ಬಾಗಲಕೋಟೆ:- ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಕೇಂದ್ರ ಸಚಿವ ಎಚ್ ಡಿಕೆ ಅನುಮತಿ ವಿಚಾರವಾಗಿ ಸಚಿವ ಆರ್ ಬಿ ತಿಮ್ಮಾಪುರ ಅವರು ಪ್ರತಿಕ್ರಿಯೆ ನೀಡಿದ್ದಾರೆ..
IND vs ENG: ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕಾದಾಟ.. ಯಾರು ಬಲಿಷ್ಠ?
ಈ ಸಂಬಂಧ ಮಾತನಾಡಿದ ಅವರು, ಈಗತಾನೇ HDK ಕೇಂದ್ರ ಮಂತ್ರಿ ಆಗಿದ್ದಾರೆ. ಹೀಗಾಗಿ ಆ ಹುರುಪಿನಲ್ಲಿದ್ದಾರೆ. ಅರಣ್ಯ ಹಾನಿ ಬಗ್ಗೆ ಅವರು ಅವಲೋಕನ ಮಾಡಬೇಕಿತ್ತು. ಹೊಸ ಹುರುಪಿನಲ್ಲಿ ಸಹಿ ಹಾಕೊದಕ್ಕಿಂತ,ಪರಿಶೀಲನೆ ಮಾಡಬೇಕಿತ್ತು. ಜನತೆಗೆ ಸಹಕಾರಿ ಆಗುವಂತದಕ್ಕೆ ಒತ್ತು ಕೊಡಬೇಕು. ವಿಶ್ವವೇ ತಾಪಮಾನದಿಂದ ಬಳಲುತ್ತಿದೆ. ಎಚ್ ಡಿಕೆ ಅವರಲ್ಲಿ ನಾನು ಮನವಿ ಮಾಡ್ತೇನೆ. ಮರು ಪರಿಶೀಲನೆ ಮಾಡಿ ಕ್ರಮ ವಹಿಸಲಿ ಎಂದರು.
ಆ್ಯಕ್ಟಿವ್ ಇಲ್ಲದ ಸಚಿವರ ಬದಲಾವಣೆ,ಹೊಸಬರಿಗೆ ಅವಕಾಶ ಶಾಸಕರ ಪಟ್ಟು ವಿಚಾರವಾಗಿ ಮಾತನಾಡಿ, ಪರಿಶೀಲನೆ ಮಾಡ್ತಾರೆ,ಯಾರಿಗೆ ಮಂತ್ರಿ ಆಗಬಾರದು ಅಂತಾ ಇದೆ. ಅವ್ರು ಮಂತ್ರಿ ಆಗಲು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಿಎಂ ಏನು ಪ್ರತಿಕ್ರಿಯೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಅದೇನೇ ಇದ್ರು ಸಿಎಂ ಸರಿ ಮಾಡ್ತಾರೆ ಎಂದರು. ಇನ್ನೂ ಕೆಲ ಸಚಿವರಿಗೆ ಕೋಕ್,ಹೊಸಬರಿಗೆ ಅವಕಾಶ ವಿಚಾರವಾಗಿ ಮಾತನಾಡಿ, ಅದು ಎಐಸಿಸಿ ಮನಸ್ಸಿನಲ್ಲಿ ಏನೀದೆ ಅಂತಾ ನಮಗೆ ಗೊತ್ತಿಲ್ಲ.ಅದು ಯಾರಿಗೂ ಗೊತ್ತು ಆಗಲ್ಲ,ಅದು ಎಐಸಿಸಿ ತಿರ್ಮಾನ ನೋಡೋಣ ಎಂದರು.
ಇನ್ನೂ ಕೆಪಿಸಿಸಿ ಅದ್ಯಕ್ಷ ಸ್ಥಾನ ಬದಲಾವಣೆ ಮೂಲಕ ಡಿಕೆಶಿಗೆ ಬ್ರೇಕ್ ಹಾಕುವ ಹುನ್ನಾರ ವಿಚಾರವಾಗಿ ಮಾತನಾಡಿ, ಅವೆಲ್ಲ ನಮ್ಮ ಹೈ ಕಮಾಂಡ್ ನೋಡಿಕೊಳ್ಳುತ್ತೆ. ಹೈ ಕಮಾಂಡ್ ಲೆವೆಲ್,ಡೆಲ್ಲಿ ಲೆವಲ್ ನಲ್ಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಎಐಸಿಸಿ ಬಗ್ಗೆ ಮಾತನಾಡಲಿಕ್ಕೆ ನಾನು ಯಾರು. ಅದನ್ನ ಎಐಸಿಸಿ ತೀರ್ಮಾಣ,ರಾಹುಲ್ ಗಾಂದಿ ತೀರ್ಮಾಣ ತೊಗೊತಾರೆ. ನಮ್ಮ ಖರ್ಗೆ ಸಾಹೇಬ್ರಗೆ ರಾಜ್ಯದ ಆಗು-ಹೋಗುಗಳು ಎಲ್ಲವೂ ಗೊತ್ತು. ಅವರೆಲ್ಲ ಕೂಡಿ ತೀರ್ಮಾಣ ತಗೆದುಕೊಳ್ತಾರೆ ಎಂದರು.