ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನ ಕೇವಲ ಆರೋಗ್ಯಕ್ಕೆ ಅಲ್ಲ ನಮ್ಮ ತ್ವಚೆ ಕಾಪಾಡಿಕೊಳ್ಳಲು ಕೂಡ ಉಪಯುಕ್ತವಾಗಿದೆ. ಹಾಗಿದ್ರೆ ಬನ್ನಿ ಬೇಸಿಗೆಯಲ್ಲಿ ಅರಿಶಿನ ಬಳಸುವುದರಿಂದ ತ್ವಚೆಗೆ ಎಷ್ಟೆಲ್ಲಾ ಉಪಯೋಗವಿದೆ!?.. ಆರೋಗ್ಯಕ್ಕೆ ಅರಿಶಿನದಿಂದ ಸಿಗುವ ಬೆನಿಫಿಟ್ ಏನು ತಿಳಿಯೋಣ ಬನ್ನಿ..
ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ದೇಶಾದ್ಯಂತ ಜಾರಿ..!
ಬಿಸಿಲಿನ ಝಳ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ತಮ್ಮ ಸೌಂದರ್ಯವನ್ನು ಬಿಸಿಲಿನಿಂದ ಹೇಗಪ್ಪಾ ಕಾಪಾಡಿಕೊಳ್ಳುವುದು ಎಂದು ಚಿಂತಿಸುವವರು ಅರಿಶಿನದ ಬಳಕೆಯನ್ನು ಹೆಚ್ಚೆಚ್ಚು ಮಾಡಿಕೊಳ್ಳುವುದು ಜಾಣತನವಾಗಿದೆ. ಅರಿಶಿನವು ಆರೋಗ್ಯದ ದೃಷ್ಟಿಯಿಂದ ಹಲವು ರೀತಿಯಲ್ಲಿ ಉಪಯೋಗಕಾರಿ ಆಗಿರುವುದರಿಂದ ಅದರ ಮಹತ್ವ ಅರಿತು ದಿನ ನಿತ್ಯ ಬಳಕೆ ಮಾಡಿದರೆ ಬೇಸಿಗೆಯಲ್ಲಿ ತ್ವಚೆಯ ಸುಂದರತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ.
ಸಾಮಾನ್ಯವಾಗಿ ಮಲೆನಾಡಿನ ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಅರಿಶಿನದ ಗಿಡ ಇದ್ದೇ ಇರುತ್ತದೆ. ಇದನ್ನು ಇಲ್ಲಿನವರು ವಾಣಿಜ್ಯ ಉದ್ದೇಶಕ್ಕೆ ಬೆಳೆಯದಿದ್ದರೂ ತಮ್ಮ ಉಪಯೋಗಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಬಹಳಷ್ಟು ಮನೆ ಮದ್ದುಗಳಲ್ಲಿ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಅರಿಶಿನ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಇದರ ಮುಂದೆ ಎಲ್ಲ ಸೌಂದರ್ಯ ವರ್ಧಕಗಳು ಗೌಣವಾಗಿಬಿಡುತ್ತವೆ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸೌಂದರ್ಯ ವರ್ಧಕಗಳು ಬಂದಿವೆ. ಮೊದಲೆಲ್ಲ ಸೌಂದರ್ಯ ವರ್ಧಕವಾಗಿ ಮನೆಯ ಸುತ್ತ ಸಿಗುತ್ತಿದ್ದ ಗಿಡಮೂಲಿಕೆಗಳನ್ನೇ ಮಹಿಳೆಯರು ಬಳಸುತ್ತಿದ್ದರು. ಆಗ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದೇ ಅರಿಶಿನವಾಗಿದೆ. ಮದುವೆ ಶುಭಸಮಾರಂಭದಲ್ಲಿ ಅರಿಶಿನಕ್ಕೆ ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ವಧು-ವರರನ್ನು ಇಂದಿಗೂ ಅರಿಶಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಕಾರಣ ವಿವಾಹದ ಸಂದರ್ಭ ಕಾಂತಿಯುತವಾಗಿ ಕಾಣಲಿ ಎಂಬ ಉದ್ದೇಶ ಇದಾಗಿದೆ
ಅರಿಶಿನವನ್ನು ಉಪಯೋಗಿಸುವುದರ ಮೂಲಕ ಯಾವ ರೀತಿಯ ಉಪಯೋಗ ಪಡೆಯಬಹುದು ಮತ್ತು ಅದು ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಯುರ್ವೇದದಲ್ಲಿ ಈ ಹಿಂದೆಯೇ ವಿವರಿಸಲಾಗಿದೆ. ಅದರಂತೆ ಅರಿಶಿನವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ ಮುಖ ಕಾಂತಿಯುವಾಗುತ್ತದೆ.
ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ ಅರೆದು ಉಪಯೋಗಿಸಬಹುದು. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಮೇಲೆ ಗುರುತುಗಳು, ಕಲೆಗಳು ಮೂಡುವುದು ಸಾಮಾನ್ಯ. ಆಗ ಹಾಲಿನೊಂದಿಗೆ ಅರಿಶಿನ ಅರೆದು ಹೊಟ್ಟೆಗೆ ಹಚ್ಚಿ ಸ್ನಾನದ ಮೊದಲು ತೆಂಗಿನ ಎಣ್ಣೆಯನ್ನು ಹಚ್ಚುತ್ತಿದ್ದರೆ ಈ ಗುರುತುಗಳು ಮಾಯವಾಗುತ್ತವೆ. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ.
ಗುಲಾಬಿ ದಳಗಳು ಮತ್ತು ಒಣಗಿಸಿ ಕುಟ್ಟಿ ಪುಡಿ ಮಾಡಿದ ಅರಿಶಿನವನ್ನು ಅತ್ಯುತ್ತಮವಾದ ಸ್ನಾನದ ಪುಡಿಯನ್ನಾಗಿ ಬಳಸಬಹುದು. ಸಾಬೂನಿನ ಬದಲಾಗಿ ಇದನ್ನೇ ಬಳಸಿದರೆ ಅನೇಕ ಬಗೆಯ ಚರ್ಮರೋಗಗಳು ಗುಣವಾಗುತ್ತವೆ. ಜತೆಗೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶ ಮಾಡದೆ ರಕ್ಷಿಸಿ ಚರ್ಮವನ್ನು ಸುಸ್ಥಿತಿಯಲ್ಲಡುತ್ತದೆ. ಸೊಳ್ಳೆ ಮುಂತಾದ ಕೀಟಗಳು ಕಚ್ಚಿದಾಗ ಉಂಟಾಗುವ ದದ್ದು ಬಾವುಗಳು ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಬಂಗು, ಚಿಬ್ಬು, ಇತ್ಯಾದಿ ಕಲೆಗಳ ನಿವಾರಣೆಗೆ ಹಾಲಿನ ಕೆನೆ, ಅಥವಾ ನಿಂಬೆ ರಸದಲ್ಲಿ ಅರಿಶಿನವನ್ನು ತೇಯ್ದು ಲೇಪಿಸಿ ಎರಡು ಗಂಟೆಗಳ ಕಾಲ ಬಿಟ್ಟು ಬಿಸಿ ನೀರಿನಿಂದ ಕಡಲೆ ಹಿಟ್ಟು ಬಳಸಿ ತೊಳೆದರೆ ಮಾಯವಾಗುತ್ತದೆ. ಅರಿಶಿವನ್ನು ಮನೆ ಬಳಿ ಒಂದಿಷ್ಟು ಜಾಗವಿದ್ದರೆ ಯಾರೂ ಬೇಕಾದರೂ ಬೆಳೆಸಿಕೊಂಡು ಉಪಯೋಗಿಸಿಕೊಳ್ಳಬಹುದಾಗಿದೆ. ಅಂಗಡಿಗಳಲ್ಲಿ ಒಣಗಿಸಿದ ಅರಿಶಿನದ ಕೊಂಬು ಅಥವಾ ಪುಡಿ ಸಿಗುತ್ತದೆಯಾದರೂ ತಾಜಾ ಅರಿಶಿನವನ್ನು ಬಳಸುವುದು ಉತ್ತಮ.
ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅರಿಶಿನವು ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಉತ್ಪತ್ತಿಯಾಗುವ ವ್ಯಾಪಕವಾಗಿ ಬಳಸಲಾಗುವ ಮಸಾಲೆಯಾಗಿದೆ. ಇದನ್ನು ಚೀನೀ ಮತ್ತು ಆಯುರ್ವೇದ ಔಷಧದಲ್ಲಿ ಗಿಡಮೂಲಿಕೆಗಳ ಚಿಕಿತ್ಸೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಅರಿಶಿನವು ಯಕೃತ್ತನ್ನು ರಕ್ಷಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸಂಧಿವಾತವನ್ನು ನಿವಾರಿಸಲು ಸಂಭಾವ್ಯ ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ಆಹಾರದಲ್ಲಿ ಒಂದು ಚಮಚ ಅರಿಶಿನವನ್ನು ಸೇರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಹೆಚ್ಚು ಸುಧಾರಿಸಿಕೊಳ್ಳಬಹುದು.
