ಬೆಂಗಳೂರು:- ಆಟೋ, ಟ್ಯಾಕ್ಸಿ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸರ್ಕಾರಿ ನೌಕರರಿಗೆ ಸಂಬಳ ನೀಡಬೇಕೆಂದರೆ ತೆರಿಗೆ ಅನಿವಾರ್ಯ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಮೂರು ರೂ. ಹೆಚ್ಚಿಸಿದ್ದು ನಿಜ. ಏಕೆಂದರೆ ಸರ್ಕಾರಿ ಕೆಲಸಗಳು ನಡೆಯಬೇಕು. ಸರ್ಕಾರಿ ನೌಕರರಿಗೆ ವೇತನ ಕೊಡಬೇಕು ಅಂದರೆ ತೆರಿಗೆ ಅನಿವಾರ್ಯ. ಆದರೆ ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ. ಕೇಂದ್ರ 400 ರೂ. ಗ್ಯಾಸ್ನ್ನು ಒಂದು ಸಾವಿರ ರೂ. ಮಾಡಿದೆ ಎಂದು ಕಿಡಕಾರಿದ್ದಾರೆ
ಬೆಲೆ ಏರಿಕೆಯಿಂದ ಜೀವನ ನಡೆಸೋದೇ ಕಷ್ಟ ಅನ್ನೋವಾಗಲೇ ರಾಜ್ಯ ಸರ್ಕಾರ ಜನರ ಗಾಯದ ಮೇಲೆ ಬೆಲೆಯ ಏರಿಕೆ ಬರೆ ಎಳೆದಿತ್ತು. ತೈಲ ಬೆಲೆ ಹೆಚ್ಚಳ ಜನಾಕ್ರೋಶಕ್ಕೂ ಕಾರಣ ಆಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಕಿಚ್ಚು ಜೋರಾಗಿತ್ತು. ಬಿಜೆಪಿ ನಾಯಕರು ಜಿಲ್ಲೆ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಿದ್ದರು.
ತೈಲ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಕುದುರೆ ಗಾಡಿ, ಸೈಕಲ್ನಲ್ಲಿ ಸವಾರಿ ಮಾಡಿ ಆಕ್ರೋಶ ಹೊರ ಹಾಕಲಾಗಿತ್ತು
ಪೆಟ್ರೋಲ್ ರೀಟೇಲ್ ಮಾರಾಟ ತೆರಿಗೆ ಶೇಕಡಾ 3.9ರಷ್ಟು ಹೆಚ್ಚಳವಾಗಿದೆ. ಅಂದರೆ ಈ ಮೊದಲು ಶೇಕಡಾ 25.92ರಷ್ಟಿದ್ದ ತೆರಿಗೆ ಶೇಕಡಾ 29.84ಕ್ಕೇರಿದೆ. ಇನ್ನು ಡೀಸೆಲ್ ಸೇಲ್ಸ್ ಟ್ಯಾಕ್ಸ್ ದರ ಶೇಕಡಾ 4.1ರಷ್ಟು ಏರಿಕೆ ಕಂಡಿದೆ. ಶೇಕಡಾ 14.34ರಿಂದ ಶೇಕಡಾ 18.44ಕ್ಕೆ ಏರಿಕೆಯಾಗಿದೆ.