್ಮೀಕಿಯ ಹಾಗೂ ಮೂಡಾ ಹಗರಣಗಳನ್ನು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಬ್ರಹ್ಮಾಸ್ತ್ರಗಳನ್ನಾಗಿ ತೆಗೆದುಕೊಂಡಿದ್ದು ಉಗ್ರ ಹೋರಾಟಕ್ಕೆ ಕರೆ ಕೊಟ್ಟಿವೆ. ಹೋರಾಟದ ಮೊದಲ ಭಾಗವಾದ ಇಂದು ಸಿಎಂ ನಿವಾಸ ಕಾವೇರಿಗೆ ಮುತ್ತಿಗೆ ಯತ್ನ ನಡೆಸಿ ಭಾರೀ ಹೈಡ್ರಾಮವನ್ನೇ ನಡೆಸಿದ್ರು..…
ಚನ್ನಪಟ್ಟಣವನ್ನು ಶೀಘ್ರದಲ್ಲೇ ಬೆಂಗಳೂರಿಗೆ ಸೇರಿಸಲಾಗುತ್ತೆ: ಡಿ.ಕೆ.ಶಿವಕುಮಾರ್ ಬಾಂಬ್!
ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ, ವಿಪಕ್ಷ ನಾಯಕ ಅಶೋಕ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಮನೆ ಮುತ್ತಿಗೆ ಹಾಕೋದಾಗಿ ನಿನ್ನೆಯೇ ಕರೆಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಿವಾನಂದ ಸರ್ಕಲ್ ಹಾಗೂ ವಿಂಡ್ಸನ್ ಮ್ಯಾನರ್ ಸಿಗ್ನಲ್ ನಲ್ಲಿ ಪೋಲೀಸರು ಅಲರ್ಟ್ ಆಗಿದ್ರು. ಮೊದಲು ಮಾಜಿ ಸಚಿವ ಸುನೀಲ್ ಕುಮಾರ್ ಟೀಂ ಕೆಕೆ ಗೆಸ್ಟ್ ಹೌಸ್ ನಿಂದ ಮುತ್ತಿಗೆ ಯತ್ನ ಶುರುಮಾಡಿ ಅರೆಸ್ಟ್ ಆದ್ರು. ಅದಾದ್ಮೇಲೆ ವಿಜಯೇಂದ್ರ, ಅಶೋಕ, ಸಿಟಿ ರವಿ ಟೀಂ ಶಿವಾನಂದ ಸರ್ಕಲ್ ಬಳಿಯಿಂದ ಮುತ್ತಿಗೆ ಯತ್ನ ಶುರುಮಾಡ್ತಿದ್ದಂತೆ ಪೊಲೀಸರು ತಡೆದ್ರು. ಈ ವೇಳೆ ಪೊಲೀಸರು ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ ನಡೆದು ತಳ್ಳಾಟ ನೂಕಾಟವೇ ನಡೆದೋಯ್ತು. ಈ ಮಧ್ಯೆ ಅಶೋಕ ಒಬ್ಬಂಟಿಯಾಗಿ ಸಿಎಂ ಮನೆ ಮುತ್ತಿಗೆಗೆ ಯತ್ನಿಸಿದ್ದು ಕೇಸರಿ ಟೀಂ ಆಕ್ರೋಶ ಹೆಚ್ಚಾಗ್ತಿದ್ದಂತೆ ಪೋಲೀಸರು ಎಲ್ಲರನ್ನು ಅರೆಸ್ಟ್ ಮಾಡಿ ಬಸ್ ಗೆ ಹತ್ತಿಸಿ ಸ್ಥಳದಿಂದ ಕರೆದೊಯ್ದರು.….
ಸಿಎಂ ಮನೆ ಮುತ್ತಿಗೆ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ ಭಂಡ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ದಿನಕ್ಕೊಂದು ಹಗರಣ ಇವತ್ತು ಬಯಲಿಗೆ ಬರುತ್ತಿದೆ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಣ ವರ್ಗಾವಣೆ ಆಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ‘ಮೂಡಾ’ದಲ್ಲಿ ಅವರ ಗಮನಕ್ಕೆ ಬರದೆ ಅಷ್ಟು ದೊಡ್ಡ ಹಗರಣ ಆಗುವುದು ಹೇಗೆ ಸಾಧ್ಯ.
