ಬಾಗಲಕೋಟೆ:- ಇಂದಿನ ಯುವ ಪೀಳಿಗೆಯೂ ಅನೇಕ ದುಶ್ಚಟಗಳಿಗೆ ಬಲಿಯಾಗುವ ಮೂಲಕ ಆರೋಗ್ಯವನ್ನು ಹದೆಗೆಡಿಸಿಕೊಳ್ಳುತ್ತಿದ್ದಾರೆ, ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಯೋಗದಂತಹ ಮಹತ್ವದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಯೋಗ ಬಲ್ಲವನಿಗೆ ರೋಗವಿಲ್ಲ ಆದ್ದರಿಂದ ತಮ್ಮ ಹತ್ತಿರ ಯಾವ ರೋಗವು ಸುಳಿಯಲಾರದು ಎಂದು ನೇಕಾರ ಕುರುಹಿನಶೆಟ್ಟಿ ಪೀಠದ ಹಳೇ ಹುಬ್ಬಳ್ಳಿಯ ಶ್ರೀ ನೀಲಕಂಠೇಶ್ವರ ಮಠದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ತಮ್ಮ ಪ್ರತಿಯೊಂದು ಪ್ರವಚನದಲ್ಲಿಯೂ ಯೋಗದ ಕುರಿತು ಭಕ್ತರಿಗೆ ಜಾಗೃತಿ ಮೂಡಿಸುವಲ್ಲಿ ಮುಂದಾಗಿದ್ದಾರೆ,
ಶ್ರೀಗಳು ಆದ್ಯಾತ್ಮದಷ್ಟೇ ಮಹತ್ವವನ್ನು ಯೋಗಕ್ಕೂ ನೀಡುತ್ತಿದ್ದಾರೆ, ಶ್ರೀಗಳು ತಮ್ಮ ಪ್ರತಿಯೊಂದು ಪ್ರವಚನದಲ್ಲಿಯೂ ಯೋಗದ ಕುರಿತು ಸಂದೇಶ ನೀಡುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು,ಈ ಭಾಗದಲ್ಲಿ ಅನೇಕ ಯೋಗ ಶಿಬಿರಗಳನ್ನು ತೆಗೆದುಕೊಂಡು ಅನೇಕರಿಗೆ ಯೋಗದ ಅಭ್ಯಾಸವನ್ನು ನೀಡಿದ್ದಾರೆ,ಇದರಿಂದ ಅದೆಷ್ಟೋ ಭಕ್ತ ಸಮೂಹ ತಮ್ಮ ದಿನ ನಿತ್ಯದ ಜೀವನದಲ್ಲಿಯೂ ಯೋಗಕ್ಕೂ ಮಹತ್ವ ನೀಡುತ್ತಿದ್ದಾರೆ,ಅಂತೆಯೇ ಪ್ರತಿ ದಿನ ಯೋಗವನ್ನು ಮಾಡಿಯೇ ತಮ್ಮ ಮುಂದಿನ ಕಾಯಕದಲ್ಲಿ ತೋಡಗುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ, ಶ್ರೀಗಳು ಕೂಡಾ ಅಷ್ಟೇ ದಿನ ನಿತ್ಯ ಯೋಗವನ್ನು ಮಾಡಿಯೇ ತಮ್ಮ ಮುಂದಿನ ದೈನೆಂದಿನ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ,
ಯೋಗ ಗುರುವಿನ ನೆಚ್ಚಿನ ಶಿಷ್ಯರು- ಬಾಬಾ ರಾಮದೇವ್ ಅವರ ಪರಮ ಶಿಷ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು ಯೋಗ ವಿದ್ಯೆಯನ್ನು 10 ವರ್ಷಗಳ ಕಾಲ ಬಾಬಾ ರಾಮದೇವ್ ಅವರ ಕೈಯಲ್ಲಿ ಕಲಿತಿದ್ದು, ಶ್ರೀಗಳು ಯೋಗದಲ್ಲಿ ಅಪಾರ ಪಾಂಡಿತ್ಯ ಪಡೆದವರಾಗಿದ್ದು,ಭಕ್ತಿ ನಿಷ್ಠೆ ಹಾಗೂ ಶ್ರೇದ್ದೆಯಿಂದ ಕಲಿಯುವ ಮೂಲಕ ಇಂದು ತಮ್ಮ ಅಪಾರ ಭಕ್ತ ಸಮೂಹಕ್ಕೆ ಯೋಗಾಭ್ಯಾಸವನ್ನು ನೀಡುತ್ತಿದ್ದಾರೆ,
