ಹುಬ್ಬಳ್ಳಿ: ರಾಯಾಪುರದಲ್ಲಿರುವ ಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿಧ್ಯಾಲಯದಲ್ಲಿಂದು ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಯೂನಿಟ್, ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಧಾರವಾಡ, ಡಾ. ಎಮ್. ಎಮ್. ಜೋಶಿ ಆಯ್ ಇನ್ಸ್ಟಿಟ್ಯೂಟ್ ಧಾರವಾಡ, ಶ್ರೀ ವಿವೇಕಾನಂದ ರಾಷ್ಟ್ರೋತ್ಥಾನ ಫೌಂಡೇಶನ್, ರೋಟರಿ ಕ್ಲಬ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಯುತ್ ರೆಡ್ ಕ್ರಾಸ್ ಉಚಿತ ಕಣ್ಣಿನ ತಪಾಸಣಾ ಶಿಬಿರ ವನ್ನು ಆಯೋಜಿಸಲಾಗಿತ್ತು.
ಕೋಲಾರ: ಮಾಲ್ಟ್ ಮಿಶ್ರಿತ ಹಾಲು ಕುಡಿದ ಮಕ್ಕಳ ಆರೋಗ್ಯದಲ್ಲಿ ಏರುಪೇರು..!
ಈ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಹುಬ್ಬಳ್ಳಿಯ ಎಮ್. ಎಮ್. ಜೋಶಿ ಕಣ್ಣಿನ ಆಸ್ಪತ್ರೆಯ, ಕಣ್ಣಿನ ತಜ್ಞರಾದ ಡಾಕ್ಟರ ತೇಜಸ ಮಾತನಾಡಿ ಕಣ್ಣು ಅತ್ಯಂತ ಪ್ರಮುಖ ಅಂಗ. ಪ್ರಮುಖವಾಗಿ ಇವತ್ತಿನ ಯುವಕರು ಕಣ್ಣಿನ ಕುರಿತು ಕಾಳಜಿ ವಹಿಸಿ. ಕಣ್ಣು ದಾನ, ಶ್ರೇಷ್ಠ ದಾನ. ಇದು ಸಮಾಜ ಸೇವೆಯ ಪ್ರತೀಕ. ತಾವೆಲ್ಲರೂ ಕಣ್ಣು ದಾನ ಮಾಡುವ ಸಂಕಲ್ಪ ಮಾಡಿ, ಅಂಧರಿಗೆ ನೇರವಾಗಿ. ಒಂದು ಕಣ್ಣು ನಾಲ್ಕು ಅಂಧ ರಿಗೆ ಬೆಳಕಾಗುತ್ತದೆ. ತಾವೆಲ್ಲರೂ ಸಮಾಜದ ಭಾಗವಾಗಿ ಬೆಳೆಯಿರಿ. ಮೊಬೈಲ್ ಬಳಕೆ ಕಡಿಮೆ ಮಾಡಿ. ಕಣ್ಣಿನ ಕಾಳಜಿ ವಹಿಸಿ, ಸಮಯಕ್ಕೆ ಸರಿಯಾಗಿ ಕಣ್ಣಿನ ಪರೀಕ್ಷೆ ಮಾಡಿಸಿ ಎಂದರು.
ಇದೆ ಸಂದರ್ಭ ದಲ್ಲಿ ಮಾತನಾಡಿದ ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾಕ್ಟರ. ಉಮೇಶ್ ಹಳ್ಳಿಕೇರಿಯವರು ಮಾತನಾಡಿ,ಇಂದಿನ ಯುವ ಜನತೆ ಕೆಟ್ಟ ಚಟ ಗಳಿಗೆ ಬಲಿ ಯಾಗುತ್ತಿರುವುದರ ಕುರಿತು ವಿಷಾದ ವ್ಯಕ್ತ ಪಡಿಸುತ್ತಾ, ಪ್ರತಿದಿನ ವ್ಯಸನ ಮುಕ್ತ ದಿನವಾಗಲಿ. ಸಮಾಜಕ್ಕೆ ಒಳ್ಳೆಯದನ್ನು ಮಾಡಿ.ಪ್ರತಿಯೊಬ್ಬರೂ ಒದೊಂದು ಗಿಡ ನೇಡಿ. ಪರಿಸರ ಕಾಪಾಡಿ. ಕಣ್ಣು ಧಾನ ಮಾಡಿ, ಜೀವನದ ಸಾರ್ಥಕತೆಯನ್ನು ಪಡೆಯಿರಿ ಎಂದರು.
