ಬಾಗಲಕೋಟಿ:- ಜಿಲ್ಲೆಯ ತೇರದಾಳ ಪಟ್ಟಣದ ದಾಸರ ಮಡ್ಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಾತ್ರೆ ನಡೆಯುವ ಸಂದರ್ಭದಲ್ಲಿ ವಿದ್ಯುತ್ ತಂತಿ ಹರಿದು ಮನೆ ಮೇಲೆ ಬಿದ್ದ ಪರಿಣಾಮ ಒಳಗಡೆ ಇದ್ದ ಸಂತೋಷ ಸುನಗಾರ (22) ಶೋಭಾ ಹುಲೇನವರ (45) ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ನಂದಿನಿ ಹಾಲು ಏರಿಕೆ ಆಗುತ್ತಾ!?.. CM ಸಿದ್ದರಾಮಯ್ಯ ಕೊಟ್ರೂ ಸ್ಪಷ್ಟನೆ..!
ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದೆ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲೆ ಮಾಡಲಾಗಿದೆ.
ಇದಕ್ಕೆ ನೇರ ಕಾರಣ ಹೆಸ್ಕಾಂ ಅಧಿಕಾರಿಗಳು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾಕಷ್ಟು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ನಾವು ಮನವಿಯನ್ನು ಕೂಡ ಸಲ್ಲಿಸಿದ್ದೇವೆ ಸರ ವಯರ್ ಹರಿದಿದೆ ಕೂಡಲೆ ಅದನನ್ನ ತೆರವು ಮಾಡಿ ಎಂದು ತಮ್ಮದಡ್ಡಿ ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿಯನ್ನು ಕೊಟ್ಟರು ಇಲ್ಲಿವರೆಗೂ ಸರಿ ಮಾಡೇ ಇಲ್ಲ ಸರಿ ಮಾಡದೆ ಕಾರಣ ಇಂದು ಇಂಥ ದುರ್ಘಟನೆಗೆ ಕೆ ಹೆಸ್ಕಾಂ ಅಧಿಕಾರಿಗಳು ನೇರ ಕಾರಣ ಎಂದು ತೇರದಾಳ ಪುರಸಭೆ ಮಾಜಿ ಸದಸ್ಯರ ದಸರತ ಅಕ್ಕೆನ್ನವರ ಗಂಭೀರ ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತೇರದಾಳ ಶಾಸಕ ಸಿದ್ದು ಸವದಿ ಇದು ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಇದೊಂದು ದುರ್ಘಟನೆ ನಡೆದಿದೆ.
ಎರಡು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
5 ಜನರು ಗಂಭೀರ ಗಾಯಗಳಾಗಿದೆ ಇದಕ್ಕೆ ನೇರ ಕಾರಣ ಹೇಸ್ಕಾಂ ಅಧಿಕಾರಿಗಳು.
ಇಂಧನ ಸಚಿವರು ನಿಮ್ಮ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಮತ್ತು ಗಾಳಿ ಬರ್ತಾ ಇದೆ ಹರಿದ ವೈರ್ಗಳು ಮತ್ತು ಜೋತ ಬಿದ್ದ ವೈರಿಗಳನ್ನು ಸೂಕ್ತ ವ್ಯವಸ್ಥೆಯಲ್ಲಿ ರಿಪೇರಿ ಮಾಡಿ.
ಈಗಾಗಲೇ ತೇರದಾಳ ಕ್ಷೇತ್ರದಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ನಾಲ್ಕು ಬಾರಿ ಹಿಂತಾ ದುರ್ಘಟನೆ ನಡೆದಿದೆ.
ಇದರಲ್ಲಿ ಯಾರು ತಪ್ಪಿಸ್ತರು ಇದ್ದಾರೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನಾನು ಮಾನ್ಯ ಎಸ್ ಪಿ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಬಾಗಲಕೋಟೆ ಎಸ್ ಪಿ ಅಂಮರನಾಥ ರೆಡ್ಡಿ ಮಾತನಾಡಿ ಹೆಸ್ಕಾಂ ಅಧಿಕಾರಿ ನಿರ್ಲಕ್ಷ್ಯ ಎಂದು ಕಂಡುಬಂದಿದೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ ಮತ್ತು ಐದು ಜನ ಗಾಯಾಳುಗಳನ್ನು ಬಾಗಲಕೋಟೆ
ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ
![](https://ainlivenews.com/wp-content/uploads/2024/01/Ad-Banner-copy-scaled.jpg)