ಬಾಗಲಕೋಟ :- ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ನಡುವೆ ವಾಗ್ವಾದ ನಡೆದಿದೆ.
ಗೋಬಿ ಮಂಚೂರಿಯಲ್ಲಿ ಹುಳ ಪತ್ತೆ… ಹೋಟೆಲ್ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶ!
ಬಾಗಲಕೋಟೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಚರ್ಚೆ ವೇಳೆ ವಾಗ್ವಾದ ನಡೆದಿದೆ. ನನ್ನ ಕ್ಷೇತ್ರದಲ್ಲಿ ಲೋಕೋಪಯೋಗಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿ ಆಗಿರೋದಕ್ಕೆ ಬಿಲ್ ಆಗ್ತಿಲ್ಲ ಎಂದು ಜೋರು ಧ್ವನಿಯಲ್ಲಿ ಸಿದ್ದು ಸವದಿ ಮಾತನಾಡಿದ್ದಾರೆ.
ನೀವು ಈ ರೀತಿ ಮಾತಾಡೋದು ಸರಿಯಲ್ಲ. ರಾಜಕಾರಣ ಮಾತಾಡೋದು ಇದ್ರ ಬೇರೆ ಮಾತಾಡೋಣ ಎಂದು ತಿಮ್ಮಾಪುರ ಹೇಳಿದ್ದಾರೆ. ನಾ ಏನು ಮಾತಾಡಿದೆ ಎಂದು ಸವದಿ ಎದಿರೇಟು ನೀಡಿದ್ದಾರೆ. ನಿಮ್ಮ ಕ್ಷೇತ್ರದಲ್ಲೇ ಬಿಲ್ ಪೆಂಡಿಂಗ್ ಇವೆ ಯಾವ ಕಾಮಗಾರಿಗಳ ಬಿಲ್ ಆಗ್ತಿಲ್ಲ ಎಂದು ಸವದಿ ಹೇಳಿದ್ದಾರೆ. ಕೆಡಿಪಿ ಮೀಟಿಂಗ್ ತರಹ ನಡೆಸೋದಿದ್ದರೆ ನಡೆಸಿ.ರಾಜಕಾರಣ ರೀತಿ ಮಾತಾಡಿದರೆ ರಾಜಕಾರಣ ಮಾತಾಡಬೇಕಾಗುತ್ತದೆ ಎಂದು ತಿಮ್ಮಾಪುರ ಗರಂ ಆಗಿದ್ದಾರೆ. ಬಾಗಲಕೋಟ ಜಿಪಂ ನೂತನ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಘಟನೆ ನಡೆದಿದೆ.