ಬಾಗಲಕೋಟೆ: ಮಾತೃಶ್ರೀ ಹೇಮಾವತಿ ಅಮ್ಮನವರ ಬಗ್ಗೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರದ ಮಹತ್ವದ ಬಗ್ಗೆ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀದೇವಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ನಗರದಲ್ಲಿ ಜಮಖಂಡಿ ತಾಲೂಕು ವಲಯದ ಶ್ರೀ ನೀಲಕಂಟೇಶ್ವರ ಸಭಾ ಭವನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ನಡೆಯಿತು.
ತಾಲೂಕಿನ ಯೋಜನಾಧಿಕಾರಿಗಳಾದ ನಿಂಗಪ್ಪ ರುದ್ರಪ್ಪ ಅರಳಿಕಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಜನೆಯಡಿ ಅಮೂಲ್ಯವಾದ ಕಾರ್ಯಕ್ರಮ ಜರಗುತ್ತವೆ ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಜಮಖಂಡಿಯ M. M ಜೋಶಿ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಧೀರಜ್ ಜೋಶಿ ಹಾಗೂ ಅವರ ತಂಡದವರು 96 ಜನರ ಕಣ್ಣಿನ ತಪಾಸಣೆ ಮಾಡಿದರು.
ವಲಯದ ಮೇಲ್ವಿಚಾರಕಿ ಸೇವಾಪ್ರತಿನಿಧಿ ಶೈಲಜಾ ಹೋಸಕೋಟಿ. ಅಲ್ಲಪ್ಪ ಗೋಲಬಾವಿ. ನಗರ ಸಭಾ ಸದಸ್ಯರು ಶ್ರೀಮತಿ ರೇಖಾ ಕೊರ್ತಿ ಒಕ್ಕೂಟದ ಅಧ್ಯಕ್ಷರಾದ ಭಾರತಿ ಹಾಗೂ ಸದಸ್ಸೇರು ಉಪಸ್ಥಿತರಿದ್ದರು.
ಪ್ರಕಾಶ್ ಕುಂಬಾರ್
ಬಾಗಲಕೋಟೆ