ಹಲವಾರು ಸಂಶೋಧನೆಗಳು ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಹೃದಯ-ಆರೋಗ್ಯಕರ ಪರಿಣಾಮಗಳನ್ನು ಪ್ರದರ್ಶಿಸಿವೆ. ರಿಸರ್ಚ್ ಟ್ರಸ್ಟೆಡ್ ಸೋರ್ಸ್ನ ಸಂಶೋಧನೆಯ ಪ್ರಕಾರ, ಕರ್ಕ್ಯುಮಿನ್ ರಕ್ತವನ್ನು ತೆಳುಗೊಳಿಸಲು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಅಪಧಮನಿಗಳು ಕಿರಿದಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ವಿವಿಧ ಹೃದಯ ರಕ್ತನಾಳದ ಸಮಸ್ಯೆಗಳ ವಿರುದ್ಧ ರಕ್ಷಣೆಯ ಪದರವನ್ನು ಒದಗಿಸಬಹುದು.
ಕರ್ಕ್ಯುಮಿನ್ನ ಕ್ಯಾನ್ಸರ್ ವಿರೋಧಿ ಪರಿಣಾಮವು ಕ್ಲಿನಿಕಲ್ ಪ್ರಯೋಗಗಳಲ್ಲಿ ಅದರ ಅತ್ಯಂತ ಸುಸ್ಥಾಪಿತ ಔಷಧೀಯ ಗುಣಗಳಲ್ಲಿ ಒಂದಾಗಿದೆ.
ಕರ್ಕ್ಯುಮಿನ್ ಜೀವಕೋಶದ ಹಾನಿ ಮತ್ತು ನಂತರದ ರೂಪಾಂತರಗಳು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ವಿರೋಧಿಯಾಗಿದೆ. ಕರ್ಕ್ಯುಮಿನ್ ಆಂಟಿ-ಟ್ಯೂಮರ್ ಪರಿಣಾಮಗಳನ್ನು ಸಹ ಹೊಂದಿದೆ, ಇದು ಹಲವಾರು ಅಧ್ಯಯನಗಳ ಪ್ರಕಾರ ಗೆಡ್ಡೆಗಳ ರಚನೆ ಮತ್ತು ಅಪಾಯಕಾರಿ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ.
ಕ್ಯಾನ್ಸರ್ ಚಿಕಿತ್ಸೆಯಾಗಿ ವಿಕಿರಣ ಮತ್ತು ಕೀಮೋಥೆರಪಿಯೊಂದಿಗೆ ಕರ್ಕ್ಯುಮಿನ್ ಬಳಕೆಯನ್ನು ಈಗ ಸಂಶೋಧಕರು ಅಧ್ಯಯನ ಮಾಡುತ್ತಿದ್ದಾರೆ. ಅರಿಶಿನ, ಶುಂಠಿ ಮತ್ತು ಕರಿಮೆಣಸಿನೊಂದಿಗೆ ತಯಾರಿಸಿದ ಚಹಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗಳಲ್ಲಿ ಒಂದಾಗಿದೆ.
ಕರ್ಕ್ಯುಮಿನ್ನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಸಾಮರ್ಥ್ಯಗಳು ಇದನ್ನು ಆರೋಗ್ಯವನ್ನು ಉತ್ತೇಜಿಸುವ ಶಕ್ತಿ ಕೇಂದ್ರವನ್ನಾಗಿ ಮಾಡುತ್ತದೆ. ಕರ್ಕ್ಯುಮಿನ್ ರಕ್ತಪ್ರವಾಹಕ್ಕೆ ಚೆನ್ನಾಗಿ ಹೀರಿಕೊಳ್ಳುವುದಿಲ್ಲವಾದರೂ, ಕರಿಮೆಣಸಿನೊಂದಿಗೆ ಇದನ್ನು ತಿನ್ನುವುದು ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ, ಏಕೆಂದರೆ ಮೆಣಸಿನಕಾಯಿಯಲ್ಲಿ ಕಂಡು ಬರುವ ಪೈಪರಿನ್, ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಅರಿಶಿನದ ಗುಣಲಕ್ಷಣಗಳಿಂದ ಅದರ ಶಕ್ತಿಯುತ ರುಚಿಯನ್ನು ಹೊಂದದೆಯೇ ಪ್ರಯೋಜನವನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ. ಈ ಮೂಲಿಕೆಯು ಪ್ರಬಲವಾದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದಾಗಿ ಇದನ್ನು ತೂಕ ಇಳಿಸುವ ಸಾಧನವಾಗಿ ಶಿಫಾರಸು ಮಾಡಲಾಗಿದೆ. ಪಿತ್ತಕೋಶ ಮತ್ತು ಇತರ ಜೀರ್ಣಕಾರಿ ಕಿಣ್ವಗಳಲ್ಲಿ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯದಿಂದಾಗಿ, ಅರಿಶಿನವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.
ಅರಿಶಿನವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ಉಬ್ಬುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮಕಾರಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆರೋಗ್ಯಕರ ಚಯಾಪಚಯ ಕ್ರಿಯೆಯು ಸಹಾಯ ಮಾಡುತ್ತದೆ. ಅರಿಶಿನವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ಉಬ್ಬುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮಕಾರಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆರೋಗ್ಯಕರ ಚಯಾಪಚಯ ಕ್ರಿಯೆಯು ಸಹಾಯ ಮಾಡುತ್ತದೆ
ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಅರಿಶಿನವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಅರಿಶಿನ ಬಹುಪಕಾರಿ. ಅರಿಶಿನವಿಲ್ಲದೆ ಯಾವುದೇ ಧಾರ್ಮಿಕ ಆಚರಣೆ ಪೂರ್ಣಗೊಳ್ಳುವುದಿಲ್ಲ. ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ. ಅರಿಶಿನವು ಅಡುಗೆಮನೆಯಲ್ಲಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಇದು ಧಾರ್ಮಿಕ ಕಾರ್ಯಗಳನ್ನು ಸಹ ಪೂರ್ಣಗೊಳಿಸುತ್ತದೆ. ಅರಿಶಿನದಿಂದಾಗಿ, ಅನೇಕ ರೀತಿಯ ವಾಸ್ತು ದೋಷಗಳನ್ನು ಸಹ ತೆಗೆದುಹಾಕಲಾಗುತ್ತದೆ.
ಪೂಜೆಯ ಸಮಯದಲ್ಲಿ ಕೈ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಅರಿಶಿನದ ಬೊಟ್ಟು ಅಥವಾ ಹುಂಡು ಇಡುವುದರಿಂದ ಗುರು ಗ್ರಹವು ಜಾತಕದಲ್ಲಿ ಬಲಗೊಳ್ಳುತ್ತದೆ ಮತ್ತು ಆ ವ್ಯಕ್ತಿಯ ಮಾತು ಸಮಾಜದಲ್ಲೊ ಗೌರವಪೂರ್ವಕವಾಗಿರುತ್ತದೆ. ಹಿಂದೂ ಧರ್ಮದಲ್ಲಿ, ಅರಿಶಿನ ದಾನವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಅರಿಶಿನ ದಾನ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎನ್ನುವ ನಂಬಿಕೆಯಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರವನ್ನು ತೆಗೆದುಕೊಂಡರೆ, ನಾವು ಅರಿಶಿನ ದಾನ ಮಾಡುವುದರಿಂದ ಗುರು ಗ್ರಹದಲ್ಲಿ ಹೊಂದಾಣಿಕೆ ರೂಪುಗೊಳ್ಳುತ್ತದೆ ಎಂದು ಹೇಳಲಾಗಿದೆ. ಪೂಜೆಯಲ್ಲಿ ಹಣೆಯ ಮೇಲೆ ಅರಿಶಿನ ತಿಲಕ ಹಚ್ಚುವುದರಿಂದ ಮದುವೆಗೆ ಸಂಬಂಧಿಸಿದ ಕೆಲಸಕ್ಕೆ ಸಹಾಯ ಮಾಡುತ್ತದೆ. ವಿವಾಹ ಸಂಬಂಧಗಳಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ ಹಣೆಗೆ ಅರಿಶಿನದ ತಿಲಕವನ್ನು ಇಡಬೇಕು. ಇದು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ಅಥವಾ ಮನೆಯನ್ನು ಪ್ರವೇಶಿಸುವಲ್ಲಿ ಅಥವಾ ಮನೆಯ ಗೋಡೆಯ ಸುತ್ತ ಅರಿಶಿನ ರೇಖೆಯನ್ನು ಹಾಕುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಆ ಮನೆಯೊಳಗೆ ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಹಿಂದೆ ಕೆಲವು ಹಳ್ಳಿಗಳಲ್ಲಿ ಪೌರ್ಣಮಿ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಈ ರೀತಿ ಮಾಡುತ್ತಿದ್ದರು. ಅರಿಶಿನ ಬಳಕೆಯಲ್ಲಿ, ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ನಂತರ ಆ ನೀರಿನಿಂದ ಸ್ನಾನ ಮಾಡಿದರೆ, ಅದು ಆ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ನೀಡುತ್ತದೆ. ಈ ಪ್ರಯೋಗವು ವೃತ್ತಿಜೀವನದ ಯಶಸ್ಸಿಗೆ ಸೂಕ್ತವಾದ ರಾಮಬಾಣವಾಗಿದೆ. ಅರಿಶಿನದ ಕೊಂಬಿಗೆ ಮೋಲಿ ದಾರವನ್ನು ಸುತ್ತಿ ಅಥವಾ ಮೋಲಿ ದಾರಕ್ಕೆ ಅರಿಶಿನವನ್ನು ಹಚ್ಚಿ ರಾತ್ರಿ ಮಲಗಿದ್ದಾಗ ಹಾಸಿಗೆಯಲ್ಲಿ ಇಡುತ್ತಾರೆ, ಆಗ ಆ ವ್ಯಕ್ತಿಗೆ ದುಃಸ್ವಪ್ನಗಳು ಬೀಳುವುದಿಲ್ಲ. ಇದನ್ನು ಮಾಡುವುದರಿಂದ ಅತಿಯಾದ ಮತ್ತು ಹೊರಗಿನ ಗಾಳಿಯಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಗಾಳಿಯಲ್ಲಿನ ನಕಾರಾತ್ಮಕ ಶಕ್ತಿಗಳು ಕೂಡ ನಮ್ಮನ್ನು ಮುಟ್ಟುವುದಿಲ್ಲ. ಪ್ರತಿ ಗುರುವಾರ ಭಗವಾನ್ ಗಣೇಶನಿಗೆ ಒಂದು ಚಿಟಿಕೆ ಅರಿಶಿನವನ್ನು ಅರ್ಪಿಸಿದರೆ, ಆಗ ವಿವಾಹದಲ್ಲಿನ ಎಲ್ಲಾ ಅಡೆತಡೆಗಳು ದೂರಾಗುತ್ತದೆ. ಅದೇ ಸಮಯದಲ್ಲಿ, ವಿಷ್ಣು ಮತ್ತು ಲಕ್ಷ್ಮಿಯ ವಿಗ್ರಹಗಳ ಹಿಂದೆ ಅರಿಶಿನವನ್ನು ಯಾರಿಗೂ ತಿಳಿಯದಂತೆ ಅಡಿಗಿಸಟ್ಟರೆ ವಿವಾಹವು ಬಹುಬೇಗ ಆಗುತ್ತದೆ. ಅರಿಶಿನ ಬಳಕೆಯು ಜೀವನಕ್ಕೆ ಸಮೃದ್ಧಿಯನ್ನು ತರುತ್ತದೆ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಅದಕ್ಕಾಗಿಯೇ ಇದನ್ನು ಪೂಜೆ, ಹೋಮ ಮತ್ತು ಹವನ, ಪಠಣ ಇತ್ಯಾದಿಗಳಲ್ಲಿಯೂ ಬಳಸಲಾಗುತ್ತದೆ. ಪ್ರತಿನಿತ್ಯ ಸ್ನಾನದ ನೀರಿಗೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿ ಹಣೆಗೆ ಅರಿಶಿನದ ತಿಲಕವನ್ನಿಟ್ಟುಕೊಳ್ಳಿ. ಸೂರ್ಯನಿಗೆ ಅರಿಶಿನ ಬೆರೆಸಿದ ನೀರನಿಂದ ಅರ್ಘ್ಯವನ್ನು ಅರ್ಪಿಸುವ ಮೂಲಕ, ಹುಡುಗಿ ತನಗೆ ಬೇಕಾದ ವರನನ್ನು ವಿವಾಹವಾಗುತ್ತಾಳೆ. ಅಷ್ಟು ಮಾತ್ರವಲ್ಲ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ನಮ್ಮೆಲ್ಲಾ ಆರೋಗ್ಯದ ಸಮಸ್ಯೆಗಳು ಕೂಡ ದೂರಾಗುತ್ತದೆ. ಅರಿಶಿನದ ಜಪಮಾಲೆಯೊಂದಿಗೆ ನೀವು ಯಾವುದೇ ಮಂತ್ರವನ್ನು ಜಪಿಸಿದರೆ, ನೀವು ಅತಿಯಾದ ಬುದ್ಧಿಶಕ್ತಿಯನ್ನು ಹೊಂದುತ್ತೀರಿ ಮತ್ತು ಇದು ನಿಮ್ಮ ಗಮನವನ್ನು ಮಂತ್ರದ ಮೇಲೆ ಕೇಂದ್ರೀಕರಿಸಲು ಸಹಕರಿಸುತ್ತದೆ. ಇದರೊಂದಿಗೆ ನಿಮ್ಮ ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ. ಹೀಗೆ ಆರೋಗ್ಯ, ಸೌಂದರ್ಯ ಹೀಗೆ ಹಲವಾರು ವಿಚಾರದಲ್ಲಿ ಅರಿಶಿನ ಉಪಯುಕ್ತವಾಗಿದೆ.
