ಬೆಂಗಳೂರು:- ಡೆಂಘೀ ಕೇಸ್ ಹೆಚ್ಚಳ ಬಳಿಕೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರತಿ ಶುಕ್ರವಾರ ಡೆಂಘೀ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜೈಲು ಆವರಣದೊಳಗೆ ಕಾರು ಬಿಡದ ಪೊಲೀಸ್.. ಸ್ಥಳದಲ್ಲೇ ಖ್ಯಾತೆ ತೆಗೆದ ದರ್ಶನ್ ಪರ ವಕೀಲ!
ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಜನರು ನೀರಿನ ಬಗ್ಗೆ ಹೆಚ್ಚು ಗಮನಹರಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಟೆಸ್ಟಿಂಗ್ ಮಾಡ್ತಿದ್ದೇವೆ. ಡೆಂಘೀ ನಿಯಂತ್ರಿಸಲು BBMP, ಆರೋಗ್ಯ ಇಲಾಖೆ ಸಿದ್ಧವಾಗಿದೆ. ಜೊತೆಗೆ ಪ್ರತಿ ಶುಕ್ರವಾರ ಇಡೀ ರಾಜ್ಯದಲ್ಲಿ ನಮ್ಮ ಸಿಬ್ಬಂದಿ ಜನರಿಗೆ ಡೆಂಘೀ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಫಾಗಿಂಗ್ ಮಾಡುವುದರಿಂದ ದೊಡ್ಡ ಪರಿಣಾಮ ಆಗಲ್ಲ, ಸ್ಪ್ರೇ ಮಾಡುವುದರಿಂದ ನಿಯಂತ್ರಣ ಆಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 5,374 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಐವರು ಸಾವನ್ನಪ್ಪಿದ್ದಾರೆ. ಕೇರಳ – 8ಸಾವಿರ, ತಮಿಳುನಾಡು – 5,275 ಡೆಂಘೀ ಪ್ರಕರಣಗಳಿವೆ. ಡೆಂಘೀ ಜ್ವರದಿಂದ ಸಾವುಗಳು ಸಂಭವಿಸಬಾರದು ಎಂಬುದು ಆರೋಗ್ಯ ಇಲಾಖೆಯ ಗುರಿಯಾಗಿದ್ದು, ಕಳೆದ ಬಾರಿಗಿಂತ ಈಗ ಬಾರಿ ಶೇ.40 ರಷ್ಟು ಟೆಸ್ಟಿಂಗ್ ಹೆಚ್ಚು ಮಾಡಲಾಗಿದೆ. ಹೀಗಾಗಿ ಡೆಂಘೀ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ಹೊಲಿಸಿದತೆ ರಾಜ್ಯದಲ್ಲಿ ಡೆಂಘೀ ಕಂಟ್ರೂಲ್ ನಲ್ಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಡೆಂಘೀ ಆಂತಕ ಹೆಚ್ಚಾಗಿದ್ದು, ಕಳೆದ 20 ದಿನದಲ್ಲಿ ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಕಳೆದ ವರ್ಷಕ್ಕಿಂತ ಡೆಂಘೀ ಪಾಸಿಟಿವ್ ಶೇ. 40ರಷ್ಟು ಹೆಚ್ಚಳವಾಗಿದೆ. ಡೆಂಘೀ ಜೊತೆಗೆ ವೈರಲ್ ಫೀವರ್ ಸಹ ಹೆಚ್ಚಿದ್ದು, ಜನರು ಆತಂಕದಲ್ಲಿದ್ದಾರೆ