ವಿಜಯಪುರ: ಬಿಎಸ್ವೈ ಎಂದರೆ ಬಿ ಫಾರ್ ಭೀಮಣ್ಣಾ ಖಂಡ್ರೆ, ಎಸ್ ಫಾರ್ ಶಾಮನೂರು ಶಿವಶಂಕ್ರಪ್ಪಾ, ವೈ ಫಾರ್ ಯಡಿಯೂರಪ್ಪ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವೀರಶೈವ ಮಹಾಸಭಾ ಮೂರೇ ಕುಟುಂಬದ ಜನರ ಕೈಯಲ್ಲಿದೆ. ಇವರು ಇವರ ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು, ಸೊಸೆಯಂದಿರೆ ಶಾಸಕ, ಸಂಸದರು ಆಗಬೇಕು. ಉಳಿದ ಲಿಂಗಾಯತರು ಇವರ ಮನೆಯಲ್ಲಿ ಈರುಳ್ಳಿ ಹೆಚ್ಚುವ ಕೆಲಸ ಮಾಡಬೇಕಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹಗರಣದ ವಿಚಾರವಾಗಿ, ಸಂಬಂಧಪಟ್ಟ ಇಲಾಖೆಯ ಕಮೀಷನರ್ ಬಳಿ ಮಾಹಿತಿ ಕೇಳಿದ್ದೇನೆ. ಶಿವಾನಂದ ಪಾಟೀಲ್ ಏನು ಆದಿಲ್ ಶಾಹಿನಾ? ಟಿಪ್ಪು ಸುಲ್ತಾನಾ? ನಾನು ಎಂಎಲ್ಎ ಇದ್ದೇನೆ. ನನಗೆ ಎಲ್ಲಾ ದಾಖಲೆ ನೀಡಬೇಕು. 24 ತಾಸಿನಲ್ಲಿ ದಾಖಲಾತಿ ನೀಡಬೇಕಿತ್ತು, ನೀಡಿಲ್ಲ
. ಕಮೀಷನರ್ ಹಾಗೂ ಸಚಿವರ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ. ಅಧಿಕಾರಿಗಳನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ. ಸಂಪೂರ್ಣ ಹಗರಣ ತಗೆಯುತ್ತೇನೆ. ಭಾರೀ ಪ್ರಾಮಾಣಿಕ ಎಂದು ಭಾಷಣ ಮಾಡ್ತಾನೆ ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.