ಇದೆ ಸಂಧರ್ಭ ದಲ್ಲಿ ಮಾತನಾಡಿದ ಹುಬ್ಬಳ್ಳಿಯ ರೋಟರಿ ಕ್ಲಬ್ ಪ್ರೆಸಿಡೆಂಟ್ ಬಾಪುಗೌಡ ಪಾಟೀಲ, ಮಾಜಿ ಪ್ರೆಸಿಡೆಂಟ್ ಶ್ರೀ ಬಿ. ಬಿ. ಪಾಟೀಲ ಅವರು ಮಾತನಾಡಿ, ಜನ ಸೇವೆಯೇ ತಮ್ಮ ಮೊದಲ ಆಧ್ಯತೆಯಾಗಲಿ. ಭವಿಷ್ಯದ ಪ್ರಜೆಗಳಾಗಿ,ಒದುವ, ಬರೆಯುವ ಹವ್ಯಾಸ ಬೆಳೆಸಿಕೊಳ್ಳಿ, ಅದರಲ್ಲೂ ಪತ್ರಿಕೆಗಳನ್ನು ಒದುವ ಮನಸ್ಸು ಮಾಡಿ, ಸ್ವಾವಲಂಬಿಗ ಳಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿಧ್ಯಾಲಯದ ಪ್ರಾಚಾರ್ಯರಾದ ಡಾ. ಶಾಂತಯ್ಯ ಕೆ. ಎಸ್. ಅವರು ಮಾತನಾಡಿ ಕಣ್ಣು ಬಾಳಿನ ಬೆಳಕು. ಕಣ್ಣಿನ ಆರೈಕೆ ಮಾಡಿ. ಕಣ್ಣು ಧಾನ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿ.ಶಿಸ್ತು ಬದ್ದ ಜೀವನ ತಮ್ಮದಾಗಲಿ ಎಂದರು.
ಶಿಬಿರ ದಲ್ಲಿ ಮಹಾವಿಧ್ಯಾಲಯದ ರೆಡ್ ಕ್ರಾಸ್ ಯೂನಿಟ್ ಸಂಯೋಜಕರಾದ ಪ್ರೊ. ಗಿರಿಜಾ ಕಡ್ಡಿಪುಡಿ ಸರ್ವರನ್ನು ಸ್ವಾಗತಿಸಿ, ಉಚಿತ ಕಣ್ಣಿನ ತಪಾಸಣಾ ಶಿಬಿರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾ ಡಿದರು. ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಒಕ್ಕೂಟದ ಕಾರ್ಯಾ ಧ್ಯಕ್ಷರಾದ ಡಾ. ಪುಷ್ಪಾ ಬಸನಗೌಡರ ಉಪ ಸ್ಥಿತರಿದ್ದರು., ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಐಶ್ವರ್ಯ ಮಾಳನ್ನವರ. ಕುಮಾರಿ ಪಲ್ಲವಿ ಚಿಂಚಲಿ .ಕುಮಾರಿ ಸುರೇಖಾ ಹುಡೇದ್ ಕಾರ್ಯಕ್ರ ಮ ನಿರೂಪಿಸಿದರು . ಡಾ. ಹರೀಶ್ ಹಾಗೂ ಎಮ್. ಎಮ್. ಜೋಶಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಹಾಗೂ ಮಹಾವಿಧ್ಯಾಲಯ ದ ಬೋದಕ ಹಾಗೂ ಬೋದಕೇತರ ಸಿಬ್ಬಂದಿ ಹಾಗೂ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಕಣ್ಣಿನ ತಪಾಸಣಾ ಶಿಬಿರದದಲ್ಲಿ ಉಪಸ್ಥಿತರಿದ್ದರು.