ಅಥಣಿ: ವ್ಯಕ್ತಿಯೊಬ್ಬನ ಜೀವನ ಬಹಳ ಮಹತ್ವದ್ದದಾಗಿದೆ. ಅಂಹತದ್ರಲ್ಲಿ ಸೋಶಿಯಲ್ ಮೀಡಿಯಾಗಳ ಹುಚ್ಚಾಟಕ್ಕೆ ಅದೆಷ್ಟೋ ಜನರು ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಆದ್ರೂ ಸಹ ಜನ ಮಾತ್ರ ಬುದ್ದಿ ಕಲಿತಿಲ್ಲ. ಅಥಣಿ ಬಸ್ ಸ್ಟ್ಯಾಂಡ್ನಲ್ಲಿ ರೀಲ್ಸ್ ರಾಜ ಹುಚ್ಚಾಟ ಮೆರೆದಿದ್ದಾನೆ. ಆತನಿಗೆ ಪೊಲೀಸರು ಸರಿಯಾಗಿಯೇ ಬುದ್ದಿ ಹೇಳಿದ್ದಾರೆ.
ಹೌದು… ನಮ್ಮ ಜೀವನದಲ್ಲಿ ಸೋಶಿಯಲ್ ಮೀಡಿಯಾ ಹಾಸುಹೋಕ್ಕಾಗಿದೆ ಇನ್ಟಾಗ್ರಾಮ್, ಯೂಟ್ಯೂಬ್, ಪೇಸ್ಬುಕ್ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಹಾಗೂ ಕಮೆಂಟ್ಗಳಿಗೆ ಅದೆಷ್ಟೋ ಮೂರ್ಖರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆದರೂ ಜನರು ಮಾತ್ರ ಬುದ್ದಿ ಕಲಿತಿಲ್ಲ. ಶಿವಯೋಗಿಗಳ ನಾಡು ಎಂದೇ ಹೆಸರಾದ ಅಥಣಿಯಲ್ಲಿ ಯುವಕನೊಬ್ಬ ರೀಲ್ಸ್ ಮಾಡಲು ಬಟ್ಟೆ ಕಳಚಿ ಬಸ್ ಸ್ಟ್ಯಾಂಡ್ಗೆ ಬಂದಿದ್ದಾನೆ.
ರೀಲ್ಸ್ನ ಹುಚ್ಚಿನಿಂದ ಅಥಣಿ ತಾಲೂಕಿನ ಶಿನಾಳ ಗ್ರಾಮದ ಯುವಕನೊರ್ವ ಶರ್ಟ್ ಇಲ್ಲದೇ ಅಥಣಿ ಬಸ್ ಸ್ಟ್ಯಾಂಡ್ನಲ್ಲಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಬಸ್ ಸ್ಟ್ಯಾಂಡ್ನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮುಂದೆ ಪೋಸ್ ಕೊಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಹುಡುಗಿಯರು ತನ್ನನ್ನು ನೋಡಲೇಂದೆ ಬಟ್ಟೆ ಬಿಚ್ಚಿ ಸಿಕ್ಸ್ ಪ್ಯಾಕ್ ತೋರಿಸಿ ಹೀರೋ ಆಗಲು ಮುಂದಾಗಿದ್ದಾನೆ. ಆದರೆ ಅಲ್ಲೇ ಸಿಸಿಟಿವಿಯಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದ ಪೊಲೀಸರು ರೀಲ್ಸ್ ರಾಜನಿಗೆ ಲಾಠಿ ರುಚಿ ತೋರಿಸಿ ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ಅಥಣಿ ಪೊಲೀಸರು ರೀಲ್ಸ್ ರಾಜನಿಗೆ ಸರಿಯಾಗಿ ಬುದ್ದಿ ಹೇಳಿದ ಬಳಿಕ ತನ್ನ ತಪ್ಪಿನ ಅರಿವಾಗಿ, ನಾನು ಮಾಡಿದ್ದು ಹುಚ್ಚಾಟವಾಗಿದೆ. ನಾನು ತಪ್ಪು ಮಾಡಿದ್ದೇನೆ. ಇನ್ಯಾರು ಸಹ ಇಂತಹ ತಪ್ಪು ಮಾಡಬೇಡಿ ಎಂದು ವಿಡೀಯೋ ಮಾಡಿ ತನ್ನದೇ ಇನ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದಾನ
ಇಂದಿನ ಪೀಳಿಗೆಯ ಯುವಜನತೆಯಲ್ಲಿ ಸೋಶಿಯಲ್ ಮೀಡಿಯಾ ಅನ್ನೋದು ಆಹಾರದಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತಿರುವುದು ಕಳವಳಕರ ಸಂಗತಿ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಪಾಲಕರು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಆಚಾರ, ವಿಚಾರ, ಸಂಸ್ಕಾರಗಳನ್ನು ಹೇಳಿಕೊಡಬೇಕು. ಇಲ್ಲವಾದಲ್ಲಿ ನಿಮ್ಮ ಮಕ್ಕಳು ಇಂತಹ ಹುಚ್ಚಾಟ್ಟಕ್ಕೆ ಸಮಾಜದಲ್ಲಿ ಹಾಸ್ಯಾಸ್ಪದವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.