ಹುಬ್ಬಳ್ಳಿ : ನಗರದಲ್ಲಿನ ಐತಿಹಾಸಿಕ ನೃಪತುಂಗ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಆಗ್ರಹಿಸಿ ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳ್ಳಿ ಹಾಗೂ ಚಿನ್ನದ ಬೆಲೆ ಕೊಂಚ ಇಳಿಕೆ… ಇಂದಿನ ದರಪಟ್ಟಿ ಇಲ್ಲಿದೆ ನೋಡಿ!
ಸಂಘದ ಗೌರವಾಧ್ಯಕ್ಷ ಹಿರಿಯ ವೈದ್ಯ ಡಾ. ಗೋವಿಂದ ಮಣ್ಣೂರ, ಹಿರಿಯ ಉಪಾಧ್ಯಕ್ಷ ಶಿವಣ್ಣ ಅಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ ಮುಂತಾದವರು ಸಚಿವರಿಗೆ ಮನವಿ ಸಲ್ಲಿಸಿ, ನೃಪತುಂಗ ಬೆಟ್ಟವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿ, ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂದು ವೀಕ್ಷಣೆ ಮಾಡುವಂತೆ ಮಾರ್ಪಾಡು ಮಾಡಲು ಸುಮಾರು 10 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.