ಹೊಸಕೋಟೆ:- ಹೋಟೆಲ್ ನ ಗೋಬಿ ಮಂಚೂರಿಯಲ್ಲಿ ಹುಳ ಪತ್ತೆಯಾದ ಘಟನೆ ಹೊಸಕೋಟೆ ನಗರದ ಕೆಇಬಿ ವೃತ್ತದ ಶ್ರೀಗುರು ನಳಪಾಕ ಹೋಟೆಲ್ ನಲ್ಲಿ ಜರುಗಿದೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ಗೆ ವಿರೋಧ: ನಾಳೆ ತುಮಕೂರು ಬಂದ್
ಗೋಬಿಯಲ್ಲಿ ಹುಳಗಳನ್ನ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. ತೇಜಸ್ವಿನಿ ಎಂಬುವವರು ಆರ್ಡರ್ ಮಾಡಿದ್ದ ಪ್ಲೆಟ್ ನಲ್ಲಿ ಹುಳ ಸಿಕ್ಕಿದೆ 190 ರೂಪಾಯಿ ಹಣ ಪಡೆದು ಹುಳವಿರುವ ಗೋಬಿ ಕೊಟ್ಟಿದ್ದೀರಾ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಹುಳವಿರುವ ಗೋಬಿಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ವಚ್ಚತೆಯುಳ್ಳ ಶುದ್ದವಾದ ಪುಡ್ ನೀಡುವಂತೆ ಹೋಟೆಲ್ ಸಿಬ್ಬಂದಿಗೆ ಗ್ರಾಹಕರು ವಾರ್ನಿಂಗ್ ನೀಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ದವು ಸಾರ್ವಜನಿಕರು ಗರಂ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಶ್ರೀಗುರು ನಳಪಾಕ ಹೋಟೆಲ್ ನಲ್ಲಿ ಘಟನೆ ಜರುಗಿದೆ