ಶಿವಮೊಗ್ಗ:- ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯ ಬಳಿ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ಗಿರಿ ನಡೆದಿರುವಂತಹ ಘಟನೆ ಜರುಗಿದೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ: ಯಾವ್ಯಾವ ಜಿಲ್ಲೆಗೆ ಯೆಲ್ಲೋ ಅಲರ್ಟ್?
ನಿನ್ನೆ ತುಂಗಾ ಜಲಾಶಯದ ವೀಕ್ಷಣೆಗೆ ಪ್ರೇಮಿಗಳು ತೆರಳಿದ್ದರು. ಜೊತೆಗೆ ಅವರೊಟ್ಟಿಗೆ ಪ್ರಿಯಕರನ ಸ್ನೇಹಿತ ತೆರಳಿದ್ದ. ಈ ವೇಳೆ ಸ್ಥಳೀಯ ನಾಲ್ವರು ಯುವಕರಿಂದ ಅನುಚಿತ ವರ್ತನೆ ಮತ್ತು ಇಬ್ಬರು ಯುವಕರ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ
ಹಲ್ಲೆ ಮಾಡುತ್ತಿದ್ದಂತೆ ಪ್ರಿಯಕರ ಹಾಗೂ ಆತನ ಸ್ನೇಹಿತ ಸ್ಥಳದಿಂದ ಓಡಿಹೋಗಿದ್ದಾರೆ. ಯುವತಿಯನ್ನು ಮಾತ್ರ ಸ್ಥಳೀಯ ಯುವಕರು ಸ್ಥಳದಲ್ಲೇ ಇರಿಸಿಕೊಂಡಿದ್ದಾರೆ. ಯುವತಿ ಕಿಡ್ನ್ಯಾಪ್ ಬಗ್ಗೆ ಪ್ರಿಯಕರ ಹಾಗೂ ಸ್ನೇಹಿತನಿಂದ ದೂರು ನೀಡಲಾಗಿದೆ.
ದೂರು ಮೇರೆಗೆ ಸ್ಥಳಕ್ಕೆ ತೆರಳಿದ್ದ ತುಂಗಾನಗರ ಠಾಣೆ ಪೊಲೀಸರು ಯುವತಿ, ಸ್ಥಳೀಯ ಯುವಕರನ್ನು ಠಾಣೆಗೆ ಕರೆತಂದಿದ್ದಾರೆ.