ಗದಗ: ಕಾಲುವೆ ನೀರು ಜಮೀನಿಗೆ ನುಗ್ಗಿ ಭತ್ತದ ಬೆಳೆ ಹಾಳಾದ ಹಿನ್ನೆಲೆ ರೈತನೋರ್ವ ಕಚೇರಿಗೆ ತೆರಳಿ ಫ್ಯಾನಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳಲು ಮುಂದಾದ ಘಟನೆ ಜರುಗಿದೆ.ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನೀರಾವರಿ ಇಲಾಖೆಯಲ್ಲಿ ಘಟನೆ ಜರುಗಿದ್ದು, ನೀರಾವರಿ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳ ಎದುರು ಆತ್ಮಹತ್ಯೆ ಪ್ರಯತ್ನ ನಡೆದಿದೆ. ಶಿವರಾಜ್ ಹೊಳಿಯಾಚೆ ಅನ್ನೋ ರೈತನಿಂದ ಆತ್ಮಹತ್ಯೆಗೆ ಯತ್ನ ನಡೆದಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ರೈತ ಆತ್ಮಹತ್ಯೆಗೆ ಯತ್ನಿಸಿದ್ದು, ರೈತನ ಜಮೀನಿನಲ್ಲಿ ಹಾದು ಹೋಗಿರೋ ಶಿಂಗಟಾಲೂರು ಏತ ನೀರಾವರಿ ಕಾಲುವೆಯ ನೀರು ಓವರ್ ಫ್ಲೋ ಆಗಿ ಜಮೀನಿಗೆ ನುಗ್ಗಿ ಬೆಳೆಗಳೆಲ್ಲ ಹಾಳಾಗಿದೆ.ಇದರಿಂದ ಬೇಸತ್ತು ನೇರವಾಗಿ ಕಚೇರಿಗೆ ಬಂದು ರೈತ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಹಲವು ವರ್ಷಗಳಿಂದ ಬೆಳೆಹಾನಿಗೆ ಪರಿಹಾರ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಆದರೆ ಪರಿಹಾರ ನೀಡದೇ ಅಧಿಕಾರಿವರ್ಗ ಸತಾಯಿಸ್ತಿದ್ದಾರೆ. ರೈತನ ಜಮೀನು ಸೇರಿದಂತೆ ಅಕ್ಕಪಕ್ಕದ ಜಮೀನುಗಳಿಗೂ ಕಾಲುವೆ ನೀರು ನುಗ್ಗಿ ಹಾನಿ ಆಗಿದೆ. ಮಲ್ಲಪ್ಪ ಸುಣಗಾರ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಹಾನಿ ಆಗಿದೆ.ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ರೈತರು ದಿನವಿಡಿ ಪರದಾಟ ಅನುಭವಿಸುವಂತಾಗಿದೆ. ಕಾಲುವೆ ನೀರು ಸರಾಗವಾಗಿ ಹರಿದು ಹೋಗದ ಹಿನ್ನೆಲೆ ಜಮೀನಿಗೆ ನುಗ್ಗಿ ಹಾನಿ ಮಾಡಲಾಗಿದೆ.