ಬೆಂಗಳೂರು:– ವಿಗ್ ನಿರ್ವಹಣೆ ಮಾಡಲಾಗದೆ ಪೂರ್ಣ ಕೂದಲು ತೆಗೆದಿರುವ ನಟ ದರ್ಶನ್, ಜೈಲಿನಲ್ಲಿ ಕಾಲ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ. ಮಾನಸಿಕವಾಗಿ ಕುಗ್ಗಿರುವ ನಟ ದರ್ಶನ್ಗೆ ನಟಿ ರಕ್ಷಿತಾ ಪ್ರೇಮ್ ದಂಪತಿ ಸಾಂತ್ವನ ಹೇಳಿದ್ದು, ಇದರ ನಡುವೆ 8ನೇ ದಿನದ ನಟ ದರ್ಶನ್ ಜೈಲಿನ ದಿನಚರಿ ಹೇಗಿತ್ತು ಅಂತೀರಾ….? ಈ ಸ್ಟೋರಿ ನೋಡಿ……
IND Vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ.. ಸೌತ್ ಆಫ್ರಿಕಾ ಬೌಲಿಂಗ್!
ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಟೀಮ್ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ ಬರೋಬ್ಬರಿ 8 ದಿನ ಕಳೆದಿದೆ. ಜೈಲೂಟ ಅಲ್ಲಿನ ವಾತವರಣದಿಂದ ಕಂಗಾಲು ಆಗಿರುವ ನಟ ದರ್ಶನ್ ಜೈಲಿನಲ್ಲಿ ತಾವು ಧರಿಸುವ ವಿಗ್ ನಿರ್ವಹಣೆ ಮಾಡಲಾಗದೆ ಇಡೀ ಕೂದಲಿಗೆ ಕತ್ತರಿ ಹಾಕಿದ್ದಾರೆ ಎನ್ನಲಾಗಿದೆ. ನಿತ್ಯ ಕೂದಲನ್ನು ವಿಗ್ ಗೆ ಹೊಂದಿಕೊಳ್ಳುವಂತೆ ಟ್ರಿಮ್ ಮಾಡಿ ನಿರ್ವಹಣೆ ಮಾಡಬೇಕಿದೆ. ಆದ್ರೆ ಜೈಲಿನಲ್ಲಿ ನಟ ದರ್ಶನ್ ಸಾಮಾನ್ಯ ವಿಚಾರಣಾಧೀನ ಖೈದಿಯಾಗಿದ್ದು, ಅಂತಹ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಅನಿವಾರ್ಯವಾಗಿ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಸಿನಿಮಾ ಮಾಡಲು ಕಥೆಗಳನ್ನು ಕೇಳಿತ್ತಿದ್ದ ನಟ ದರ್ಶನ್ ಜೈಲಿನಲ್ಲಿ ಕಾಲ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನ ಲೈಬ್ರರಿಯಲ್ಲಿರುವ ಕಥೆ ಪುಸ್ತಕಗಳನ್ನು ತರಿಸಿಕೊಂಡಿದ್ದು, ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ನಟ ದರ್ಶನ್ ತನ್ನ ಪಾಡಿಗೆ ತನ್ನ ಕೊಠಡಿಯಲ್ಲಿ ತಾನಿದ್ದರು ಜೈಲು ಅಧಿಕಾರಿಗಳಿಗೆ ತಲೆ ನೋವಾಗಿದ್ದಾರೆ. ಜೈಲಿನ ಇತರೆ ಖೈದಿಗಳು ದರ್ಶನ್ ವಾಸವಿರುವ ಬ್ಯಾರಕ್ ಬಳಿಯೇ ಜೈಲಿನ ಆಸ್ಪತ್ರೆಗೆ ಹಾದುಹೋಗಬೇಕಿದ್ದು, ಇದನ್ನ ನೆಪ ಮಾಡಿಕೊಂಡು ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ತಲೆನೋವು ಎಂದು ಅನಾರೋಗ್ಯದ ನೆಪ ಹೇಳಿ ಪದೇ ಪದೇ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇದು ಜೈಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನೂ ಆಪ್ತ ಸ್ನೇಹಿತ ನಟ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್ ಕಣ್ಣೀರು ಹಾಕಿದ್ದಾರೆ. ಆಪ್ತ ಸ್ನೇಹಿತ ಸ್ಥಿತಿ ಕಂಡು ಕಣ್ಣೀರು ಹಾಕಿರುವ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಲಿದೆ ಎಂದು ಸಾಂತ್ವ ಹೇಳಿದ್ದಾರೆ ಎನ್ನಲಾಗಿದೆ. ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರಾದುಷ್ಟಕರ ಸಂಗತಿ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ. ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿದೆ.ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಜೈಲಿನಲ್ಲಿ ದರ್ಶನ್ ಜೊತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಅವ್ರು ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ನಟ ದರ್ಶನ್ ಭೇಟಿ ಬಳಿಕ ಹೇಳಿಕೆ ನೀಡಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ರೇಣುಕಾಸ್ವಾಮಿ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡರನ್ನು ವಕೀಲ ನಾರಾಯಣಸ್ವಾಮಿ ಭೇಟಿ ಮಾಡಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿ ನ್ಯಾಯಾಂಗ ಬಂಧನದಲ್ಲಿದ್ದಾಗ ಎಲ್ಲರೂ ಚೆನ್ನಾಗಿಯೇ ಇರ್ತಾರೆ. ಅವರ ಮನಃ ಪರಿವರ್ತನೆಯಾಗಲಿ ಎಂದು ಜೈಲಿಗೆ ಕಳುಹಿಸಲಾಗಿತ್ತದೆ. ನ್ಯಾಯಾಂಗ ಬಂಧನದಲ್ಲಿ ಎಲ್ಲರೂ ಹೇಗೆ ಇರ್ತಾರೋ ಪವಿತ್ರಾ ಹಾಗೆ ಇದ್ದಾರೆ. ಅವರಿಗೆ ಸ್ಪೇಷಲ್ ಏನು ಇಲ್ಲ, ಸಂವಿಧಾನ ಅಡಿಯಲ್ಲಿ ಎಲ್ಲಾ ಖೈದಿಗಳ ರೀತಿ ಅವರು ಇದ್ದಾರೆ. ಜಾಮೀನು ಅರ್ಜಿ ಯಾವಾಗ ಹಾಕಿಕೊಳ್ಳಬೇಕು ಎನ್ನುವುದಕ್ಕೆ ಕಾಯುತ್ತಿದ್ದೇವೆ. ಪ್ರಕರಣದ ಬಗ್ಗೆಯೇ ಪವಿತ್ರಾ ಗೌಡಗೆ ಏನು ತಿಳಿದಿಲ್ಲ. ಅವರು ಈ ಪ್ರಕರಣದಿಂದ ಶಾಕ್ ಆಗಿದ್ದಾರೆ. ಜುಲೈ ನಾಲ್ಕನೇ ತಾರೀಖಿನ ಬಳಿಕ ಜಾಮೀನು ಹಾಕಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜೈಲಿನ ಬಳಿ ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಒಟ್ನಲ್ಲಿ ಜೈಲಿನಲ್ಲಿ ನಟ ದಿನ ಕಳೆಯಲು ಹರಸಾಹಸಪಡುತ್ತಿದ್ದು, ಜೈಲಿನಿಂದ ಬಿಡುಗಡೆ ಯಾವಾಗ ಎನ್ನುವಂತಾಗಿದ್ದು ಕುತೂಹಲ ಮೂಡಿಸಿದ್ದು,ಸದ್ಯಕ್ಕಂತು ಡಿ ಗ್ಯಾಂಗ್ ಗೆ ಜೈಲಿನಿಂದ ಮುಕ್ತಿ ಯಾವಾಗ ಎಂಬುದು ಕಾದು ನೋಡಬೇಕಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)