ಗದಗ:- ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಪಠ್ಯದಲ್ಲಿ ವೀರಶೈವ ಪದ ತೆಗೆಯುವ ವಿಚಾರ… ಸಂಸದ ಬೊಮ್ಮಾಯಿ ಹೇಳಿದ್ದೇನು!?
ಸಮಾರಂಭದಲ್ಲಿ ನೂತನ ಸಂಸದ ಬಸವರಾಜ ಬೊಮ್ಮಾಯಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಆರತಿ ಬೆಳಗಿ ಸ್ವಾಗತ ಮಾಡಲಾಗಿದೆ. ಆರತಿ ಬೆಳಗಿದ ನಂತರ ತಟ್ಟೆಗೆ 500 ರೂಪಾಯಿಯ ಎರಡು ಗರಿಗರಿ ನೋಟುಗಳನ್ನ ಬೊಮ್ಮಾಯಿ ಹಾಕಿದ್ದಾರೆ. ಸ್ವಾಗತ ಸುಸ್ವಾಗತ ಎಂದು ಆರತಿಗೆ ಮಹಿಳೆಯರು ಕೈ ಜೋಡಿಸಿದ್ದಾರೆ.
ಇದೇ ವೇಳೆ ಪುಷ್ಪವೃಷ್ಟಿಗೈದ ಮಹಿಳೆಯರಿಗೆ ಬೊಮ್ಮಾಯಿ ಅವರು ಧನ್ಯವಾದಗಳನ್ನ ಹೇಳಿ ಕಾರ್ಯಕ್ರಮದತ್ತ ತೆರಳಿದರು.