ಬೆಂಗಳೂರು:- ಬಾಕಿ ತೆರಿಗೆ ವಸೂಲಿ ಮಾಡಲು ಸ್ವಸಹಾಯ ಸಂಘಗಳ ಮೊರೆ ಹೋಗಿರುವ ಸರ್ಕಾರ, ರಾಜ್ಯದ ಎನ್ಜಿಒಗಳು, ಸ್ವಸಹಾಯ ಸಂಘಗಳ ಮೂಲಕ ತೆರಿಗೆ ಬಾಕಿ ವಸೂಲಿ ಮಾಡಿಸಲು ಸಜ್ಜಾಗಿದೆ.
ಸದ್ಯ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು 1,860.17 ಕೋಟಿ ರೂ. ಬಾಕಿ ಇದೆ. ಇದನ್ನ ವಸೂಲಿ ಮಾಡಲು ಮುಂದಾಗಿರುವ ಸರ್ಕಾರ, ಬಾಕಿ ವಸೂಲಿ ಜವಬ್ದಾರಿಯನ್ನು ಸ್ವಸಹಾಯ ಸಂಘಗಳು ಹಾಗೂ ಎನ್ಜಿಒಗಳಿಗೆ ವಹಿಸಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಸ್ವಸಹಾಯ ಸಂಘಗಳಿಗೆ ವಸೂಲಿಯಾದ ಹಣದ ಶೇಕಡ 5 ರಷ್ಟು ಪಾಲನ್ನ ಕಮಿಷನ್ ಆಗಿ ಕೊಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ದೆಹಲಿ ಸಿಎಂ ಜಾಮೀನು ಮಂಜೂರು ಪ್ರಶ್ನಿಸಿ ಇಡಿ ಮೇಲ್ಮನವಿ;.. ಇಂದು ಹೈಕೋರ್ಟ್ ತೀರ್ಪು ಪ್ರಕಟ..
315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆಗಳು, 61 ನಗರ ಸಭೆಗಳು, 114 ಪಟ್ಟಣ ಪಂಚಾಯಿತಿಗಳು ಹಾಗೂ 4 ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನ ಸ್ವಸಹಾಯ ಸಂಘಗಳಿಗೆ ವಹಿಸೋಕೆ ತಯಾರಿ ನಡೆದಿದ್ದು, ಆ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಸಿದ್ಧತೆ ನಡೆದಿದೆ.
ಒಟ್ಟಿನಲ್ಲಿ ಈಗಾಗಲೇ ಪಂಚ ಗ್ಯಾರಂಟಿಗಳನ್ನ ನೀಡಿ ಸುಸ್ತಾಗಿರೋ ಸರ್ಕಾರ, ಇದೀಗ ಒಂದೊಂದಾಗಿ ಆದಾಯದ ಮೂಲ ಹುಡುಕಲು ಮುಂದಾಗಿದೆ