ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೇ ಏರಿಕೆ ಆಗ್ತಿರೋ ಮಾರಕ ಡೇಂಘೀ ಕಂಟ್ರೋಲ್ ಗೆ ತರಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದು ಇದನ್ನ ಹೇಗೆ ತಡೆಗಟ್ಟೋದು ಎಂದು ಕಾರ್ಯನಿರ್ವಹಿಸುತ್ತಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಾರಕ ರೋಗ ಡೇಂಘೀ ಕಂಟ್ರೋಲ್ ಗೆ ಇಂದು ಹೈ ವೋಲ್ಟೇಜ್ ಮೀಟಿಂಗ್ ನಡೆಸಲಿದ್ದು ಇದಕ್ಕೆ ಸೂಕ್ತ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
Crazy Fan: ನಟ ದರ್ಶನ್ʼಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ! ಎಂತಹ ಕಾಲ ಬಂತು ಶಿವಾ…!
ವಿಧಾನಸೌಧದ ಆರೋಗ್ಯ ಸಚಿವರ ಕೊಠಡಿಯಲ್ಲಿ ಸಭೆ ನಡೆಯಲಿದ್ದು ಇಂದು ಮಧ್ಯಾಹ್ನ ಸಭೆ ಕರೆದ ದಿನೇಶ್ ಗುಂಡೂರಾವ್ ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಹೈವೋಲ್ಟೇಜ್ ಮೀಟಿಂಗ್ ಇಟ್ಟುಕೊಂಡಿದ್ದಾರೆ.
ಡೇಂಘೀ ಪ್ರಕರಣ ಸಂಬಂಧ ಎರಡೂ ಇಲಾಖೆಗಳ ಪಾತ್ರದ ಕುರಿತು ಚರ್ಚಿಸಲಿರುವ ಸಚಿವರು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೇಂಘೀ ಕಡಿವಾಣದ ಬಗ್ಗೆ ಚರ್ಚೆ ಸಾಧ್ಯತೆ