ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ಕಡಲೂರ ಕಣ್ಮಣಿ ಕನ್ನಡ ಚಲನಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ, ಇದರ ನಿರ್ಮಾಪಕರು ಕೊಳ ಶೈಲೇಶ್ ಆರ್ ಪೂಜಾರ್, ಬಸವರಾಜ್ ಗಚ್ಚಿ, ಮತ್ತು ಸಹ ನಿರ್ಮಾಪಕರಾದ ವಿನೋದ್ ರಾಮ್, ಹೊಳೆನರಸಿಪುರ್ ಮತ್ತು ಮಹೇಶ್ ಕುಮಾರ್ ಎಂ, ನಿರ್ಮಾಣದಲ್ಲಿ ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ, ಅವರ ನಿರ್ದೇಶನದಲ್ಲಿ’ ಈ ಚಲನಚಿತ್ರ ಮೂಡಿ ಬಂದಿದೆ.
ಡೆಂಘೀ ಕೇಸ್ ಹೆಚ್ಚಳ.. ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣ ಎಷ್ಟು ಗೊತ್ತಾ!?
ಇನ್ನು ಈ ಚಿತ್ರದಲ್ಲಿ ಹೀರೋ ಆಗಿ ಶಿರಸಿ ಮೂಲದ ಅರ್ಜುನ್ ನಗರ್ಕರ್ ಎಂಟ್ರಿಕೊಟ್ಟಿದ್ದಾರೆ.
ನಿಶಾ ಯಾಲಿನಿ ಈ ಸಿನಿಮಾದಲ್ಲಿ ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಿಕರಣವನ್ನು ಉಡುಪಿ, ಮಂಗಳೂರು ಹೊನ್ನಾವರ, ಮಂಕಿ, ಮುರುಡೇಶ್ವರ ಸುತ್ತಮುತ್ತ ರಮಣೀಯ ಲೊಕೇಶನ್ ಗಳಲ್ಲಿ ಕ್ಯಾಮೆರಾಮೆನ್ ಮನೋಹರ್, ರವಿರಾಮ್ ಸುಂದರವಾಗಿ ಚಿತ್ರೀಕರಿಸಿದ್ದಾರೆ.
ಕಡಲೂರ ಕಣ್ಮಣಿ’ ಚಿತ್ರಕ್ಕೆ ನಿರ್ದೇಶಕರಾದ ರಾಮ್ ಪ್ರಸಾದ್ ಅವರು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಕಡಲೂರ ಕಣ್ಮಣಿ’ ಅಂದರೆ, ವಜ್ರ ಎಂದೂ ಅರ್ಥ. ಚಿತ್ರಕಥೆ ಯುವ ಮನಸುಗಳ ಪ್ರೀತಿ ಪ್ರೇಮದ ಮೇಲೆ ಸಾಗುತ್ತದೆ.
ಸಿಟಿಯ ಹುಡುಗ ಕಡಲ ತೀರದ ಹುಡುಗಿಯ ಪ್ರೇಮ ಕಥೆಯೇ ಈ ಕಡಲೂರ ಕಣ್ಮಣಿ.
ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರದಲ್ಲಿ ಎಲ್ಲ ಕಲಾವಿದರು ತುಂಬಾ ಚಂದವಾಗಿ ನಟಿಸಿದ್ದಾರೆ.
ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಸಂಕಲನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನಿಶಿತ್ ಪೂಜಾರಿ ತಮ್ಮ ಕೈಚಳಕ ತೋರಿಸಿದ್ದಾರೆ. ಬಂಡೆ ಚಂದ್ರು ರವರ್ ಸಾಹಸ ಚಿತ್ರಕ್ಕಿದೆ ಫೈಟ್ ಗಳು
ತುಂಬಾ ಚೆನ್ನಾಗಿ ಮೂಡಿ ಬಂದಿವೆ.
‘ಕಡಲೂರ ಕಣ್ಮಣಿ’
ಚಿತ್ರವನ್ನು ಡಿಎಸ್ಕೆ ಸಿನಿಮಾ’ಸ್ ಸಂಸ್ಥೆಯ Dr. ಸುನೀಲ್ ಕುಂಬಾರ್ ರವರು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ.