ತುಮಕೂರು:- ತಲೆ ಮರೆಸಿಕೊಂಡಿದ್ದ ನಕ್ಸಲ್ ಕೊಮುಲು ಮುತ್ಯಾಲ ಚಂದ್ರು ನನ್ನು ಅರೆಸ್ಟ್ ಮಾಡಲಾಗಿದೆ.
Gadaga Breaking: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ..!
ತುಮಕೂರು ಜಿಲ್ಲೆ ಪಾವಗಡದ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದಲ್ಲಿ ಆರೋಪಿ ಭಾಗಿಯಾಗಿದ್ದ. 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 75ನೇ ಆರೋಪಿ ಕೊಮುಲು ಮುತ್ಯಾಲ ಚಂದ್ರು ಎನ್ನಲಾಗಿದೆ. ಆಂಧ್ರದ ಅನಂತಪುರದ ಗಾರಲದಿನ್ನೆ ಕೇಶವಪುರದ ವಾಸಿ ಚಂದ್ರು ಎನ್ನಲಾಗಿದೆ. ಪಾವಗಡ ಪೊಲೀಸರಿಂದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಪಾವಗಡ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಂಧಿತ ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಆರೋಪಿ ಕೆಲಸ ಮಾಡುತಿದ್ದ.. ಪೊಲೀಸ್ ಕ್ಯಾಂಪ್ ಮೇಲೆ 2005 ರ ಫೆ.11 ರಂದು ರಾತ್ರಿ 10.30ರಲ್ಲಿ ದಾಳಿ ನಡೆಸಲಾಗಿತ್ತು.. ಏಕಾಏಕಿ 300 ಜನರ ದಾಳಿಗೆ 7 ಮಂದಿ ಪೊಲೀಸರು ಹಾಗೂ ಓರ್ವ ಬಸ್ ಕ್ಲಿನರ್ ಮೃತಪಟ್ಟಿದ್ದ ಎನ್ನಲಾಗಿದೆ.