ನವದೆಹಲಿ: ಜನರಲ್ ಉಪೇಂದ್ರ ದ್ವಿವೇದಿಯವರು ಭಾರತೀಯ ಸೇನಾ ಸಿಬ್ಬಂದಿ (ಸಿಒಎಎಸ್) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೇ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಜನರಲ್ ಮನೋಜ್ ಪಾಂಡೆಯವರು ನಿವೃತ್ತರಾಗಿದ್ದು, ಅವರು ಅಧಿಕಾರವನ್ನು ದ್ವಿವೇದಿಯವರಿಗೆ ಹಸ್ತಾಂತರಿಸಿದ್ದಾರೆ.
ಇದಕ್ಕೂ ಮುನ್ನ ಜನರಲ್ ದ್ವಿವೇದಿ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು. ದ್ವಿವೇದಿಯವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚಾರ್ಜ್ನ ಮೂರು ಪ್ರಶಂಸನಾ ಪತ್ರಗಳನ್ನು ಪಡೆದಿದ್ದಾರೆ.
New Sim Card Rule: ಸಾರ್ವಜನಿಕರೇ ಗಮನಿಸಿ.. ಇಂದಿನಿಂದ ಸಿಮ್ ಕಾರ್ಡ್ ಸಂಬಂಧ ಹೊಸ ನಿಯಮ ಜಾರಿ!
ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ಸೈನಿಕ್ ಸ್ಕೂಲ್ ರೇವಾದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಜ.1981ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿದರು. ಡಿ.1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನ 18ನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟರು. ನಂತರ ಅವರು ಕಾಶ್ಮೀರದಲ್ಲಿ ಕಮಾಂಡರ್ ಆಗಿದ್ದರು. ಅವರು ದೈಹಿಕ ತರಬೇತಿ ಕೋರ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.