ಅಯೋಧ್ಯೆ: ಸಾಮಾನ್ಯ ಪ್ರಜೆಯ ಮಾತನ್ನೂ ಬಹಳ ಗೌರವದಿಂದ ಕಾಣುತ್ತಿದ್ದ ರಾಮನ ಆದರ್ಶದಂತೆ, ಅಯೋಧ್ಯೆಯೆ ರಾಮ ಜನ್ಮಭೂಮಿ ಟ್ರಸ್ಟ್ ಸಾಮಾನ್ಯ ಭಕ್ತರ ಅಸಮಾಧಾನವನ್ನೂ ತಣಿಸಲು ಮುಂದಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಇಷ್ಟು ದಿನ ತಾರತಮ್ಯದ ಆರೋಪ ಕೇಳಿ ಬರುತ್ತಿತ್ತು. ಇದೀಗ ಭಕ್ತರ ಅಸಮಾಧಾನ ತಣಿಸಲು ಅಯೋಧ್ಯೆ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮೂರು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
ಅದರಂತೆ ರಾಮಮಂದಿರಕ್ಕೆ ಬರುವ ಪ್ರಮುಖರಿಗೆ, ಸೆಲೆಬ್ರಿಟಿಗಳಿಗೆ ತಿಲಕ ಇಡುವ ಕೆಲಸವನ್ನು ಅರ್ಚಕರು ಮಾಡುವಂತಿಲ್ಲ. ಬಾಲರಾಮನ ಚರಣಾಮೃತವನ್ನು ಯಾರಿಗೂ ನೀಡಬಾರದು. ಹಾಗೆಯೇ, ಮಂದಿರದ ಅರ್ಚಕರಿಗೆ ಯಾರೂ ಹಣ ನೀಡುವ ಹಾಗಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಟ್ರಸ್ಟ್ ಮಾಡಿದೆ. ದೇಗುಲಕ್ಕೆ ಬರುವ ಭಕ್ತರು ದೇಣಿಗೆ ರೂಪದಲ್ಲಿ ದೇವಾಲಯದ ಆಡಳಿತ ಮಂಡಳಿಗೆ ಹಣ ನೀಡಬಹುದು. ಈ ಮೂಲಕ ರಾಮಮಂದಿರಕ್ಕೆ ಬರುವ ಭಕ್ತರೆಲ್ಲಾ ಸಮಾನರು ಎಂಬ ಸಂದೇಶವನ್ನು ಟ್ರಸ್ಟ್ ಸಾರಿದೆ.