ಸಿಎಂ ಪತ್ನಿಗೆ 15 ನಿವೇಶನಗಳನ್ನು ಕೊಟ್ಟಿದ್ದಾರೆ ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿ, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಈ ಹಗರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ತನಿಖೆ ಆಗುವವರೆಗೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎರಡೂ ಹಗರಣಗಳನ್ನು CBI ಗೆ ಕೊಡಬೇಕೆಂದು ಆಗ್ರಹಿಸಿದ್ರು ವಿಜಯೇಂದ್ರ…
ಮುಡಾ ನಿವೇಶನ ಹಂಚಿಕೆ ಪ್ರಕರಣ: ತನಿಖಾ ವರದಿ ಬಂದ ನಂತರ ತೀರ್ಮಾನ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ವಿಪಕ್ಷ ನಾಯಕ ಅಶೋಕ ವಾಲ್ಮೀಕಿ ಅಭಿವೃದ್ಧಿ ನಿಗಮದ ದಲಿತರ ಹಣವನ್ನು ತೆಲಂಗಾಣದ ಬಾರ್ ಅಂಡ್ ರೆಸ್ಟೋರೆಂಟ್ಗೆ, ಚಿನ್ನದ ಅಂಗಡಿಗಳಿಗೆ ಟಕಾಟಕ್ ಎಂದು ವರ್ಗಾವಣೆ ಮಾಡಿದ್ದಾರೆ. ಈಗ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಹಿಂದೆ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆಯೇ ಈಗ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ತುರ್ತು ಸ್ಥಿತಿ ಜಾರಿಗೊಳಿಸಿದೆ. ಬಿಜೆಪಿ ಶಾಸಕರು ಸಿಎಂ ಮನೆಗೆ ಬರಬಾರದೆಂದು ನೂರಾರು ಪೊಲೀಸರನ್ನು ನಿಯೋಜಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿ 3 ರಿಂದ 4 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. 86 ಸಾವಿರ ಅರ್ಜಿಗಳನ್ನು ಸಲ್ಲಿಸಿದ ಬಡವರಿಗೆ ನಿವೇಶನ ನೀಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನಿವೇಶನ ನೀಡಿದ್ದಾರೆ. 15 ನಿವೇಶನ ನೀಡಬೇಕಾದಲ್ಲಿ 60 ನಿವೇಶನ ನೀಡಿದ್ದಾರೆ ಸಿಎಂ ತವರು ಜಿಲ್ಲೆಯಲ್ಲೇ ನಿವೇಶನ ದೋಚಿದ್ದಾರೆ ಕಾಂಗ್ರೆಸ್ನದ್ದು ಲೂಟಿ ಮಾಡಲ್.
ತನಿಖೆಯನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯ ಹೊರಬರಲಿದೆ ಸದನದಲ್ಲಿ ದಾಖಲೆ ಸಮೇತ ಸತ್ಯ ಬಯಲಿಗೆ ತರುತ್ತೇವೆ ಎಂದು ಸವಾಲು ಹಾಕಿದ್ರು ಅಶೋಕ…
ಬಿಜೆಪಿ ನಾಯಕರ ಆಕ್ರೋಶ, ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ ತನಿಖೆ ಮಾಡೋಕೆ ಅಧಿಕಾರಿಗಳಿಗೆ ಹೇಳಿದ್ದೇನೆ. ಹಿಂದೆ ನಾವು ಕೇಳಿದಾಗ ಒಂದೇ ಒಂದು ಕೇಸ್ ಅನ್ನ ಸಿಬಿಐಗೆ ಕೊಟ್ಟಿದ್ದಾರಾ ಬಿಜೆಪಿಯವರು, ನಾವು ಯಾಕೆ ಸಿಬಿಐಗೆ ಕೊಡಬೇಕು. ಸೈಟ್ ಹಂಚಿದ್ದು ಅವರ ಸರ್ಕಾರದಲ್ಲಿ
ದುರುಪಯೋಗ ಆಗಿದೆಯಾ ಇಲ್ಲವೋ ಅಂತಾ ತನಿಖೆ ಮಾಡ್ತಿದ್ದೇವೆ. ನಾನು ಯಾಕಪ್ಪ ರಾಜೀನಾಮೆ ಕೊಡಬೇಕು, ನನ್ನ ಪಾತ್ರ ಏನಿದೆ. ಅಶೋಕ, ವಿಜಯೇಂದ್ರ ರಾಜೀನಾಮೆ ಕೇಳ್ತಾನೆ ಅಂತಾ ಕೊಟ್ಟು ಬಿಡೋಕೆ ಆಗುತ್ತಾ.
ಅವರ ಕಾಲದಲ್ಲಿ ಅಕ್ರಮ ಸಕ್ರಮ ಸರಿಯಾಗಿ ಆಗಿಲ್ಲ ಅಂತಾ ಕೋರ್ಟ್ ಗೆ ಹೋಗಿ ಬೇಲ್ ತಗೊಂಡಿದ್ದಾರೆ, ಅದಕ್ಕೆ ಅವರು ರಾಜೀನಾಮೆ ಕೊಟ್ಟಿದ್ರಾ. ಬಿಜೆಪಿ ಯವರಿಗೆ ಏನು ಇಶ್ಯೂ ಇಲ್ವಲ್ಲ, ಅದಕ್ಕೆ ಇದನ್ನು ಹಿಡ್ಕೊಂಡಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ ಸಿದ್ದರಾಮಯ್ಯ…
ಒಟ್ನಲ್ಲಿ ವಾಲ್ಮೀಕಿ ಹಾಗೂ ಮೂಡಾ ಅಕ್ರಮವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ಹೋರಾಟ ಮಾಡ್ತಿದೆ. ಎರಡೂ ಪ್ರಕರಣಗಳನ್ನು CBI ಗೆ ಕೊಡಬೇಕು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ಅತ್ತ ಸಿಎಂ ತಾನು ರಾಜೀನಾಮೆ ಕೊಡಲ್ಲ, ಕೇಸ್ ಅನ್ನ CBI ಗೂ ಕೊಡಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ. ಈ ವಿಚಾರ 15 ರಿಂದ ಶುರುವಾಗೋ ಮಳೆಗಾಲದ ಅಧಿವೇಶನದಲ್ಲಿ ತಾರಕ್ಕೇರಲಿದ್ದು ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದನ್ನು ಕಾದುನೋಡಬೇಕಿದೆ..….