ನೋಡಿದ್ರಲ್ಲ..ಅರಿಶಿನದಿಂದ ಎಷ್ಟು ಬೆನಿಫಿಟ್ ಇದೆ ಎಂಬುವುದನ್ನು ತಿಳ್ಕೊಂಡ್ರಲ್ವಾ!? ಇದೀಗ ಇದರ ಅತಿ ಸೇವನೆಯಿಂದಾಗುವ ಅನಾನುಕೂಲಗಳೇನು!? ಅರಿಶಿನ ಅತಿಯಾಗಿ ಸೇವಿಸಿದ್ರೆ ಎದುರಿಸುವ ಗಂಭೀರ ಸಮಸ್ಯೆ ಏನು!? ತಿಳಿಯೋಣ ಸ್ಮಾಲ್ ಬ್ರೇಕ್ ಆದ್ಮೇಲೆ..
“ಅತಿ ಸರ್ವತ್ರ್ ವರ್ಜನ್ಯೆ” ಎಂಬ ಸಾಲುಗಳನ್ನು ನಿಮ್ಮ ಹಿರಿಯರ ಬಾಯಿಂದ ನೀವು ಅನೇಕ ಬಾರಿ ಕೇಳಿರಬಹುದು. ಇದರರ್ಥ ಅತಿಯಾದ ಯಾವುದೇ ವಿಷಯವು ನಿಮಗೆ ಹಾನಿಕಾರಕವಾಗಬಹುದು. ಅದು ಎಷ್ಟೇ ಪ್ರಯೋಜನಕಾರಿಯಾಗಿದ್ದರೂ ಪರವಾಗಿಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತೆ. ಇದು ಅರಿಶಿನಕ್ಕೂ ಅನ್ವಯಿಸುತ್ತದೆ. ಅರಿಶಿನವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಗಂಭೀರದಿಂದ ತೀವ್ರವಾದ ರೋಗಗಳನ್ನು ತೆಗೆದುಹಾಕಲು ಪರಿಣಾಮಕಾರಿಯಾಗಬಹುದು, ಆದರೆ ಅದನ್ನು ಅತಿಯಾಗಿ ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೂ ಮಾರಕವಾಗಬಹುದು. ಹೌದು, ಅರಿಶಿನದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅರಿಶಿನವನ್ನು ಅತಿಯಾಗಿ ತಿನ್ನೋದ್ರಿಂದ ಉಂಟಾಗುವ ಅನಾನುಕೂಲಗಳು ಯಾವುವು ಎಂದು ತಿಳಿಯೋಣ.
ಅರಿಶಿನವು ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಈ ಗುಣಗಳು ನಿಮ್ಮನ್ನು ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ. ಈ ಗುಣಲಕ್ಷಣಗಳಿಂದಾಗಿ, ಅರಿಶಿನವು ಹೆಚ್ಚು ಪ್ರಸಿದ್ಧವಾಗಿದೆ. ಆದರೆ ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ನೀವು ಈ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರತಿದಿನ ಒಂದು ಟೀಸ್ಪೂನ್ ಅರಿಶಿನವನ್ನು ಸೇವಿಸುವುದು ಅದರ ಪ್ರಯೋಜನವನ್ನು ಪಡೆಯಲು ಸಾಕು ಎಂದು ತಜ್ಞರು ಸೂಚಿಸುತ್ತಾರೆ.
