ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದು ಮೂರು ದಿನಗಳು ಕಳೆದಿವೆ. ಆದರೂ ಭಾರತ ತಂಡದ ಆಟಗಾರರಿಗೆ ತಾಯ್ನಾಡಿಗೆ ಮರಳಲು ಮಾತ್ರ ಸಾಧ್ಯವಾಗಿಲ್ಲ.
ಭಾರಿ ಚಂಡಮಾರುತ ಕಾರಣ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಆಟಗಾರರು ಬಾರ್ಬೆಡೋಸ್ನಲ್ಲೇ ಉಳಿದುಕೊಳ್ಳುವಂತ್ತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂಗೆ ಕ್ಯಾಪ್ಟನ್ ಆಗ್ತಾರಾ ಕೋಹ್ಲಿ!?
ಈ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ. ಬಾರ್ಬೆಡೋಸ್ನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಟೀಮ್ ಇಂಡಿಯಾ ಆಟಗಾರರು ತಂಗಿದ್ದು, ಬೀಚ್ ಪಕ್ಕದಲ್ಲಿರುವ ತಮ್ಮ ಕೊಠಡಿಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿಡಿಯೋ ಕರೆಮಾಡಿ ಚಂಡಮಾರುತದ ರಭಸ ಹೇಗಿದೆ ಎಂಬುದನ್ನು ವಿರಾಟ್ ತೋರಿಸುತ್ತಿದ್ದಾರೆ. ಇದನ್ನುಅವರೊಟ್ಟಿಗಿದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಬರೋಬ್ಬರಿ 11 ವರ್ಷಗಳ ಬಳಿಕ ಟೀಮ್ ಇಂಡಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿತ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಇನ್ನು ವರದಿಗಳ ಪ್ರಕಾರ ಭಾರತ ತಂಡದ ಆಟಗಾರರು ಬಾರ್ಬೆಡೋಸ್ನಿಂದ ನೇರವಾಗಿ ನ್ಯೂ ಡೆಲ್ಲಿಗೆ ಪ್ರಯಾಣ ಬೆಳೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ದ್ವೀಪರಾಷ್ಟ್ರದ ಹವಾಮಾನ ಕೆಟ್ಟಿರುವ ಕಾರಣ ಇದು ಇನ್ನು ಸಾಧ್ಯವಾಗಿಲ್ಲ.