ಚಿತ್ರದುರ್ಗ:- ಚಂದ್ರಶೇಖರ್ ಸ್ವಾಮೀಜಿ ಪ್ರತ್ಯೇಕ ರಾಜ್ಯ ಕೂಗಿನ ಹೇಳಿಕೆ ವಿಚಾರವಾಗಿ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
IRB ಸ್ಥಾಪಿಸುವ ಪ್ರಸ್ತಾಪ ಪುನರ್ ಪರಿಶೀಲಿಸಲು ಅರವಿಂದ್ ಬೆಲ್ಲದ್ ಆಗ್ರಹ.. !
ಈ ಸಂಬಂಧ ಮಾತನಾಡಿದ ಅವರು, ಸ್ವಾಮೀಜಿ ಹೇಳಲಿ ಯಾರೇ ಹೇಳಲಿ ಅದು ಅಸಾಧ್ಯ. ಹರಿದು ಹಂಚಿ ಹೋದ ರಾಜ್ಯ ಒಗ್ಗೂಡಿಕೆಗೆ ಪೂರ್ವಜರು ಹೋರಾಟ ಮಾಡಿದ್ದಾರೆ. ನಾಡು ನುಡಿಗೆ ಪೂರ್ವಜರ ಇತಿಹಾಸದ ಮಾಹಿತಿ ಕೊರತೆಯಿಂದ ಹಿಂಗೆ ಹೇಳ್ತಾರೆ. ಅಖಂಡ ಕರ್ನಾಟಕ ಎಂದಿಗೂ ಒಂದಾಗಿ ಇರಬೇಕು. ರಾಜ್ಯ ಇಬ್ಭಾಗ ಆಗುವ ಪ್ರಶ್ನೆ ಎತ್ತಬಾರದು ಕೈಮುಗಿದು ಕೇಳುತ್ತೇನೆ. ಕರ್ನಾಟಕದ ಇತಿಹಾಸ ಮೊದಲು ತಿಳಿದು ಮಾತಾಡಬೇಕು. ಮಾಹಿತಿ ಕೊರತೆಯಿಂದ ಇಂತ ಹೇಳಿಕೆ ಕೊಡ್ತಾರೆ ಎಂದರು.
ಕಾಂಗ್ರೆಸ್ ಸಿಎಂ ಬಡಿದಾಟ ವಿಚಾರವಾಗಿ ಮಾತನಾಡಿ, ಜಾತಿ ಆಧಾರದ ಮೇಲೆ ರಾಜಕೀಯ ಪರಮಾಧಿಕಾರ ಹಂಚುವ ಕೆಲಸ. ಅರ್ಹತೆ ಮತ್ತು ದಕ್ಷತೆ ಆಧಾರದ ಮೇಲೆ ಆಗ್ಬೇಕು. ಎಲ್ಲಾ ವರ್ಗದವರಿಗೆ ರಾಜಕೀಯ ಅವಕಾಶ ಸಿಗಬೇಕು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಎಲ್ಲರೂ ನಡೆದುಕೊಳ್ಳಬೇಕು. ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕಕ್ಕೇ ಮಲತಾಯಿ ಧೋರಣೆ ಆಗಿದೆ. ಚಿತ್ರದುರ್ಗಕ್ಕೆ ಸಹ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.
ವಾಲ್ಮೀಕಿ ನಿಗಮದ ಅಕ್ರಮ ಹಗರಣ ವಿಚಾರವಾಗಿ ಮಾತನಾಡಿ, ದಲಿತರಿಗೆ ಮೀಸಲಾದ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಖಜಾನೆ ಲೂಟಿ ಮಾಡಿ ಹಣ ದುರುಪಯೋಗ ಮಾಡಿಕೊಂಡಿದೆ. ಇದರ ಹಿಂದೆ ಸರ್ಕಾರದ ಕೈವಾಡ ಇದೆ. ಕೂಡಲೇ 187 ಕೋಟಿ ಹಣವನ್ನು ಜಮೆ ಮಾಡ್ಬೇಕು. ಜಿಲ್ಲೆಯಲ್ಲಿ ಗುರುತಿಸಿದ ಪ್ರವಾಸಿ ತಾಣಗಳು 20 ಇದೆ. ಪ್ರಾಜೆಕ್ಟ್ ರಿಪೋರ್ಟ್ ಕೊಡುವಂತೆ ಕೇಳಿದ್ದೇನೆ. ಹೆಚ್ಕೆ ಪಾಟೀಲ್ ಜೊತೆ ಸಹ ಮಾತುಕತೆ ನಡೆಸಿದ್ದೇನೆ. ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು ಮುಂದುವರೆಯುತ್ತೇನೆ ಎಂದರು.