ಒಂದು ವೇಳೆ, ನೀವು ಅರಿಶಿನವನ್ನು ಹೆಚ್ಚು ಸೇವಿಸಿದರೆ, ಅದು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲದೇ ಇದರಿಂದ ತಲೆತಿರುಗುವಿಕೆ ಸಹ ಅನುಭವಿಸಬಹುದು. ಒಬ್ಬ ವ್ಯಕ್ತಿಯು ಇದನ್ನು ಕ್ಯಾಪ್ಸೂಲ್ ಅಥವಾ ಪೂರಕಗಳ ರೂಪದಲ್ಲಿ ಸೇವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಇದು ಕಂಡುಬರುತ್ತದೆ. ಆದ್ದರಿಂದ, ತಜ್ಞರು ಆಗಾಗ್ಗೆ ಅರಿಶಿನವನ್ನು ನೈಸರ್ಗಿಕ ರೂಪದಲ್ಲಿ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
ನೀವು ಅರಿಶಿನವನ್ನು ಅತಿಯಾಗಿ ಸೇವಿಸಿದರೆ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಯಾವುದೇ ಆಕ್ಸಲೇಟ್ ಸಮೃದ್ಧ ಆಹಾರದ ಅತಿಯಾದ ಸೇವನೆಯು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು
ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ನಿಮ್ಮ ಹೊಟ್ಟೆಗೆ ಹಾನಿಯಾಗಬಹುದು. ನೀವು ದಿನವಿಡೀ 1 ಟೀಸ್ಪೂನ್ ಗಿಂತ ಹೆಚ್ಚು ಅರಿಶಿನ ಸೇವಿಸಿದರೆ, ಅದು ಹೊಟ್ಟೆಯ ಅಸ್ವಸ್ಥತೆ, ಅತಿಸಾರ, ವಾಂತಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣ ಹೀರಿಕೊಳ್ಳುವುದನ್ನು ನಿಲ್ಲಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. ಅರಿಶಿನದಲ್ಲಿ ಅನೇಕ ಅಂಶಗಳು ಕಂಡುಬರುತ್ತವೆ, ಅವುಗಳಲ್ಲಿ ಒಂದು ಕರ್ಕ್ಯುಮಿನ್ ಆಗಿದೆ. ಈ ಕರ್ಕ್ಯುಮಿನ್ ಜೀರ್ಣಕಾರಿ ಸಮಸ್ಯೆಗಳನ್ನು (digestion problem) ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ, ಅನೇಕ ಬಾರಿ ಅತಿಸಾರ ಅಥವಾ ವಾಂತಿಯ ಸಮಸ್ಯೆಯೂ ಸಂಭವಿಸಲು ಪ್ರಾರಂಭಿಸುತ್ತದೆ. ಆದರೆ ನೀವು ಹೆಚ್ಚು ಅರಿಶಿನವನ್ನು ಸೇವಿಸಿದರೆ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ. ಅರಿಶಿನದ ಗುಣಲಕ್ಷಣಗಳನ್ನು ಚರ್ಮ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ನೀವು ಅದನ್ನು ಅತಿಯಾಗಿ ಸೇವಿಸಿದಾಗ ಅದರಿಂದ ಚರ್ಮಕ್ಕೆ ಹಾನಿಯಾಗುತ್ತೆ. ಅರಿಶಿನದ ಸೇವನೆಯು ಉಸಿರಾಟದ ತೊಂದರೆ ಮತ್ತು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಇದರಿಂದ ಉಂಟಾಗುವ ಅಲರ್ಜಿಯು ಚರ್ಮ ಮತ್ತು ಒಳಭಾಗಕ್ಕೂ ಹರಡಬಹುದು.
ಇನ್ನೂ ಅರಿಶಿನದಲ್ಲಿ ಸಕ್ರಿಯ ಸಂಯುಕ್ತವಾದ ಕರ್ಕುಮಿನ್ ಇದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುವ ಮತ್ತು ಅಲ್ಝೈಮರ್ ಮತ್ತು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯದಂಥ ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಪ್ರಬಲ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕವಾಗಿದೆ. ಖಿನ್ನತೆ ಮತ್ತು ಸಂಧಿವಾತದ ಲಕ್ಷಣಗಳನ್ನು ಸುಧಾರಿಸಲೂ ಸಹಾಯ ಮಾಡಬಹುದು.
ಅರಿಸಿನ ವನ್ನು ಸೇವಿಸುವುದು ನಮಗೆ ತುಂಬಾ ಪ್ರಯೋಜನಕಾರಿ ಎಂದುಕೊಂಡಿದ್ದೇವೆ. ಆದರೆ, ಅರಿಶಿನವು ಎಲ್ಲರಿಗೂ ಒಂದೇ ರೀತಿಯ ಪ್ರಯೋಜನಗಳನ್ನು ತರುವುದಿಲ್ಲ. ಅರಿಶಿನದಿಂದ ಸಮಸ್ಯೆ ಎದುರಿಸಿದವರು ನಮ್ಮಲ್ಲಿ ಅನೇಕರು ಇದ್ದಾರೆ. ಅರಿಶಿನವನ್ನು ಯಾರು ಸೇವಿಸಬಾರದು ಎಂದು ಹೇಳುತಿದ್ದೇವೆ. ಅಂದರೆ, ಯಾರಿಗೆ ಅರಿಶಿನ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದು ನೋಡೋಣ.
