ತುಮಕೂರು:– ಕಿವಿಯೂ ಕೇಳಿಸದ, ಮಾತೂ ಬಾರದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ವ್ಯಕ್ತಿ ಪರಾರಿ ಆಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಪ್ಪಾಜಿಹಳ್ಳಿಯಲ್ಲಿ ಜರುಗಿದೆ.
ಹಾಲಿನ ದರ ಏರಿಕೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ಪ್ರತಿಭಟನೆ..!
ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿ ಭೂಪ ಪರಾರಿಯಾಗಿದ್ದಾನೆ. ಅದೇ ಗ್ರಾಮದ ಮನೋಹರ ರೆಡ್ಡಿ ಅತ್ಯಾಚಾರ ಎಸಗಿ ಪರಾರಿಯಾಗಿರೋ ಆರೋಪಿ ಎನ್ನಲಾಗಿದೆ. ಮಹಿಳೆಯ ಗಂಡ ಗುರುಪ್ರಸಾದ್ ಕುರಿ ಕಾವಲುಗಾಗಿ ಜಮೀನಿನಲ್ಲಿ ಮಲಗಿದ್ದಾಗ ಘಟನೆ ಜರುಗಿದೆ.
ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)