ಗದಗ:- ರೈತನೋರ್ವ ಎಡೆ ಹೊಡೆಯಲು ಬೈಕ್ ಮೊರೆ ಹೋದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಜರುಗಿದೆ. ಇದೇ ಗ್ರಾಮದ ರೈತನ ಈ ಡಿಫರೆಂಟ್ ಐಡಿಯಾ ಕಂಡು ಇತರೆ ರೈತರು ಫಿದಾ ಆಗಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಅಮರಪ್ಪ ರೋಣದ ಎನ್ನೋ ರೈತನಿಂದ ಬೈಕ್ ಬಳಸಿ ಎಡೆ ಹೊಡೆಯೋ ಕಾರ್ಯ ನಡೆದಿದೆ. ಎಲ್ಲಾ ರೈತರೂ ಎತ್ತು ಅಥವಾ ಟ್ರಾಕ್ಟರ್ ಸಹಾಯದಿಂದ ಎಡೆ ಹೊಡೆಯೋದು ಸಾಮಾನ್ಯ. ಈ ರೈತ ಮಾತ್ರ ತಾನು ಉಪಯೋಗಿಸೋ ಬೈಕನ್ನೆ ಜಮೀನಿಗಿಳಿಸಿ ಹೊಸ ಪ್ರಯೋಗ ಮಾಡಿದ್ದಾರೆ. ಗಳೆ ಬಾಡಿಗೆ ಹಾಗೂ ಆಳಿನ ಖರ್ಚು ಸೇರಿ ಒಂದು ದಿನಕ್ಕೆ 2900 ರೂಪಾಯಿ ಆಗತ್ತೆ. ಬೈಕ್ ಬಳಸಿದ್ರೆ 1000 ರೂಪಾಯಿ ಖರ್ಚಿನಲ್ಲಿ ಎಡೆ ಹೊಡೆಯಬಹುದು ಅನ್ನೋದು ರೈತನ ಲೆಕ್ಕಾಚಾರ.
ದುಬಾರಿ ದುನಿಯಾದಲ್ಲಿ ರೈತನ ಐಡಿಯಾಕ್ಕೆ ಇತರೆ ರೈತರಿಂದ ಮೆಚ್ಚುಗೆ ವ್ಯಕ್ತವಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)