ಅಪೆಂಡಿಸೈಟಿಸ್ ರೋಗಿಗಳು ಜಾಗರೂಕರಾಗಿರಿ
ಅಪೆಂಡಿಸೈಟಿಸ್ (ಸ್ಟೋನ್ಸ್) ಹೊಂದಿರುವ ರೋಗಿಗಳು ಅರಿಶಿನವನ್ನು ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ವಾಸ್ತವವಾಗಿ, ಆಗಾಗ್ಗೆ ಅಪೆಂಡಿಸೈಟಿಸ್ ಹೊಂದಿರುವ ಜನರು ಅರಿಶಿನವನ್ನು ಸೇವಿಸುತ್ತಿರುವುದರಿಂದಲೇ ಈ ಸಮಸ್ಯೆ ಎದುರಿಸುತ್ಬತಿರಹುದು. ಆದ್ದರಿಂದ ಅರಿಶಿನದ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ ಮತ್ತು ಅದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಮಧುಮೇಹ(Diabetes) ರೋಗಿಗಳು ಸೇವಿಸಬಾರದು
ಮಧುಮೇಹ ಇರುವವರು ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ರಕ್ತವನ್ನು ದುರ್ಬಲಗೊಳಿಸಲು ಔಷಧಿಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಅರಿಶಿನದ ಅತಿಯಾದ ಸೇವನೆಯಿಂದ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಬಹುದು. ಇದು ದೇಹಕ್ಕೆ ಹಾನಿ ಮಾಡುತ್ತದೆ.
ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸುತ್ತದೆ
ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಮೂಗಿನಿಂದ ಅಥವಾ ದೇಹದ ಇತರ ಭಾಗಗಳಿಂದ ಹಠಾತ್ ರಕ್ತಸ್ರಾವವನ್ನು ಹೊಂದಿರುವ ಜನರು ಅರಿಶಿನದ ಸೇವನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ಅವರಿಗೆ ಹಾನಿ ಮಾಡಬಹುದು.
ಕಾಮಾಲೆ ಇರುವವರು ಅರಿಶಿನವನ್ನು ತಿನ್ನಬಾರದು. ಈ ಕಾಯಿಲೆಯಿಂದ ಚೇತರಿಸಿಕೊಂಡ ನಂತರವೂ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅರಿಶಿನವನ್ನು ಸೇವಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು.
ಅರಿಶಿನದ ಶುದ್ಧೀಕರಣದ ಗುಣಗಳು ಸಹ ನಿಮ್ಮನ್ನು ಹೆಚ್ಚು ಸುಲಭವಾಗಿ ರಕ್ತಸ್ರಾವವಾಗುವಂತೆ ಮಾಡಬಹುದು. ಇದು ಏಕೆ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅರಿಶಿನದ ಇತರ ಸೂಚಿಸಿದ ಪ್ರಯೋಜನಗಳಾದ ಕಡಿಮೆ ಕೊಲೆಸ್ಟ್ರಾಲ್ ಮತ್ತು ಕಡಿಮೆ ರಕ್ತದೊತ್ತಡ, ಬಹುಶಃ ನಿಮ್ಮ ರಕ್ತದಲ್ಲಿ ಅರಿಶಿನ ಕಾರ್ಯ ನಿರ್ವಹಿಸುವ ವಿಧಾನದೊಂದಿಗೆ ಏನಾದರೂ ಸಂಬಂಧ ಹೊಂದಿದೆ ಎನ್ನಲಾಗಿದೆ. ಇದರಿಂದ ರಕ್ತ ತೆಳುವಾಗುತ್ತದೆ ಎನ್ನಲಾಗಿದೆ.
ಅರಿಶಿನ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರದ ಆಕ್ಸಲೇಟ್ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು, ಇದು ಮೂತ್ರಪಿಂಡದ ಕಲ್ಲು ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಉಚಿತ. ಹೀಗೆ ಅರಿಶಿನ ಅನುಕೂಲದ ಜೊತೆ ಕೆಲವೊಂದು ಅನಾನುಕೂಲ ಹೊಂದಿದೆ.