ಬೆಂಗಳೂರು:- ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಕಾಣಲು ಅವರ ವಕೀಲ ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ಕಾರನ್ನು ಜೈಲಿನ ಆವರಣದೊಳಗೆ ಒಯ್ಯುವಂತಿಲ್ಲ, ಇಲ್ಲೇ ಪಾರ್ಕ್ ಮಾಡಿ ನಡೆದು ಹೋಗಿ ಅನ್ನುತ್ತಾರೆ.
ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀ.. ಏನದು ಗೊತ್ತಾ!?
ಅಷ್ಟಕ್ಕೆ ಉರಿದುಬೀಳುವ ವಕೀಲರು, ಅದ್ಹೇಗೆ ಕಾರು ಬಿಡಲ್ಲ, ನೀವು ಹೇಳಿದ್ದೇ ಕಾನೂನಾ? ನಾನು 60-ವರ್ಷ ದಾಟಿರುವ ಸೀನಿಯರ್ ಸಿಟಿಜನ್, 2 ಕಿಮೀ ಹೇಗೆ ನಡೆದುಹೋಗುವುದು? ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತಾಡಿಸಿ ಅನ್ನುತ್ತಾರೆ. ಮೇಲಧಿಕಾರಿಗಳು ಮೊದಲು ಕಾರನ್ನು ಬಿಡಬೇಡಿ ಅಂತ ಹೇಳಿದರೂ ವಕೀಲ ಹಠ ಮುಂದುವರಿಸಿದಾಗ ಅನುಮತಿ ನೀಡುತ್ತಾರೆ. ಹೀಗೆ ಪೊಲೀಸರ ಜತೆ ದರ್ಶನ್ ಪರ ವಕೀಲ ವಾಗ್ವಾದಕ್ಕಿಳಿದಿದ್ದಾರೆ.