ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ನಿರ್ಮಾಪಕ ಕೆ ಮಂಜು ಬ್ಯಾಟ್ ಬೀಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ ಮಂಜು, ಹಿಂದೆ ದರ್ಶನ್ ಹೇಗೆ ಇದ್ದರೂ ಈಗಲೂ ಆಗೇ ಇದ್ದರು. ತುಂಬಾ ಬಡತನದಿಂದ ಬಂದ ಹುಡುಗ. ದರ್ಶನ್ ಕೆಟ್ಟವರು ಅಲ್ಲ ನನ್ನಿಂದ ಒಳ್ಳೆಯದು ಆಗುತ್ತದೆ ಎಂದರೆ ಬನ್ನಿ ಸಿನಿಮಾ ಮಾಡೋಣಾ ಎನ್ನುತ್ತಾರೆ.
BIGG NEWS: ಇಂದಿನಿಂದ ಜಿಯೋದಲ್ಲಿ ಅನ್ ಲಿಮಿಟೆಡ್ ಆಫರ್: ಮಿಸ್ ಮಾಡ್ಕೋಬೇಡಿ!
ನಮ್ಮ ನಿರ್ಮಾಪಕರಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ನನಗೆ ಡೈರೆಕ್ಟರ್ ಕಥೆ ಹೇಳಬೇಕು ದರ್ಶನ್ ಪ್ರಿನ್ಸಿಪಲ್ ಕರೆಕ್ಟ್ ಇದೆ. ಡೆವಿಲ್ ಬಹು ನಿರೀಕ್ಷಿತ ಸಿನಿಮಾ. ಈ ರೀತಿ ಘಟನೆಯಾಗಬಾರದಿತ್ತು
ಆಗಿದೆ ಎಂದರು. ಇನ್ನೂ ಇತ್ತೀಚೆಗೆ ಭೇಟಿಯಾಗಿ ದರ್ಶನ್ ಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ದರ್ಶನ್ ಅವರು ಜೈಲಿನಿಂದ ಬಂದರೇ ರೇಣುಕಾಸ್ವಾಮಿ ಕುಟುಂಬ ನ್ಯಾಯಾ ಒದಗಿಸುತ್ತೇವೆ. ನ್ಯಾಯಮೂರ್ತಿ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ. ತಪ್ಪು ಎಲ್ಲರಿಂದ ಆಗುತ್ತದೆ ನಾವು ಕಣ್ಣಿಂದ ನೋಡಿದ್ದೇವಾ? ದರ್ಶನ್ ಒಳ್ಳೆಯವರು ಸ್ನೇಹ ಜೀವಿ
ಕೆಲವರ ಜೊತೆ ಮನಸ್ತಾಪ ಇದೆ. ದರ್ಶನ್ ಹೊರಬರದಂತೆ ರಾಜಕೀಯ ನಾಯಕರ ಕೈವಾಡ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹೆಸರು ಹೇಳಿ ಅವರು ಆ ರೀತಿ ವ್ಯಕ್ತಿಯಲ್ಲ ಎಂದು ಮಂಜು ಹೇಳಿದರು. ಕುಮಾರಸ್ವಾಮಿ ದೊಡ್ಡ ವ್ಯಕ್ತಿ, ಅವರು ಆ ರೀತಿ ವ್ಯಕ್ತಿಯಲ್ಲ. ಕುಮಾರಣ್ಣ ಆ ರೀತಿ ಇದ್ದಿದ್ದರೆ ಗೆಲ್ಲುತ್ತಾ ಇರಲಿಲ್ಲ. ಚಿತ್ರರಂಗದ ಮೇಲೆ ಅವರಿಗೆ ಒಳ್ಳೆ ಗೌರವ ಇದೆ ಎಂದು ಮಂಜೂ ಹೇಳಿಕೆ ಕೊಟ್ಟಿದ್ದಾರೆ.