ಶಾಲಾ ಮಕ್ಕಳಿಗೆ ಯೋಗದ ಪಾಠ- ಶ್ರೀಗಳು ತೇರದಾಳದ ಶ್ರೀ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದು,ಶಾಲೆಯ ಎಲ್ಲ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶ್ರೀಗಳು ಯೋಗದ ಪಾಠವನ್ನು ನೀಡುತ್ತಿದ್ದಾರೆ ಶ್ರೀಗಳ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ,
ಜ್ಞಾನ ಯೋಗಿಯ ಅಪಟ್ಟ ಶಿಷ್ಯರು- ನಡೆದಾಡುವ ದೇವರು ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಪರಮ ಶಿಷ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು ಬಾಲ್ಯದಲ್ಲಿಯೇ ಮನೆಯನ್ನು ತೊರೆದು ವಿಜಯಪೂರದ ಶ್ರೀ ಸಿದ್ದೇಶ್ವರ ಶ್ರೀಗಳ ಆಶ್ರಮದಲ್ಲಿ ಬೆಳೆದವರು, ಶ್ರೀ ಸಿದ್ದೇಶ್ವರ ಶ್ರೀಗಳ ಅನುಗ್ರಹ ಆಶೀರ್ವಾದದಿಂದ ಸನ್ಯಾಸ ದೀಕ್ಷೆ ಪಡೆದ ಶ್ರೀ ಶಿವಶಂಕರರು ನಂತರ ತಮ್ಮ ಗುರುಗಳು ಹೇಳಿದ ಪೀಠಕ್ಕೆ ಹಳೇ ಹುಬ್ಬಳ್ಳಿಯ ಶ್ರೀ ನೀಲಕಂಠೇಶ್ವರ ಮಠದ ಜಗದ್ಗುರುಗಳಾಗಿ ನೇಮಕಗೊಂಡರು ಇಂದು ಶ್ರೀ ಪೀಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ,
ಮೌನಯೋಗಿಯ ಮುದ್ದಿನ ಕಂದ -ಮೌನ ಯೋಗಿಗಳು ಶಾಂತ ಮೂರ್ತಿಗಳಾದ ಜಗದ್ಗುರು ಶ್ರೀ ಶಂಕರ ಶಿವಾಚಾರ್ಯರ ಮುದ್ದಿನ ಕಂದನಾಗಿ ಇಂದು ಶ್ರೀ ಪೀಠದ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿಯವರು ಹಿರಿಯ ಶ್ರೀಗಳಂತೆ ಆಧ್ಯಾತ್ಮ,ದಾಸೋಹ,ಶಿಕ್ಷಣ ಹೀಗೆ ತ್ರಿವಿಧ ದಾಸೋಹಕ್ಕೆ ಮಹತ್ವ ನೀಡುತ್ತಿದ್ದಾರೆ ಜೋತೆಗೆ ಸಾಮಾಜಿಕವಾಗಿಯೂ ಯೋಗದ ಕುರಿತು ಭೋಧನೆ ನೀಡುತ್ತಿದ್ದಾರೆ
ಜ್ಞಾನ ಯೋಗಿಯ ಹಾಗೂ ಮೌನಯೋಗಿಯ ಅಪ್ಪಟ್ಟ ಶಿಷ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು ತಮ್ಮ ಆಧ್ಯಾತ್ಮದ ಭೋಧನೆಯೊಂದಿಗೆ ಯೋಗಕ್ಕೂ ಮಹತ್ವ ನೀಡುತ್ತಿರುವುದು ಶ್ರೀಗಳ ಸಾಮಾಜಿಕ ಕಳ ಕಳಿ ನಿಜಕ್ಕೂ ಮೆಚ್ಚುವಂತಹದ್ದು ಆದ್ಯಾತ್ಮ ಹಾಗೂ ಯೋಗದಷ್ಟೇ ಶಿಕ್ಷಣಕ್ಕೂ ಮಹತ್ವ ನೀಡಿರುವ ಶ್ರೀಗಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಪ್ರಗತಿಯತ್ತ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ,
ಪ್ರಕಾಶ ಕುಂಬಾರ
ಬಾಗಲಕೋಟೆ