ಬೆಂಗಳೂರು: ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ ಜೈಲು ಸೇರಿರುವುದು ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ನೋವುಂಟು ಮಾಡಿದೆ. ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್ನಲ್ಲಿ ದರ್ಶನ್ ಎ2 ಆಗಿದ್ದಾರೆ. ಇದೀಗ ದರ್ಶನ್ ಪತ್ನಿ ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನಸ್ಸಿನ ನೆಮ್ಮದಿಗಾಗಿ ಮಗನೊಂದಿಗೆ ಕೊಡಗಿನಲ್ಲಿರೋ ವಿಜಯಲಕ್ಷ್ಮಿ,
ಅವರು ದರ್ಶನ್ ಕೇಸಿನಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳ ಮೇಲೆ ಸಹಜವಾಗಿಯೇ ಕಣ್ಣೀಟ್ಟಿದ್ದಾರೆ. ದರ್ಶನ್ ನ ನೋಡಲು ಮೊನ್ನೆಯಷ್ಡೆ ಪರಪ್ಪನ ಅಗ್ರಹಾರಕ್ಕೆ ಬಂದು ಹೋಗಿದ್ದ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಇದೀಗ ಕೊಡಗಿಗೆ ಶಿಪ್ಟ್ ಆಗಿದ್ದಾರೆ. ದರ್ಶನ್ ಸಧ್ಯಕ್ಕೆ ಪರಪ್ಪನ ಅಗ್ರಹಾರದಿಂದ ಹೊರ ಬರೋದು ಡೌಟ್ ಎನ್ನಲಾಗುತ್ತಿದೆ.
BREAKING.. ICSE, CBSE ಸೇರಿ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ಹೀಗಾಗಿ ಬೆಂಗಳೂರು ಬಿಟ್ಟು ಮಡಿಕೇರಿ ಸೇರಿದ್ರಾ ವಿಜಯಲಕ್ಷ್ಮಿ ಎಂಬ ಅನುಮಾನ ಕಾಡತೊಡಗಿದೆ. ಇತ್ತೀಚೆಗೆ ಪತಿಯನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ವಿಜಯಲಕ್ಷ್ಮಿಗೆ ದರ್ಶನ್ ನಾನು ಬರುವುದು ಇನ್ನೂ ಆರೇಳು ತಿಂಗಳಾಗಬಹುದು, ಮಗ ಜೋಪಾನ ಎಂದಿದ್ದಾರೆ ಎನ್ನಲಾಗಿದೆ.