ಚಿತ್ರದುರ್ಗ : ಕನ್ನಡ ನಾಡು ಅಖಂಡ ಕರ್ನಾಟಕವಾಗಿ ಇರಬೇಕು. ಯಾರಿಂದಲೂ ದಕ್ಷಿಣ, ಉತ್ತರ ಎಂಬುದಾಗಿ ಇಬ್ಭಾಗದ ಪ್ರಶ್ನೆ ಬೇಡ ಎಂದು ಉತ್ತರ, ದಕ್ಷಿಣ ಇಬ್ಬಾಗದ ಮಾತಾಡಿದ ಚಂದ್ರಶೇಖರ್ ಶ್ರೀಗೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ಇಬ್ಭಾಗದ ಮಾತು ಬೇಡ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ.
ಏಕೀಕರಣ ಹೋರಾಟದ ಮಾಹಿತಿ ಕೊರತೆಯಿಂದ ಇಬ್ಬಾಗದ ಹೇಳಿಕೆ ನೀಡಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಆಯಾ ಸಮಾಜದ ಶ್ರೀಗಳ ಒತ್ತಾಯ ವಿಚಾರವಾಗಿ ಜಾತಿ ಆಧಾರದ ಮೇಲೆ ಪರಮಾಧಿಕಾರ ಹಂಚಿಕೆ ಸರಿಯಲ್ಲ. ಅರ್ಹತೆ, ದಕ್ಷತೆ ಆಧಾರದ ಮೇಲೆ ರಾಜಕೀಯ ಪರಮಾಧಿಕಾರ ಸಿಗಬೇಕು ಎಂದರು.
Food Safety: ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳಿದೆ ಗೊತ್ತಾ..? ಇಲ್ಲಿದೆ ಮಾಹಿತಿ
ಎಲ್ಲಾ ವರ್ಗದವರಿಗೂ ಅವಕಾಶ ಸಿಗಬೇಕು. ಅವರವರ ಪಕ್ಷ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಚಿತ್ರದುರ್ಗ ಸೇರಿ ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ಆಗಿದೆ. ಚಿತ್ರದುರ್ಗ ಅಭಿವೃದ್ಧಿ ಆಗಿಲ್ಲ ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ, ಚಿತ್ರದುರ್ಗ ದೇಶದಲ್ಲೇ ಹಿಂದುಳಿದ ಜಿಲ್ಲೆ ಆಗಿದೆ, ದಲಿತರಿಗೆ ಮೀಸಲಾಗಿದ್ದ ಹಣ ರಾಜ್ಯ ಸರ್ಕಾರದಿಂದ ದುರುಪಯೋಗ ಆಗಿದೆ.
ಸರ್ಕಾರದ ಖಜಾನೆ ಲೂಟಿ ಮಾಡಿ ಹಣ ದುರುಪಯೋಗವಾಗಿದ್ದು, ಖಜಾನೆ ಲೂಟಿ ಮಾಡಿದವರು ರಾಜಾರೋಷವಾಗಿ ಇದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇದೆ ಎಂಬುದು ಜನರಿಗೆ ಗೊತ್ತಿದೆ. ವಾಲ್ಮೀಕಿ ನಿಗಮದ 187ಕೋಟಿ ಕೂಡಲೇ ಜಮಾ ಮಾಡಿ. ದಲಿತ ಸಮುದಾಯದ ಏಳ್ಗೆಗೆ ಉಪಯೋಗ ಮಾಡಬೇಕು. ಸಿಎಂ ಸೇರಿ ಸಂಬಂಧ ಪಟ್ಟವರು ರಾಜೀನಾಮೆ ನೀಡಬೇಕು ಎಂದು ಕಾರಜೋಳ ವಾಗ್ದಾಳಿ ನಡೆಸಿದರು.