ಕೆ.ಆರ್.ಪುರ: ಶಾಲೆಗಳಿಂದಲೇ ವಿದ್ಯಾರ್ಥಿಗಳಿಗೆ ನಾಡು,ನುಡಿ ಹಾಗೂ ಸಮಾಜಕ್ಕೆ ಶ್ರಮಿಸಿದ ಮಹನೀಯರ ಕುರಿತಾದ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಶಾಸಕ ಬಿ.ಎ.ಬಸವರಾಜ ತಿಳಿಸಿದರು.
ಕ್ಷೇತ್ರದ ಬಸವನಪುರ ವಾರ್ಡನ ಗಾಯತ್ರಿ ಬಡಾವಣೆಯಲ್ಲಿ ಭಕ್ತಕನಕದಾಸರ ಪುತ್ಥಳಿ ಹಾಗೂ ಕನಕಭವನವನ್ನು ಉದ್ಘಾಟಿಸಿ ಮಾತನಾಡಿದರು.
15 ನೇ ಶತಮಾನದಲ್ಲಿ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಕ್ಕನ್ನು ಹೋಗಲಾಡಿಸಲು ಅಗಲಿಗಳು ಶ್ರಮಿಸಿದ ಮಹಾನೀಯ ಕನಕದಾಸರು , ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಪ್ರಮುಖರಾಗಿ ಗುರಿತಿಸಿಕೊಂಡವರು .
ಇನ್ನೂ ಕನಕದಾಸರ ಜಯಂತಿ ಯಾವುದೇ ವ್ಯಕ್ತಿ ಹಾಗೂ ಸಮಾಜದ ಆಚರಣೆಯಾಗದೆ ಸಾರ್ವಜನಿಕರ ಆಚರಣೆಯಾದಾಗ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಬಹುದಾಗಿದೆ ಇಂತಹ ಮಹಾತ್ಮರ ಕುರಿತು ಮಕ್ಕಳಿಗೆ ಶಾಲೆಗಳಿಂದಲೇ ಕನಕದಾಸರ ತತ್ವ ಸಿದ್ದಾಂತ, ಅವರ ಜೀವನ ಮೌಲ್ಯಗಳ ಪಾಠ ಹೇಳಿಕೊಡಬೇಕು ಎಂದು ಕಿವಿ ಮಾತು ಹೇಳಿದರು.
ಕಳೆದ ಹತ್ತಾರು ವರ್ಷಗಳಿಂದ ಈ ಭಾಗದಲ್ಲಿ ಕುರುಬ ಸಮುದಾಯಕ್ಕೆ ಒಂದು ಸಮುದಾಯದ ಭವನ ಬೇಕು ಅಂತ ಕೊರಿಕೆ ಇತ್ತು, ಈ ಕಾರ್ಯಕ್ಕೆ ಬಸವನಪುರ ವಾರ್ಡ್ ನ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಜಯಪ್ರಕಾಶ್ ಅವರು ಕಟ್ಟಡ ನಿರ್ಮಾಣಕ್ಕೆ ಜಾಗವನ್ನ ನೀಡಿದರು.ನಂತರ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರದ ಎಲ್ಲಾ ದಾನಿಗಳ ಸಹಾಯದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ನಿಮ್ಮ ಎಲ್ಲಾರ ಸಹಾಯಕ್ಕೆ ಧನ್ಯವಾದ ಎಂದು ತಿಳಿಸಿದರು.ಇದನ್ನ ಸಮಾಜದ ಏಳಿಗೆಗೆ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಹಾಗೂ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷ ಮುನೇಗೌಡ, ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್, ಅಂತೋಣಿಸ್ವಾಮಿ,ಮುಖಂಡರಾದ ಮೇಡಹಳ್ಳಿ ಕೃಷ್ಣಮೂರ್ತಿ, ರಾಜೇಂದ್ರ, ಕೃಷ್ಣಪ್ಪ,ಶ್ರೀರಾಮ್, ಮುಕುಂದ, ಜಗನಾಥ್,
ಸಂತೋಷ್,ರಾಮಚಂದ್ರ ಇದ್ದರು.